ಆ್ಯಪ್ನಗರ

ಪೂಚಂತೇ ಡಾಟ್‌ಕಾಂ ವೆಬ್‌ಸೈಟ್‌ ಲೋಕಾರ್ಪಣೆ

ತೇಜಸ್ವಿಯವರ ಸಮಗ್ರ ವ್ಯಕ್ತಿತ್ವ, ಬರವಣಿಗೆ, ಸಾಹಿತ್ಯ, ವಿಮರ್ಶೆ, ಲೇಖನ, ಹೊಸ ವಿಚಾರಗಳು, ಸಂಶೋಧನೆಗಳನ್ನೊಳಗೊಂಡ ಮಾಹಿತಿಯನ್ನು ಓದುಗ ಬಳಗ ಮತ್ತು ತೇಜಸ್ವಿ ಅಭಿಮಾನಿಗಳಿಗೆ ಜಾಲತಾಣದ ಮೂಲಕ ತಲುಪಿಸುವುದು ಪೂಚಂತೇ ಡಾಟ್‌ಕಾಂ ಉದ್ದೇಶವೆಂದು ಶ್ರೀಮತಿ ರಾಜೇಶ್ವರಿ ತೇಜಸ್ವಿ ಹೇಳಿದರು.

Vijaya Karnataka 9 Sep 2018, 5:00 am
ಮೂಡಿಗೆರೆ : ತೇಜಸ್ವಿಯವರ ಸಮಗ್ರ ವ್ಯಕ್ತಿತ್ವ, ಬರವಣಿಗೆ, ಸಾಹಿತ್ಯ, ವಿಮರ್ಶೆ, ಲೇಖನ, ಹೊಸ ವಿಚಾರಗಳು, ಸಂಶೋಧನೆಗಳನ್ನೊಳಗೊಂಡ ಮಾಹಿತಿಯನ್ನು ಓದುಗ ಬಳಗ ಮತ್ತು ತೇಜಸ್ವಿ ಅಭಿಮಾನಿಗಳಿಗೆ ಜಾಲತಾಣದ ಮೂಲಕ ತಲುಪಿಸುವುದು ಪೂಚಂತೇ ಡಾಟ್‌ಕಾಂ ಉದ್ದೇಶವೆಂದು ಶ್ರೀಮತಿ ರಾಜೇಶ್ವರಿ ತೇಜಸ್ವಿ ಹೇಳಿದರು.
Vijaya Karnataka Web CKM-8MDG5P1


ಅವರು ಶನಿವಾರ ಹ್ಯಾಂಡ್‌ಪೋಸ್ಟ್‌ನಲ್ಲಿರುವ ತೇಜಸ್ವಿ ಅವರ ನಿವಾಸ 'ನಿರುತ್ತರ'ದ ಆವರಣದಲ್ಲಿ ಪೂಚಂತೇ ಡಾಟ್‌ಕಾಂ ಬಿಡುಗಡೆಗೊಳಿಸಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳು ಯುವಜನರ ಸಂವಾದ ತಾಣವಾಗಿರುವುದರಿಂದ ತೇಜಸ್ವಿಯವರ ಸಮಗ್ರ ಚಿತ್ರಣ ಪರಿಚಯಿಸುವ ಉದ್ದೇಶದಿಂದ ವೆಬ್‌ಸೈಟನ್ನು ರಚಿಸಲಾಗಿದೆ. ಇವರ ಮೊದಲ ಕಥೆಯಿಂದ ಪ್ರಾರಂಭಗೊಂಡು ಸಾಹಿತ್ಯ, ಲೇಖನ ಸೇರಿದಂತೆ ಪುಸ್ತಕ ಬಿಡುಗಡೆಯಾದ ವರ್ಷ ಅದರ ಪುರ್ಣ ಮಾಹಿತಿ ನೀಡುವುದು ವೆಬ್‌ಸೈಟಿನ ಉದ್ದೇಶ ಎಂದರು.

ವೆಬ್‌ಸೈಟ್‌ನ ರೂಪುರೇಷೆಗಳನ್ನು ತಿಳಿಸಿದ ತೇಜಸ್ವಿ ಒಡನಾಡಿ ಕೆಂಜಿಗೆ ಪ್ರದೀಪ್‌ ಮಾತನಾಡಿ, ತೇಜಸ್ವಿ ಪ್ರತಿಷ್ಠಾನ ಈಗಾಗಲೇ ಸರಕಾರದ ಅಧೀನದಲ್ಲಿರುವುದರಿಂದ ಅವರದೇ ಪ್ರಕ್ರಿಯೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಿತ ಸರಕಾರದ ಕಾರ್ಯಕ್ರಮಗಳನ್ನು ನೀಡುತ್ತದೆ. ಆದರೆ ಖಾಸಗಿ ವೆಬ್‌ಸೈಟ್‌ ಹೊಂದಿದಲ್ಲಿ ಎಲ್ಲ ಚಿತ್ರಣಗಳನ್ನು ನೀಡಬಹುದೆಂಬ ಉದ್ದೇಶದಿಂದ ಪೂಚಂತೇ ಡಾಟ್‌ಕಾಂ ಅನ್ನು ಹೊರತರಲಾಗಿದೆ ಎಂದು ತಿಳಿಸಿದರು.

ಪತ್ರಕರ್ತ ಗಿರಿಜಾಶಂಕರ್‌, ನೇಚರ್‌ ಕ್ಲಬ್‌ನ ಧನಂಜಯ ಜೀವಾಳ, ಸಾಹಿತಿ ಹಳೇಕೋಟೆ ರಮೇಶ್‌, ವೈಲ್ಡ್‌ಕ್ಯಾಟ್‌ ಗಿರೀಶ್‌, ಪ್ರಸನ್ನ ಗೌಡಹಳ್ಳಿ, ಬಾಪು ದಿನೇಶ್‌, ಸ್ವಾತಿ, ದೀಪಕ್‌ ಮತ್ತು ತೇಜಸ್ವಿ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ