ಆ್ಯಪ್ನಗರ

ಬಹುರೂಪಿ ಪಠ್ಯ ರಚನೆ

ಇಂದಿನ ಸಾಂಸ್ಕೃತಿಕ ಜಗತ್ತಿನೊಳಗಡೆ ಸಂಶೋಧನೆ ನಡೆಸಿ, ಏಕರೂಪಿ ಆರೋಪದ ಎದುರು ಬಹುರೂಪಿ ಪಠ್ಯಗಳನ್ನು ಜನರ ಎದುರಿಗಿಡಬೇಕಾದ ಸವಾಲು ವಿಮರ್ಶಕರ ಮುಂದಿದೆ ಎಂದು ವಿಮರ್ಶಕಿ ಡಾ.ವಿನಯಾ ಒಕ್ಕುಂದ ಹೇಳಿದರು.

Vijaya Karnataka 4 Sep 2019, 5:00 am
ಶಿವಮೊಗ್ಗ: ಇಂದಿನ ಸಾಂಸ್ಕೃತಿಕ ಜಗತ್ತಿನೊಳಗಡೆ ಸಂಶೋಧನೆ ನಡೆಸಿ, ಏಕರೂಪಿ ಆರೋಪದ ಎದುರು ಬಹುರೂಪಿ ಪಠ್ಯಗಳನ್ನು ಜನರ ಎದುರಿಗಿಡಬೇಕಾದ ಸವಾಲು ವಿಮರ್ಶಕರ ಮುಂದಿದೆ ಎಂದು ವಿಮರ್ಶಕಿ ಡಾ.ವಿನಯಾ ಒಕ್ಕುಂದ ಹೇಳಿದರು.
Vijaya Karnataka Web polygonal text structure
ಬಹುರೂಪಿ ಪಠ್ಯ ರಚನೆ


ನಗರದ ಜಿಲ್ಲಾ ಸರಕಾರಿ ನೌಕರರ ಸಭಾಂಗಣದಲ್ಲಿಅಹರ್ನಿಶಿ ಪ್ರಕಾಶನ ಮತ್ತು ಹೊಂಗಿರಣ ಸಂಸ್ಥೆಯ ಸಹಯೋಗದಲ್ಲಿಶನಿವಾರ ಏರ್ಪಡಿಸಿದ್ದ ಡಾ.ಪುರುಷೋತ್ತಮ ಬಿಳಿಮಲೆ ಅವರ ಕನ್ನಡ ಕಥನಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ಪಠ್ಯಗಳ ಮರುಪಠ್ಯೀಕರಣವನ್ನು ಅದ್ಭುತವಾಗಿ ಇಲ್ಲಿತೋರಿಸಲಾಗಿದೆ. ಇಲ್ಲಿರುವ ಒಂಭತ್ತು ಲೇಖನಗಳಲ್ಲಿಎರಡು ಲೇಖನಗಳು ಕನ್ನಡದ ಮೂಲಕ ಇಡೀ ಲೋಕದೃಷ್ಟಿಯನ್ನು ರೂಪಿಸಿಕೊಳ್ಳಬಹುದಾದ ಕ್ರಮ ಹೇಗೆ ಎಂಬುದನ್ನು, ಮೂರು ಲೇಖನಗಳು ಸಂಶೋಧನೆಯ ತಾತ್ವಿಕತೆಯನ್ನು ಅನುಸಂಧಾನಗೊಳಿಸುವ ವಿಧಾನ ಯಾವುದಾಗಿರಬೇಕು ಎಂಬುದನ್ನು ಹೇಳಿದೆ ಎಂದರು.

ವಿದ್ವಾಂಸ ಪೊ›.ಆರ್‌.ವಿ.ಸುಂದರಂ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಒಂದು ಸಂಶೋಧನೆಯನ್ನು ಹೇಗೆ ಮಾಡಬೇಕು ಎಂಬುದನ್ನು ಅತ್ಯಂತ ಸರಳವಾಗಿ, ಅರ್ಥಪೂರ್ಣವಾಗಿ ಲೇಖಕರು ಇಲ್ಲಿಹೇಳಿದ್ದಾರೆ. ಜಲಸಂಪನ್ಮೂಲಗಳನ್ನು ಕಥನ ರೂಪಕ್ಕೆ ತರುವ, ಭಾರತದ ಕಥೆಗಳ ವೈವಿಧ್ಯವನ್ನು ಬೆರಗುಮೂಡಿಸುವಂತೆ ದಾಖಲಿಸಿದ್ದಾರೆ. ಬೃಹದಾಕಾರವಾಗಿ ಬೆಳೆದಿರುವ ಕಥನಗಳನ್ನು ಆಕರ್ಷಕವಾಗಿ ತಿಳಿಸಿದ್ದಾರೆ ಎಂದರು. ಲೇಖಕ ಪೊ›.ಸಣ್ಣರಾಮ ಅಧ್ಯಕ್ಷತೆ ವಹಿಸಿ, ಕನ್ನಡ ಪರದಿಯಲ್ಲಿಸಮಗ್ರ ಭಾರತ ನೋಡುವ ಪ್ರಯತ್ನ ಈ ಕೃತಿಯಲ್ಲಿದೆ. ತಮ್ಮ ಅರಿವಿನ ಪರಿದಿಯನ್ನು ಈ ಕೃತಿ ವಿಸ್ತರಿಸಿದೆ ಎಂದರು. ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು, ರಾಮಾಯಣ, ಮಹಾಭಾರತಗಳಿಗೆ ವಿಶ್ರಾಂತಿ ನೀಡಿ, ನಮ್ಮ ಜನಪದ, ಜನಪದ ಕಲೆ, ಕಾವ್ಯಗಳನ್ನು ಉಳಿಸಿಕೊಳ್ಳಬೇಕಿದೆ' ಎಂದರು. ವೇದಿಕೆ ಕಾರ್ಯಕ್ರಮದ ನಂತರ ಲೇಖಕ ಡಾ.ಪುರುಷೋತ್ತಮ ಬಿಳಿಮಲೆಯವರ ತಾಳಮದ್ದಳೆ ಕಾರ್ಯಕ್ರಮ ನಡೆಯಿತು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ