ಆ್ಯಪ್ನಗರ

ಹೆಲ್ಮೆಟ್‌ ಧರಿಸದ ಬೈಕ್‌ ಜಾಥಾಕ್ಕೆ ಪೊಲೀಸ್‌ ರಕ್ಷಣೆ!

ದತ್ತಜಯಂತಿಗೆ ಪ್ರಚಾರ ನೀಡುವ ಉದ್ದೇಶದಿಂದ ಸಂಘ ಪರಿವಾರದ ಕಾರ‍್ಯಕರ್ತರು ಹೆಲ್ಮೆಟ್‌ ಧರಿಸದೆ ಕಾನೂನು ಉಲ್ಲಂಘಿಸಿದ ಘಟನೆ ಬುಧವಾರ ನಡೆದಿದೆ.

Vijaya Karnataka 30 Nov 2017, 5:00 am

ಚಿಕ್ಕಮಗಳೂರು:ದತ್ತಜಯಂತಿಗೆ ಪ್ರಚಾರ ನೀಡುವ ಉದ್ದೇಶದಿಂದ ಸಂಘ ಪರಿವಾರದ ಕಾರ‍್ಯಕರ್ತರು ಹೆಲ್ಮೆಟ್‌ ಧರಿಸದೆ ಕಾನೂನು ಉಲ್ಲಂಘಿಸಿದ ಘಟನೆ ಬುಧವಾರ ನಡೆದಿದೆ.

ಹೆಲ್ಮೆಟ್‌ ಧರಿಸದೆ ಬೈಕ್‌ ಚಾಲನೆ ಮಾಡುವವರನ್ನು ಪ್ರತಿನಿತ್ಯ ಹುಡುಕಿ ಹುಡುಕಿ ಕೇಸು ದಾಖಲಿಸುವ, ದಂಡ ವಸೂಲಿ ಮಾಡುವ ಪೊಲೀಸರೇ ಹೆಲ್ಮೆಟ್‌ ಧರಿಸದ ಬೈಕ್‌ ಸವಾರರಿಗೆ ಬುಧವಾರ ರಕ್ಷಣೆ ಕೊಟ್ಟುಕೊಂಡು ಹೋಗಿರುವುದು ಚರ್ಚೆಗೆ ಗ್ರಾಸವಾಗಿದೆ.

ವಿಶ್ವ ಹಿಂದು ಪರಿಷತ್‌, ಬಜರಂಗದಳ ನೇತೃತ್ವದಲ್ಲಿ ನಗರದ ರತ್ನಗಿರಿ ರಸ್ತೆಯ ಶ್ರೀರಾಮ ದೇವಸ್ಥಾನ ಆವರಣದಿಂದ ಆರಂಭವಾದ ಬೈಕ್‌ ಜಾಥಾ ಕೆಇಬಿ ಸರ್ಕಲ್‌, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ಸರ್ಕಲ್‌, ಎಂ.ಜಿ.ರಸ್ತೆ, ಆಜಾದ್‌ ಪಾರ್ಕ್‌, ಕೋಟೆ, ಮಲ್ಲಂದೂರು ಮುಖ್ಯರಸ್ತೆ, ಉಪ್ಪಳ್ಳಿ, ವಿಜಯಪುರ ಮುಖ್ಯ ರಸ್ತೆಯಲ್ಲಿ ಸಾಗಿತು.

ಕೋರ್ಟ್‌ ಆದೇಶದಂತೆ ಹೆಲ್ಮೆಟ್‌ ಕಡ್ಡಾಯಗೊಳಿಸಿ ಆದೇಶಿಸಲಾಗಿದೆ. ನಗರಾದ್ಯಂತ ಪೊಲೀಸರು ಪ್ರತಿನಿತ್ಯ ಹೆಲ್ಮೆಟ್‌ ಧರಿಸದವರಿಗೆ ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ದತ್ತಜಯಂತಿ ಪ್ರಚಾರದ ಬೈಕ್‌ ಜಾಥಾದಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಂದಿ ಹೆಲ್ಮೆಟ್‌ ಧರಿಸಿರಲಿಲ್ಲ. ಇವರ ವಿರುದ್ಧ ದಂಡ ಅಥವಾ ಪ್ರಕರಣ ದಾಖಲಿಸುವುದಿರಲಿ, ಪೊಲೀಸರೇ ರಕ್ಷಣೆ ಕೊಡುತ್ತಾ ಸಾಗಿದರು.

ಉಳಿದೆಲ್ಲ ದಿನಗಳಲ್ಲಿ ಕಟ್ಟುನಿಟ್ಟಾಗಿ ಕಾನೂನು, ನಿಯಮ ಪಾಲಿಸಲು ಕ್ರಮ ಕೈಗೊಳ್ಳುವ ಪೊಲೀಸರು, ಸಂಘ ಸಂಸ್ಥೆಗಳ ಕಾರ‍್ಯಕರ್ತರು ನಡೆಸುವ ಬೈಕ್‌ ಜಾಥಾದಂತಹ ಸಂದರ್ಭ ವಿನಾಯಿತಿ ನೀಡುವುದೇಕೆ ಎಂಬ ಪ್ರಶ್ನೆ ಜನರದ್ದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ