ಆ್ಯಪ್ನಗರ

ವಿದ್ಯುತ್‌ ನಿಲುಗಡೆ: ಮೆಸ್ಕಾಂ ಎದುರು ಪ್ರತಿಭಟನೆ

ಕೊಪ್ಪ ತಾಲೂಕು ಮೇಗುಂದಾ ಹೋಬಳಿಯ 6 ಗ್ರಾ.ಪಂ ವ್ಯಾಪ್ತಿಯಲ್ಲಿ ಕಳೆದ 3 ತಿಂಗಳಿನಿಂದ ಮನ ಬಂದಂತೆ ವಿದ್ಯುತ್‌ ನಿಲುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಸಾರ್ವಜನಿಕರು ಗುರುವಾರ ಪಟ್ಟಣದ ಮೆಸ್ಕಾಂ ಕಚೇರಿ ಎದುರು ಪ್ರತಿಭಟಿಸಿದರು.

Vijaya Karnataka 29 Mar 2019, 5:00 am
ಜಯಪುರ: ಕೊಪ್ಪ ತಾಲೂಕು ಮೇಗುಂದಾ ಹೋಬಳಿಯ 6 ಗ್ರಾ.ಪಂ ವ್ಯಾಪ್ತಿಯಲ್ಲಿ ಕಳೆದ 3 ತಿಂಗಳಿನಿಂದ ಮನ ಬಂದಂತೆ ವಿದ್ಯುತ್‌ ನಿಲುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಸಾರ್ವಜನಿಕರು ಗುರುವಾರ ಪಟ್ಟಣದ ಮೆಸ್ಕಾಂ ಕಚೇರಿ ಎದುರು ಪ್ರತಿಭಟಿಸಿದರು.
Vijaya Karnataka Web power stop protest against mescom
ವಿದ್ಯುತ್‌ ನಿಲುಗಡೆ: ಮೆಸ್ಕಾಂ ಎದುರು ಪ್ರತಿಭಟನೆ


ವಿದ್ಯುತ್‌ ನಿಲುಗಡೆಯಿಂದ ಕುಡಿಯುವ ನೀರಿಗೆ ಅಡಚಣೆಯುಂಟಾಗಿದ್ದು, ಪರೀಕ್ಷೆ ಸಮಯವಾಗಿರುವುದರಿಂದ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆಲ ತಿಂಗಳುಗಳಿಂದ ಪಟ್ಟಣ ಹೊರ ವಲಯದ ಮಕ್ಕಿಕೊಪ್ಪದ ಅನೇಕ ಮನೆಗಳಿಗೆ ವಿದ್ಯುತ್‌ ಬಿಲ್ಲಿನಲ್ಲಿ ಹೆಚ್ಚಿನ ಮೊತ್ತವನ್ನು ಹಾಕಿ ಬಲವಂತವಾಗಿ ಪಾವತಿಸಿಕೊಳ್ಳಲಾಗುತ್ತಿದ್ದು, ಕಟ್ಟಿಸಿಕೊಂಡ ಹೆಚ್ಚಿನ ಮೊತ್ತವನ್ನು ಹಿಂದಿರುಗಿಸಬೇಕು ಎಂದು ಸಾರ್ವಜನಿಕರು ಪಟ್ಟು ಹಿಡಿದರು.

ಈ ಹಿಂದೆ ಹಲವು ಭಾರಿ ವಿದ್ಯುತ್‌ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರೂ, ಅಧಿಕಾರಿಗಳಿಂದ ಉಢಾಫೆಯ ಉತ್ತರ ದೊರೆಯುತ್ತಿದೆಯೇ ಹೊರತು ಪರಿಹಾರ ಇಲ್ಲವಾಗಿದೆ. ನಮ್ಮ ಸಹನೆಗೂ ಒಂದು ಮಿತಿಯಿದೆ. ಸೂಕ್ತ ಪರಿಹಾರ ದೊರೆಯದೆ ಮೆಸ್ಕಾಂ ಎಂದಿನಂತೆ ತನ್ನ ಹಳೆಯ ಚಾಳಿ ಮುಂದುವರಿಸಿದರೆ, ಮುಂದಿನ ಹೋರಾಟದ ಕ್ರಮ ಉಗ್ರವಾಗಲಿದೆ ಎಂದು ಎಚ್ಚರಿಸಿ ಕೊಪ್ಪ ಎಇಇ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿ.ಪಂ. ಅಧ್ಯಕ್ಷೆ ಸುಜಾತ, ತಾ.ಪಂ. ಅಧ್ಯಕ್ಷೆ ಜಯಂತಿ, ಮಣಿಕಂಠನ್‌ ಕಂದಸ್ವಾಮಿ, ನಟರಾಜ್‌, ಉದಯ್‌, ಸುಧಾಕರ್‌, ಮಂಜುನಾಥ್‌, ಸಂತೋಷ್‌, ಮೆಸ್ಕಾಂ ಅಧಿಕಾರಿ ಸಮೀರ್‌, ನಕ್ಸಲ್‌ ನಿಗ್ರಹ ದಳದ ಎಎಸ್‌ಐ ಬಿ.ಎಸ್‌. ಗಿರೀಶ್‌ ಮತ್ತು ಅನೇಕ ಗಣ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹದಿನೈದು ದಿನದಲ್ಲಿ ಪರಿಹಾರ: ವಿದ್ಯುತ್‌ ಮಾರ್ಗಕ್ಕೆ ಆಧುನಿಕ ತಂತಿ ವಾಹಕ ಅಳವಡಿಕೆ, ಅರಣ್ಯ ತೆರವು, ಸಿಬ್ಬಂದಿ ಕೊರತೆ ಮುಂತಾದ ಸಮಸ್ಯೆಗಳು ಇಲಾಖೆಯ ಮುಂದಿದ್ದು, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹದಿನೈದು ದಿನದೊಳಗೆ ಶಾಶ್ವತವಾಗಿ ಬಗೆಹರಿಸಲಾಗುವುದು. -ಚಂದ್ರಶೇಖರ್‌, ಎಇಇ ಕೊಪ್ಪ ಮೆಸ್ಕಾಂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ