ಆ್ಯಪ್ನಗರ

ದುಡ್ಡಿಲ್ಲದೆ ರಾಜಕೀಯ ಕಷ್ಟ: ನಿಂಗಯ್ಯ

ಪ್ರಜಾಪ್ರಭುತ್ವ ಸೋತರೆ ದೇಶಕ್ಕೆ ಬಾರಿ ನಷ್ಟವಾಗುತ್ತದೆ ಎಂದು ಮೂಡಿಗೆರೆ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಆತಂಕ ವ್ಯಕ್ತಪಡಿಸಿದರು.

Vijaya Karnataka 3 Jun 2019, 5:00 am
ಆಲ್ದೂರು : ಪ್ರಜಾಪ್ರಭುತ್ವ ಸೋತರೆ ದೇಶಕ್ಕೆ ಬಾರಿ ನಷ್ಟವಾಗುತ್ತದೆ ಎಂದು ಮೂಡಿಗೆರೆ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಆತಂಕ ವ್ಯಕ್ತಪಡಿಸಿದರು.
Vijaya Karnataka Web CKM-2ALDUR2


ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಅಂಬೇಡ್ಕರ್‌ ಹೋರಾಟ ವೇದಿಕೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಡಾ.ಅಂಬೇಡ್ಕರ್‌ ಜನ್ಮ ದಿನಾಚಾರಣೆ ಹಾಗೂ ಪ್ರಜಾಪ್ರಭುತ್ವ ಭಾರತದಲ್ಲಿ ಸಂವಿಧಾನ ಹಾಗೂ ರಾಜಕೀಯ ಪಕ್ಷಗಳ ನಡುವಿನ ಬಿಕ್ಕಟ್ಟುಗಳು ಮತ್ತು ಪರಿಹಾರ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ದುಡ್ಡಿಲ್ಲದೆ ರಾಜಕೀಯ ಮಾಡುವುದು ಕಷ್ಟ. ನನ್ನ ಮಗನನ್ನು ಜಿ.ಪಂ. ಚುನಾವಣೆಯಲ್ಲಿ ಹಣವಿಲ್ಲದೆ

ಗೆಲ್ಲಿಸಲು ಸಾಧ್ಯವಾಗಲಿಲ್ಲ. ಇಂದಿನ ದಿನಗಳಲ್ಲಿ ತಮ್ಮ ಅಮೂಲ್ಯ ಮತಗಳನ್ನು ಮಾರಿಕೊಳ್ಳುವುದು ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ದೇಶ ಅಪಾಯದಲ್ಲಿದೆ ಎಲ್ಲಾ ಹಂತದಲ್ಲಿಯೂ ಜನರನ್ನು ಎಚ್ಚರಿಸುವ ಅವಶ್ಯಕತೆ ಇದೆ. ಸಂವಿಧಾನ ರಕ್ಷಣೆಗೆ ಎಲ್ಲರೂ ಒಂದಾಗಬೇಕು ಗಾಂದಿಜೀಯವರ ತತ್ವಗಳನ್ನು ಅಳವಡಿಸಿಕೊಳ್ಳ ಬೇಕು ಎಂದರು.

ದಲಿತ ಸಂಘರ್ಷ ಸಮಿತಿಯ ಹಿರಿಯ ರಾಜ್ಯ ನಾಯಕ ಕೋಲಾರದ ಎನ್‌.ವೆಂಕಟೇಶ್‌ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಹೆಚ್ಚು ಅಪಾಯವನ್ನು ಎದುರಿಸುತ್ತಿದ್ದು ಇದಕ್ಕೆ ಆಳುವ ರಾಜಕೀಯ ಪಕ್ಷಗಳು ಸಂವಿಧಾನ ವಿರೋಧಿ ಧೋರಣೆ ತಳೆದಿರುವುದೇ ಕಾರಣ. ದೇಶದಲ್ಲಿ ಮನುವಾದಿಗಳು, ಸಂವಿಧಾನ ವಿರೋಧಿಗಳು ಅಧಿಕಾರ ಹಿಡಿದಿದ್ದಾರೆ. ಸಂವಿಧಾನದ ಸಂಪೂರ್ಣ ಜಾರಿ ಯಾವುದೇ ಪಕ್ಷಕ್ಕೂ ಬೇಕಾಗಿಲ್ಲ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳ ಪಾತ್ರ ಹಿರಿದಾಗಿದ್ದು ಅದು ಕ್ಷೀಣಿಸುತ್ತಿರುವುದು ಆರೋಗ್ಯಕರವಲ್ಲ. ಇದನ್ನು ಮತದಾರರು ಆತ್ಮಾವಲೋಕನ ಮಾಡಿಕೊಳ್ಳಲು ಸರಿಯಾದ ಸಮಯ ಎಂದರು.

ಅಂಬೇಡ್ಕರ್‌ ಹೊರಾಟ ವೇದಿಕೆಯ ಅಧ್ಯಕ್ಷ ನವರಾಜ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಲ್ದೂರು ಗ್ರಾ.ಪಂ. ಅಧ್ಯಕ್ಷೆ ಪ್ರತಿಭಾನವೀನ್‌ ಕಾರ್ಯಕ್ರಮ ಉದ್ಘಾಟಿಸಿದರು. ಗೌರವಾಧ್ಯಕ್ಷ ಹೊನ್ನಪ್ಪ ಪ್ರಾಸ್ತವಿಕ ಮಾತನಾಡಿದರು.

ಸಿಪಿಐ ಎಂಎಲ್‌ನ ರಾಜ್ಯಕಾರ್ಯದರ್ಶಿ ರುದ್ರಯ್ಯ. ತಾ.ಪಂ. ಸದಸ್ಯೆ ದೀಪಾನಾಗೇಶ್‌, ಡಿಎಸ್‌ಎಸ್‌ ಮುಖಂಡ ರಾಜರತ್ನಂ, ಸತ್ತಿಹಳ್ಳಿ ಗ್ರಾ.ಪಂ. ಅಧ್ಯಕ್ಷ ರಮೇಶ್‌, ಸಿಪಿಐ ಮುಖಂಡ ದೇವರಹಳ್ಳಿ ಉಮೇಶ್‌ ಮತ್ತಿತರರಿದ್ದರು.

ಕುಮಾರ್‌ ಹೆಡದಾಳ್‌ ಸ್ವಾಗತಿಸಿ, ನಾಗೇಶ್‌ ನಿರೂಪಿಸಿದರು. ಹೋರಾಟ ವೇದಿಕೆ ಉಪಾಧ್ಯಕ್ಷ ಗಣೇಶ್‌ ವಂದಿಸಿದರು.

ಮೂಡಿಗೆರೆ ಪ.ಪಂ.ಗೆ ಆಯ್ಕೆಯಾದ ಎಚ್‌.ಪಿ.ರಮೇಶ್‌ ಮತ್ತು ಕೋಲಾರ ವೆಂಕಟೇಶ್‌ ಅವರನ್ನು ಗೌರವಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ