ಆ್ಯಪ್ನಗರ

ಚಿಕ್ಕಮಗಳೂರು: ಕೊಲೆಯಾದಾತನ ಮನೆಗೆ ಹೋಗಿ ನಾನೇ ಕೊಲೆ ಮಾಡಿದ್ದು ಎಂದ ಭೂಪ

ಗಾರೆ ಕೆಲಸದ ಹಣದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಆದರೆ, ಕೊಲೆ ಮಾಡಿದಾತ ಕೊಲೆಯಾದಾತನ ಮನೆಗೆ ಹೋಗಿ ನಾನೇ ಕೊಲೆ ಮಾಡಿದ್ದೇನೆ ಎಂದು ಹೇಳಿ ಪರಾರಿಯಾಗಿದ್ದಾನೆ. ಇಂತಹ ವಿಚಿತ್ರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯಲ್ಲಿ ನಡೆದಿದೆ.

Vijaya Karnataka Web 10 Jun 2020, 9:34 pm
ಚಿಕ್ಕಮಗಳೂರು: ಇಬ್ಬರ ಮಧ್ಯೆ ನಡೆದ ಗಾರೆ ಕೆಲಸದ ಹಣದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಹತ್ಯೆಗೈದ ಆರೋಪಿ ಕೊಲೆಯಾದಾತನ ಮನೆಗೆ ಹೋಗಿ ನಾನೇ ಕೊಲೆ ಮಾಡಿದ್ದು ಎಂದು ಹೇಳಿ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web crime (1)
ಸಾಂದರ್ಭಿಕ ಚಿತ್ರ


ಲಕ್ಕವಳ್ಳಿ ಗ್ರಾಮದ ರಾಮಯ್ಯ (65) ಕೊಲೆಯಾದ ವ್ಯಕ್ತಿ. ತೆರಚಾಲಯ್ಯ ಎಂಬಾತ ಕೊಲೆ ಮಾಡಿದ್ದು, ರಾಮಯ್ಯ ಮನೆಯವರಿಗೆ ಶವ ತೋರಿಸಿ ಪರಾರಿಯಾಗಿದ್ದಾನೆ. ಗಾರೆ ಕೆಲಸಕ್ಕೆಂದು 10 ಸಾವಿರ ರೂ. ಮುಂಗಡ ಪಡೆದುಕೊಂಡಿದ್ದರು. ಹಣ ಹಂಚಿಕೊಳ್ಳುವಾಗ ನಡೆದಿರುವ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಹಣದ ವಿಚಾರಕ್ಕಾಗಿ ರಾಮಯ್ಯನನ್ನು ಕೊಲೆಗೈದು ಗಿಡಗಂಟೆಗಳ ಪೊದೆಗೆ ತೆರಚಾಲಯ್ಯ ಬಿಸಾಡಿದ್ದ. ಬಳಿಕ ರಾಮಯ್ಯನ ಮನೆಯವರಿಗೆ ಶವ ತೋರಿಸಿ ಆರೋಪಿ ಪರಾರಿಯಾಗಿದ್ದಾನೆ. ಲಕ್ಕವಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ