ಆ್ಯಪ್ನಗರ

ಮತಗಟ್ಟೆ ಕಡೆ ಹೆಜ್ಜೆಹಾಕಿದ ಅಧಿಕಾರಿ, ಸಿಬ್ಬಂದಿ

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏ.18ರಂದು ಮತದಾನ ನಡೆಯಲಿದ್ದು ನಗರದ ಐಡಿಎಸ್‌ಜಿ ಕಾಲೇಜಿನ ಆವರಣದಲ್ಲಿ ಮಸ್ಟರಿಂಗ್‌ ಕಾರ್ಯ ಬುಧವಾರ ನಡೆಯಿತು.

Vijaya Karnataka 18 Apr 2019, 5:00 am
ಚಿಕ್ಕಮಗಳೂರು : ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏ.18ರಂದು ಮತದಾನ ನಡೆಯಲಿದ್ದು ನಗರದ ಐಡಿಎಸ್‌ಜಿ ಕಾಲೇಜಿನ ಆವರಣದಲ್ಲಿ ಮಸ್ಟರಿಂಗ್‌ ಕಾರ್ಯ ಬುಧವಾರ ನಡೆಯಿತು.
Vijaya Karnataka Web CKM-17RUDRAP3


ತಾಲೂಕಿನ ಎಲ್ಲ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ತಮಗೆ ನಿರ್ವಹಿಸಿದ ಜವಾಬ್ದಾರಿಯನ್ನು ವಹಿಸಿಕೊಂಡು ಕೊರಳಿಗೆ ಗುರುತಿನ ಚೀಟಿ ಹಾಕಿಕೊಂಡು, ಮತಯಂತ್ರ ಹಾಗೂ ವಿವಿ ಪ್ಯಾಟ್‌ ಹೆಗಲಿಗೇರಿಸಿಕೊಂಡು ಮತಗಟ್ಟೆಗಳ ದಾರಿ ಹಿಡಿದರು.

ಇದಕ್ಕೂ ಮುನ್ನ ಕಾಲೇಜ್‌ ಕೊಠಡಿಯಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ, ಸಿಬ್ಬಂದಿಗೆ ತಾಲೂಕು ಚುನಾವಣಾಧಿಕಾರಿಗಳಿಂದ ಅಗತ್ಯ ಮಾಹಿತಿ, ಯಾವುದೇ ಚುನಾವಣೆ ಪ್ರಕ್ರಿಯೆ ಸಂಬಂಧ ಸಂಶಯವಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆಯಾ ಮತಗಟ್ಟೆಗೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿ ಮಧ್ಯಾಹ್ನದವರೆಗೂ ತಮಗೆ ನಿಯೋಜಿಸಿರುವ ಊರು, ಮತಗಟ್ಟೆ, ಬಸ್ಸು, ಜೀಪು, ಮಿನಿ ಬಸ್‌ಗಳ ವಿವರ, ಮಾರ್ಗ ಮತ್ತಿತರೆ ಅಧಿಕೃತ ಲಿಖಿತ ವಿವರಗಳನ್ನು ಮೇಲಧಿಕಾರಿಗಳಿಂದ ಪಡೆದುಕೊಂಡರು. ಮಸ್ಟರಿಂಗ್‌ ಹಿನ್ನೆಲೆಯಲ್ಲಿ ಚುನಾವಣೆ ಕರ್ತವ್ಯ ನಿರತ ಎಲ್ಲ ಅಧಿಕಾರಿ, ಸಿಬ್ಬಂದಿ, ಪೊಲೀಸ್‌, ಗೃಹ ರಕ್ಷಕ ದಳ ಸಿಬ್ಬಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಕೇಂದ್ರದಿಂದ ನಗರ ಹಾಗೂ ಗ್ರಾಮೀಣ ಮತಗಟ್ಟೆಗಳಿಗೆ ಮತಯಂತ್ರ ಮತ್ತು ವಿವಿ ಪ್ಯಾಟ್‌ ಕೊಂಡೊಯ್ಯಲು ಕೆಎಸ್ಸಾರ್ಟಿಸಿ ಬಸ್‌ಗಳು, ಖಾಸಗಿ ಬಸ್‌, ಜೀಪುಗಳು ಕಾಲೇಜ್‌ ಆವರಣದಲ್ಲಿ ಸಜ್ಜಾಗಿ ನಿಂತಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ