ಆ್ಯಪ್ನಗರ

ಐಷಾರಾಮಿ ಕಾರುಗಳಲ್ಲಿ ಪ್ರವಾಸ: ಬಂದವರಿಗೆ ಪೊಲೀಸ್‌ ಎಸ್ಕಾರ್ಟ್‌!

ಚಿಕ್ಕಮಗಳೂರು ರಸ್ತೆಯಲ್ಲಿ ಸೋಮವಾರ ಸಾಲುಸಾಲು ಐಶಾರಾಮಿ ಕಾರುಗಳು ಪ್ರತ್ಯಕ್ಷವಾದವು. ಈ ಕಾರುಗಳಿಗೆ ರಸ್ತೆಯುದ್ದಕ್ಕೂ ಚಿಕ್ಕಮಗಳೂರು ಪೊಲೀಸರು ಕಾರುಗಳಿಗೆ ರಕ್ಷಣೆ ನೀಡಿದರು. ಏಕೆ ಎಸ್ಕಾರ್ಟ್‌ ಕೊಡುತ್ತಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ಸ್ಪಷ್ಟ ಉತ್ತರ ಸಿಕ್ಕಲಿಲ್ಲ.

Vijaya Karnataka Web 17 Feb 2020, 8:03 pm
ಚಿಕ್ಕಮಗಳೂರು: ಕೋಟ್ಯಂತರ ರೂಪಾಯಿ ಬೆಲೆಯ ಐಷಾರಾಮಿ ಕಾರುಗಳವು. ಬಂದವರು ಯಾರೆಂದು ಯಾರಿಗೂ ಮಾಹಿತಿ ಇಲ್ಲ. ಮುಂದಕ್ಕೆ ಹೊಯ್ಸಳ ವಾಹನ, ಹಿಂದಕ್ಕೆ ಮತ್ತೊಂದು ಮಹೀಂದ್ರ ಬುಲೆರೊ ಪೊಲೀಸ್‌ ವಾಹನ!

ಐಷಾರಾಮಿ ಕಾರುಗಳಲ್ಲಿ ಪ್ರವಾಸ ಬಂದವರಿಗೆ ಪೊಲೀಸರು ಏಕೆ ಎಸ್ಕಾರ್ಟ್‌ ಕೊಡುತ್ತಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ಸ್ಪಷ್ಟ ಉತ್ತರ ಸಿಕ್ಕಲಿಲ್ಲ. ಬಣ್ಣ ಬಣ್ಣದ ಹೈ ಎಂಡ್‌ ಕಾರುಗಳನ್ನು ಕಂಡು ಜನ ಫೋಟೊ, ವಿಡಿಯೊ ಮಾಡಿಕೊಳ್ಳಲು ಮುಗಿಬಿದ್ದರು. ಭಾನುವಾರ ಬಂದಿದ್ದ ಕಾರುಗಳು, ಸೋಮವಾರ ಮಧ್ಯಾಹ್ನದ ಹೊತ್ತಿಗೆ ವಾಪಸ್ಸಾದವು.

ಜಿಲ್ಲೆಯ ಖಾಸಗಿ ರೆಸಾರ್ಟ್‌ವೊಂದಕ್ಕೆ ಇಂತಹ ಲಕ್ಸುರಿ ಕಾರುಗಳಲ್ಲಿ ಬಂದಿದ್ದವರಿಗೆ ಪೊಲೀಸರು ಭದ್ರತೆ ನೀಡಿದ್ದು ಅನುಮಾನ ಹುಟ್ಟುಹಾಕಿದೆ. ಮುಳ್ಳಯ್ಯನಗಿರಿ, ಬಾಬಾ ಬುಡನ್‌ಗಿರಿ, ಇನಾಂ ದತ್ತಪೀಠ ಭಾಗದಲ್ಲಿ ಪ್ರವಾಸ ಮಾಡಿದ್ದು, ಫೆರಾರಿ ಓನರ್ಸ್‌ ಕ್ಲಬ್‌ ಸದಸ್ಯರು ಎನ್ನಲಾಗಿದೆ. ಇವರೆಲ್ಲ ಚೆನ್ನೈನಿಂದ ಹೊರಟು ಪುಣೆ ಮಾರ್ಗದಲ್ಲಿ ಬಂದು ಇಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಮಾಡಿದ್ದರು ಎಂದು ಹೇಳಲಾಗಿದೆ.

ಐಷಾರಾಮಿ ಕಾರುಗಳಲ್ಲಿ ಬಂದವರಿಗೆ ಎಸ್ಕಾರ್ಟ್‌ ಕೊಡಬೇಕೆ ಎಂದು ಪೊಲೀಸರನ್ನು ಪ್ರಶ್ನಿಸಿದರೆ, ಇಲ್ಲಇಲ್ಲ, ನಾವು ಅವರಿಗೆ ಎಸ್ಕಾರ್ಟ್‌ ಕೊಟ್ಟಿಲ್ಲ. ಜನ ಕಾರು ನೋಡಲು ಮುಗಿ ಬೀಳ್ತಿದ್ರು. ಟ್ರಾಫಿಕ್‌ ನಿಯಂತ್ರಿಸಲು ಈ ಕ್ರಮ ಕೈಗೊಂಡಿದ್ದೆವು ಎಂದು ಹೇಳಿದ್ದಾರೆ.

ಐಷಾರಾಮಿ ಕಾರುಗಳ ಆಗಮನದಿಂದ ನಿರ್ಗಮನದವರೆಗೂ ಒಂದು ಹೊಯ್ಸಳ ವಾಹನ ಮತ್ತು ಪೊಲೀಸ್‌ ಜೀಪ್‌ ಜತೆಯಲ್ಲಿದ್ದವು. ಸೋಮವಾರ ಬೆಳಗ್ಗೆ ಆ ಕಾರುಗಳು ಹೊರಟಾಗಲೂ ಪೊಲೀಸ್‌ ವಾಹನಗಳು ಜಿಲ್ಲೆಯ ಗಡಿ ದಾಟಿಸಿ ಬಂದಿವೆ. ನಿಜವಾಗಿಯೂ ಈ ಕಾರುಗಳಲ್ಲಿಬಂದಿದ್ದು ಯಾರು? ಅವರಿಗೇಕೆ ಎಸ್ಕಾರ್ಟ್‌ ಕೊಡಲಾಗಿತ್ತು ಎಂಬ ಬಗ್ಗೆ ಪೊಲೀಸ್‌ ಇಲಾಖೆಯೇ ಸ್ಪಷ್ಟಪಡಿಸಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ