ಸಖರಾಯಪಟ್ಟಣ: ರೈತರ ಜೀವನಾಡಿ ಕೃಷಿಯಾಗಿದ್ದು ಅದಕ್ಕೆ ನಿರಾವರಿಯೇ ಬೆನ್ನೆಲುಬು. ಈ ಭಾಗದ ಅಯ್ಯನಕೆರೆಗೆ ಶಾಶ್ವತ ನೀರಾವರಿ ಯೋಜನೆಗೆ ಮಾಡಿಯೇ ತೀರುವುದಾಗಿ ಮಾಜಿ ಮುಖ್ಯ ಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿ ಗುರುವಾರ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ರೋಡ್ ಶೋ ಮೂಲಕ ಪ್ರಚಾರ ಮಾಡಿ ಹಳೇ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಅಯ್ಯನಕೆರೆ ಶಾಶ್ವತ ನೀರಾವರಿಯನ್ನು ಮಾಡಲು ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದರು.
ಕುಟುಂಬ ರಾಜಕಾರಣ ಈ ಬಾರಿ ಕೊನೆಯಾಗುವ ಕಾಲ ಬಂದಿದೆ. ಮಂಡ್ಯದಲ್ಲಿ ಅಂಬರೀಶ್ ಸತ್ತಾಗ ತೋರಿಸಿಕೊಂಡ ದುಃಖವೇನು, ಅಂಬರೀಶ್ ಅವರ ಕೊಡುಗೆ ಮಂಡ್ಯಕ್ಕೇನು ಎಂದು ಇಂದು ಹೇಳುವ ಮಾತೇನು. ಇಂತಹ ನಾಟಕಕ್ಕೆಲ್ಲ ಜನರೇ ಬುದ್ಧಿ ಕಲಿಸುತ್ತಾರೆ ಎಂದರು.
ಹಾಸನದಲ್ಲಿ ನಾಲ್ಕೈದು ನೀರಾವರಿ ಯೋಜನೆಗಳನ್ನು ಮಾಡಲಾಗುತ್ತದೆ ಎಂದು ಈಗಾಗಲೇ ಒಂದುವರೆ ಸಾವಿರ ಕೋಟಿ ರೂ. ಗಳನ್ನು ಮುಂಗಡ ಬಿಲ್ ಮಾಡಿ ಡ್ರಾ ಮಾಡಲಾಗಿದೆ. ಇದೆಲ್ಲಾ ಜನರಿಗೆ ಗೊತ್ತಿಲ್ಲವೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮನ್ನಾವಾಗದೆ ಹಾಗೂ ಹೊಸ ಸಾಲ ಕೂಡ ಸಿಗದೆ ರೈತರು ಕಂಗಾಲಾಗಿದ್ದಾರೆ. ಮೋದಿ ಸರಕಾರ ಮತ್ತೆ ಬರುವುದು ನಿಶ್ಚಿತ ಎಂದರು.
ಶಾಸಕ ಸಿ ಟಿ ರವಿ ಮಾತನಾಡಿ, ಈ ಚುನಾವಣೆ ದೇಶ ಉಳಿಸುವ ಚುನಾವಣೆಯಾಗಿದೆ. ಚೌಕಿದಾರ ಮತ್ತು ಚೋರರ ನಡುವೆ , ಪ್ರಾಮಾಣಿಕ ಮತ್ತು ಭ್ರಷ್ಟಚಾರಿಗಳ ಹಾಗೂ ರಾಷ್ಟ್ರವಾದ ಮತ್ತು ತೊಘಲಕ್ ಸಂಸ್ಕೃತಿಯ ನಡುವೆ ನಡೆಯುವ ಚುನಾವಣೆಯಾಗಿದ್ದು ದೇಶ ಬೇಕು ಎಂದರೆ ಬಿಜೆಪಿಗೆ ಮತ ಹಾಕಿ. ಈ ಚುನಾವಣೆ ನಡೆದು ಫಲಿತಾಂಶ ಬಂದ ನಂತರ ರಾಜ್ಯ ಸರಕಾರವೂ ಏನಾಗಬಹುದೋ ಗೊತ್ತಿಲ್ಲ. ಮತ್ತೇ ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗುತ್ತಾರೆ. ನೀರಾವರಿ ಯೋಜನೆಯಾದ ಗೋಂದಿ ಅಣೆಕಟ್ಟಿನಿಂದ ಅಯ್ಯನಕೆರೆ ಮತ್ತು ಹಲವಾರು ಕೆರೆ ತುಂಬಿಸುವ ಯೋಜನೆಯನ್ನು ಹೋರಾಟ ಮಾಡಿಯಾದರೂ ಮಾಡಿಯೇ ತೀರುವುದಾಗಿ ಹೇಳಿದರು.
ಬಿಜೆಪಿಯ ಮಾಜಿ ಅಧ್ಯಕ್ಷ ಕಲ್ಮರುಡಪ್ಪ ಸ್ವಾಗತಿಸಿ ಮಾತನಾಡಿದರು. ಶಾಸಕ ಬೆಳ್ಳಿ ಪ್ರಕಾಶ್, ಪ್ರಾಣೇಶ್, ಜಿಪಂ.ಸದಸ್ಯರಾದ ಬೆಳವಾಡಿ ರವೀಂದ್ರ, ವಿಜಯಕುಮಾರ್, ಮುಖಂಡರಾದ ಶ್ರೀನಿವಾಸೇಗೌಡ, ನಾಯಕ್ ಕೃಷ್ಣಸ್ವಾಮಿ, ಚಂದ್ರಶೇಖರಪ್ಪ, ಲಕ್ಷ ್ಮಣನಾಯ್ಕ, ಅನುಸೂಯಾಓಂಕಾರಪ್ಪ, ಸೌಭಾÜಗ್ಯ ಶಶಿಧರ್, ಪಾದಮನೆ ದಿನೇಶ್, ಚಿದಾನಂದ್, ಪ್ರದೀಪ್ನಾಯ್ಕ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕಲ್ಮರಡಿಮಠದ ಗೇಟಿನಿಂದ ತೆರೆದ ವಾಹನದಲ್ಲಿ ಸುಮಾರು 3 ಕಿಮೀ. ರೋಡ್ ಶೋ ನಡೆಸಲಾಯಿತು.
ಪಟ್ಟಣದಲ್ಲಿ ಗುರುವಾರ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ರೋಡ್ ಶೋ ಮೂಲಕ ಪ್ರಚಾರ ಮಾಡಿ ಹಳೇ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಅಯ್ಯನಕೆರೆ ಶಾಶ್ವತ ನೀರಾವರಿಯನ್ನು ಮಾಡಲು ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದರು.
ಕುಟುಂಬ ರಾಜಕಾರಣ ಈ ಬಾರಿ ಕೊನೆಯಾಗುವ ಕಾಲ ಬಂದಿದೆ. ಮಂಡ್ಯದಲ್ಲಿ ಅಂಬರೀಶ್ ಸತ್ತಾಗ ತೋರಿಸಿಕೊಂಡ ದುಃಖವೇನು, ಅಂಬರೀಶ್ ಅವರ ಕೊಡುಗೆ ಮಂಡ್ಯಕ್ಕೇನು ಎಂದು ಇಂದು ಹೇಳುವ ಮಾತೇನು. ಇಂತಹ ನಾಟಕಕ್ಕೆಲ್ಲ ಜನರೇ ಬುದ್ಧಿ ಕಲಿಸುತ್ತಾರೆ ಎಂದರು.
ಹಾಸನದಲ್ಲಿ ನಾಲ್ಕೈದು ನೀರಾವರಿ ಯೋಜನೆಗಳನ್ನು ಮಾಡಲಾಗುತ್ತದೆ ಎಂದು ಈಗಾಗಲೇ ಒಂದುವರೆ ಸಾವಿರ ಕೋಟಿ ರೂ. ಗಳನ್ನು ಮುಂಗಡ ಬಿಲ್ ಮಾಡಿ ಡ್ರಾ ಮಾಡಲಾಗಿದೆ. ಇದೆಲ್ಲಾ ಜನರಿಗೆ ಗೊತ್ತಿಲ್ಲವೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮನ್ನಾವಾಗದೆ ಹಾಗೂ ಹೊಸ ಸಾಲ ಕೂಡ ಸಿಗದೆ ರೈತರು ಕಂಗಾಲಾಗಿದ್ದಾರೆ. ಮೋದಿ ಸರಕಾರ ಮತ್ತೆ ಬರುವುದು ನಿಶ್ಚಿತ ಎಂದರು.
ಶಾಸಕ ಸಿ ಟಿ ರವಿ ಮಾತನಾಡಿ, ಈ ಚುನಾವಣೆ ದೇಶ ಉಳಿಸುವ ಚುನಾವಣೆಯಾಗಿದೆ. ಚೌಕಿದಾರ ಮತ್ತು ಚೋರರ ನಡುವೆ , ಪ್ರಾಮಾಣಿಕ ಮತ್ತು ಭ್ರಷ್ಟಚಾರಿಗಳ ಹಾಗೂ ರಾಷ್ಟ್ರವಾದ ಮತ್ತು ತೊಘಲಕ್ ಸಂಸ್ಕೃತಿಯ ನಡುವೆ ನಡೆಯುವ ಚುನಾವಣೆಯಾಗಿದ್ದು ದೇಶ ಬೇಕು ಎಂದರೆ ಬಿಜೆಪಿಗೆ ಮತ ಹಾಕಿ. ಈ ಚುನಾವಣೆ ನಡೆದು ಫಲಿತಾಂಶ ಬಂದ ನಂತರ ರಾಜ್ಯ ಸರಕಾರವೂ ಏನಾಗಬಹುದೋ ಗೊತ್ತಿಲ್ಲ. ಮತ್ತೇ ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗುತ್ತಾರೆ. ನೀರಾವರಿ ಯೋಜನೆಯಾದ ಗೋಂದಿ ಅಣೆಕಟ್ಟಿನಿಂದ ಅಯ್ಯನಕೆರೆ ಮತ್ತು ಹಲವಾರು ಕೆರೆ ತುಂಬಿಸುವ ಯೋಜನೆಯನ್ನು ಹೋರಾಟ ಮಾಡಿಯಾದರೂ ಮಾಡಿಯೇ ತೀರುವುದಾಗಿ ಹೇಳಿದರು.
ಬಿಜೆಪಿಯ ಮಾಜಿ ಅಧ್ಯಕ್ಷ ಕಲ್ಮರುಡಪ್ಪ ಸ್ವಾಗತಿಸಿ ಮಾತನಾಡಿದರು. ಶಾಸಕ ಬೆಳ್ಳಿ ಪ್ರಕಾಶ್, ಪ್ರಾಣೇಶ್, ಜಿಪಂ.ಸದಸ್ಯರಾದ ಬೆಳವಾಡಿ ರವೀಂದ್ರ, ವಿಜಯಕುಮಾರ್, ಮುಖಂಡರಾದ ಶ್ರೀನಿವಾಸೇಗೌಡ, ನಾಯಕ್ ಕೃಷ್ಣಸ್ವಾಮಿ, ಚಂದ್ರಶೇಖರಪ್ಪ, ಲಕ್ಷ ್ಮಣನಾಯ್ಕ, ಅನುಸೂಯಾಓಂಕಾರಪ್ಪ, ಸೌಭಾÜಗ್ಯ ಶಶಿಧರ್, ಪಾದಮನೆ ದಿನೇಶ್, ಚಿದಾನಂದ್, ಪ್ರದೀಪ್ನಾಯ್ಕ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕಲ್ಮರಡಿಮಠದ ಗೇಟಿನಿಂದ ತೆರೆದ ವಾಹನದಲ್ಲಿ ಸುಮಾರು 3 ಕಿಮೀ. ರೋಡ್ ಶೋ ನಡೆಸಲಾಯಿತು.