ಚಿಕ್ಕಮಗಳೂರು: ಪ್ರವಾಸಕ್ಕೆ ಹೋಗಿದ್ದ ಸಂದರ್ಭ ಹೆಣ್ಣುಮಕ್ಕಳ ಜತೆ ಅಸಭ್ಯ ವರ್ತನೆ ತೋರಿದ ದೈಹಿಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ತರೀಕೆರೆ ತಾಲೂಕು ಹುಣಸಘಟ್ಟದ ಖಾಸಗಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಕುಮಾರಸ್ವಾಮಿ ಇತ್ತೀಚಿಗೆ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದು, ವಿದ್ಯಾರ್ಥಿನಿಯು ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಳು.
ಕೆರಳಿದ ಪೋಷಕರು ಶಾಲೆಗೆ ನುಗ್ಗಿ ಶಿಕ್ಷಕನಿಗೆ ಹಿಗ್ಗಾಮುಗ್ಗ ಥಳಿಸಿದ್ದರು. ಪೊಲೀಸ್ ಠಾಣೆಯಲ್ಲಿ ಪೋಷಕರ ಬಳಿ ಕ್ಷಮೆ ಕೇಳಿದ್ದ ಶಿಕ್ಷಕ ಲಕ್ಷಾಂತರ ಹಣ ಖರ್ಚು ಮಾಡಿದ್ದ ಹೊರ ಬಂದಿದ್ದ. ಅಲ್ಲದೇ ಈತನ ವಿರುದ್ಧ ರಾಜಕೀಯ ಒತ್ತಡದಿಂದ ಕಾನೂನು ಕ್ರಮ ಜರುಗಿಸಲು ಪಿಎಸೈ ರಮೇಶ್ ಹಿಂದೇಟು ಹಾಕಿದ್ದರು.
ಈ ವಿಚಾರ ತಿಳಿದ ಸ್ಥಳೀಯರು ಎಸ್ಪಿ ಅಣ್ಣಾಮಲೈ ಗೆ ದೂರು ನೀಡಿದ್ದಾರೆ. ಎಸ್ಪಿಯ ಖಡಕ್ ಎಚ್ಚರಿಕೆ ನಂತರ ಬುಧವಾರ ತಡರಾತ್ರಿ ಆರೋಪಿಯನ್ನು ಬಂಧಿಸಿ, ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.