ಆ್ಯಪ್ನಗರ

ಸಮುದಾಯ ಅಭಿವೃದ್ಧಿಗೆ ರಾಜಕೀಯ ಪ್ರವೇಶ ಅನಿವಾರ‍್ಯ

ದೇಶದಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗದವರು ಸುಮಾರು ಶೇ.85ರಷ್ಟು ಜನಸಂಖ್ಯೆಯಿದ್ದು, ಅದಕ್ಕೆ ಅನುಗುಣವಾಗಿ ಲೋಕಸಭೆ ಪ್ರವೇಶಮಾಡಲು ಬೇಕಾದ ಮೀಸಲಾತಿ ಹಕ್ಕನ್ನು ನಿಗದಿಪಡಿಸಬೇಕು ಎಂದು ಕಾರ್ಕಳದ ಎಲ್‌ಐಸಿ ವ್ಯವಸ್ಥಾಪಕ ಬಿ.ಡಿ.ಸದಾಶಿವ ಹೇಳಿದರು.

Vijaya Karnataka 29 Apr 2019, 5:00 am
ಬಾಳೆಹೊನ್ನೂರು: ದೇಶದಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗದವರು ಸುಮಾರು ಶೇ.85ರಷ್ಟು ಜನಸಂಖ್ಯೆಯಿದ್ದು, ಅದಕ್ಕೆ ಅನುಗುಣವಾಗಿ ಲೋಕಸಭೆ ಪ್ರವೇಶಮಾಡಲು ಬೇಕಾದ ಮೀಸಲಾತಿ ಹಕ್ಕನ್ನು ನಿಗದಿಪಡಿಸಬೇಕು ಎಂದು ಕಾರ್ಕಳದ ಎಲ್‌ಐಸಿ ವ್ಯವಸ್ಥಾಪಕ ಬಿ.ಡಿ.ಸದಾಶಿವ ಹೇಳಿದರು.
Vijaya Karnataka Web CKM-28bhr2


ಅವರು ಸಮೀಪದ ಬನ್ನೂರು ಗ್ರಾಮ ಪಂಚಯಿತಿ ವ್ಯಾಪ್ತಿಯ ಶೆಟ್ಟಿಹಿತ್ಲು ಸಮುದಾಯ ಭವನದಲ್ಲಿ ಬನ್ನೂರು ಅರಣ್ಯಹಕ್ಕು ಸಮಿತಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 128ನೇ ಜಯಂತಿ ಕಾರ್ಯಕ್ರಮದಲ್ಲಿ ದಿಸ್ಕೂಚಿ ಭಾಷಣ ಮಾಡಿದರು.

ಸ್ವಾತಂತ್ರ್ಯ ಬಂದು 70ವರ್ಷ ಕಳೆದರೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಮರೀಚಿಕೆಯಾಗಿದೆ. ಸಮುದಾಯದ ಅಭಿವೃದ್ಧಿಗಾಗಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಡಾ.ಅಂಬೇಡ್ಕರ್‌ ಅವರು ಶಿಕ್ಷ ಣ, ಸಂಘಟನೆ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಕರೆನೀಡಿದ್ದು, ದುಶ್ಚಟವನ್ನು ತ್ಯಜಿಸಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸಮಾಜದ ಅಭಿವೃದ್ಧಿಯ ಚಿಂತನೆಗೆ ನಿತ್ಯ ಒಂದು ಗಂಟೆ ಸಮಯವನ್ನು ಮೀಸಲಿಡಬೇಕೆಂದರು.

ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರ ಸಂವಿಧಾನ ತಿದ್ದುಪಡಿ ಹೇಳಿಕೆಗೆ ಮಹತ್ವ ನೀಡಬೇಕಾಗಿಲ್ಲ ಎಂದರು.

ಬನ್ನೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಎಚ್‌.ಎಂ.ಪ್ರಶಾಂತ್‌ ಮಾತನಾಡಿ, ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ವಿಶ್ವಕ್ಕೇ ಮಾದರಿಯಾದ ಸಂವಿಧಾನ ನೀಡಿದ ಮಹಾನ್‌ ಶಕ್ತಿಯಾಗಿದ್ದರು. ಶೋಷಣೆ ವಿರುದ್ಧ ಹೋರಾಟ ನಡೆಸಿದ ದೀಮಂತ ವ್ಯಕ್ತಿಯಾಗಿದ್ದರು ಎಂದರು.

ಶೃಂಗೇರಿ ಕ್ಷೇತ್ರ ವಾಲ್ಮೀಕಿ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಮಾತನಾಡಿ, ಸಂವಿಧಾನಬದ್ಧವಾಗಿ ನೀಡಿದ ಹಕ್ಕನ್ನು ಪಡೆಯಲು ಹೋರಾಟ ಮಾಡಬೇಕಾದ ಸ್ಥಿತಿ ಉಂಟಾಗಿರುವುದು ವಿಷಾದನೀಯ. ಹಿಂದುಳಿದವರ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕೆಂದರು.

ಮಡಂತ್ಯಾರು ಎಸ್‌ಸ್ಸಿ ಡಿಸಿಸಿ ಬ್ಯಾಂಕ್‌ ಅಸಿಸ್ಟೆಂಟ್‌ ಮ್ಯಾನೇಜರ್‌ ರಾಮು ಮಾತನಾಡಿ, ಅಂಬೇಡ್ಕರ್‌ ಅವರು ವಿಶ್ವದ ಎಲ್ಲ ಧರ್ಮದ ಬಗ್ಗೆ ಅಧ್ಯಯನ ಮಾಡಿ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಪಡೆದಿದ್ದರು. ಸಮಾಜದಲ್ಲಿ ಧರ್ಮದ ವಿಷಬೀಜ ಬಿತ್ತುವ ಬದಲು ಪ್ರೀತಿಯ ಸಂದೇಶ ಸಾರಿ ಸಾಮರಸ್ಯ ಬೆಳೆಸಬೇಕಿದೆ ಎಂದರು.

ಡಿಎಸ್‌ಎಸ್‌ಜಿಲ್ಲಾ ಸಂಚಾಲಕ ಡಿ.ರಾಮು, ಬೆಳ್ತಂಗಡಿ ಸೇಂಟ್‌ ಥೋಮಸ್‌ ಕಾಲೇಜು ಉಪನ್ಯಾಸಕ ಬಿ.ಎಸ್‌.ಶ್ರೀಕಾಂತ್‌, ಕೊಪ್ಪ ಲ್ಯಾಂಪ್‌ ಸೊಸೈಟಿಯ ಜಯರಾಮ್‌, ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ಉಪನ್ಯಾಸಕ ಬಿ.ಎಸ್‌.ಶ್ರೀನಾಥ್‌, ಅಶೋಕ ಟಿ, ಆಶಾ, ಮಂಗಳೂರು ವಿಶ್ವವಿದ್ಯಾನಿಲಯದ ರೀಸರ್ಚ್‌ ಅಸಿಸ್ಟೆಂಟ್‌ ಡಾ.ರವಿರಾಜ್‌, ಬನ್ನೂರು ಗ್ರಾ.ಪಂ.ಉಪಾಧ್ಯಕ್ಷೆ ಶಶಿಕಲಾ ಮಾತನಾಡಿದರು. ಸಮಾರಂಭದ ಅಧ್ಯಕ್ಷ ತೆಯನ್ನು ಬನ್ನೂರು ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಬಿ.ಡಿ.ಈರಪ್ಪ ವಹಿಸಿದ್ದರು.

ತಾ.ಪಂ.ಮಾಜಿ ಅಧ್ಯಕ್ಷೆ ಸುಂದರಿ, ಗ್ರಾ.ಪಂ.ಸದಸ್ಯೆ ದೀಪಾಶ್ರೀ, ಬಿ.ಡಿ.ಸಂಜೀವ, ಜಕ್ಕಣಕ್ಕಿ ಸತೀಶ್‌, ಕಿರಣ್‌ ಜಕ್ಕಣಕ್ಕಿ, ಮಾಗುಂಡಿ ಶಾಲೆ ಶಿಕ್ಷ ಕಿ ಅಂಬಿಕಾ, ಡಿ.ಎಸ್‌.ಎಸ್‌.ಅಧ್ಯಕ್ಷ ರಘು, ರಕ್ಷಿತ್‌, ಮಣಬೂರು ಶಿವಪ್ಪ, ಮಾಲ್ಗೋಡು ಗಂಗಯ್ಯ ಸೇರಿದಂತೆ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಬೆಳಗ್ಗೆ ಗ್ರಾಮೀಣ ಕ್ರೀಡಾಕೂಟ ಹಾಗೂ ಸಭಾ ಕಾರ್ಯಕ್ರಮದ ನಂತರ ಗೋವರ್ಧನ್‌ ಮತ್ತು ತಂಡದವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ರಿಶಿಕಾ ಮತ್ತು ತಂಡದವರು ಪ್ರಾರ್ಥಿಸಿ, ನಿಶಾ ನಿರೂಪಿಸಿದರು. ಶ್ರೀಕಾಂತ್‌ ಸ್ವಾಗತಿಸಿ, ಆಶಾ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ