ಆ್ಯಪ್ನಗರ

ಪ್ರಬೋಧಿನಿ ಗುರುಕುಲದಲ್ಲಿರಾಜ್ಯಪರಿಸರ ಸಮ್ಮೇಳನ

ಶೃಂಗೇರಿ ಸಮೀಪವಿರುವ ಪ್ರಬೋಧಿನಿ ಗುರುಕುಲದ ಅರ್ಧಮಂಡಲೋತ್ಸವದ ಅಂಗವಾಗಿ ಸೆ.21 ರಂದು ಪರಿಸರ ಸಂರಕ್ಷಣೆ ಹಾಗೂ ಜಲಸಂವರ್ಧನೆ ಬಗ್ಗೆ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಗುರುಕುಲದ ವ್ಯವಸ್ಥಾಪಕ ಉಮೇಶ್‌ರಾವ್‌ ಹೇಳಿದರು.

Vijaya Karnataka 20 Sep 2019, 5:00 am
ಚಿಕ್ಕಮಗಳೂರು: ಶೃಂಗೇರಿ ಸಮೀಪವಿರುವ ಪ್ರಬೋಧಿನಿ ಗುರುಕುಲದ ಅರ್ಧಮಂಡಲೋತ್ಸವದ ಅಂಗವಾಗಿ ಸೆ.21 ರಂದು ಪರಿಸರ ಸಂರಕ್ಷಣೆ ಹಾಗೂ ಜಲಸಂವರ್ಧನೆ ಬಗ್ಗೆ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಗುರುಕುಲದ ವ್ಯವಸ್ಥಾಪಕ ಉಮೇಶ್‌ರಾವ್‌ ಹೇಳಿದರು.
Vijaya Karnataka Web prabodhini gurukul rajarajasara conference
ಪ್ರಬೋಧಿನಿ ಗುರುಕುಲದಲ್ಲಿರಾಜ್ಯಪರಿಸರ ಸಮ್ಮೇಳನ


ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಸಮಾವೇಶ ನಡೆಯಲಿದೆ. ಗುರುಕುಲ ಆರಂಭಗೊಂಡು 24 ವರ್ಷಗಳು ಸಂದಿದ್ದು ಇದಕ್ಕೆ ಅರ್ಧಮಂಡಲೋತ್ಸವ ಎನ್ನಲಾಗುತ್ತದೆ. ವರ್ಷಪೂರ್ತಿ ನಡೆಯುವ 24 ನೇ ವರ್ಷಾಚರಣೆ ಅಂಗವಾಗಿ ಪರಿಸರ ಸಮಾವೇಶ ಏರ್ಪಡಿಸಲಾಗಿದೆ ಎಂದರು.

ರಾಜ್ಯದ ಎಲ್ಲಜಿಲ್ಲೆಗಳ ವಿವಿಧ ಪರಿಸರ ಸಂಘ,ಸಂಸ್ಥೆ ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ.ಮಲೆನಾಡು ಮತ್ತು ಬಯಲು ಭಾಗದ ಜಲಸಂಬಂಧಿ ವಿಚಾರಗಳ ಮೇಲೆ ಸಮಾಲೋಚನೆ ನಡೆಯಲಿದೆ. ಸಂವಾದದಲ್ಲಿತಜ್ಞರು ಮಾರ್ಗದರ್ಶನ ನೀಡಲಿದ್ದಾರೆ. ಪ್ರಚಲಿತ ಅರಣ್ಯ, ಜೀವವೈವಿಧ್ಯ ಪರಿಸ್ಥಿತಿ ಏನಾಗಿದೆ. ಇದಕ್ಕೆಲ್ಲಾಏನೆಲ್ಲಾಸಂರಕ್ಷಣಾ ಸಂವರ್ಧನಾ ಕಾರ್ಯಕ್ರಮ ನಡೆಯುತ್ತಿವೆ ಎಂಬ ಬಗ್ಗೆ ಮಾಹಿತಿ ಸಿಗಲಿದೆ ಎಂದು ಹೇಳಿದರು.

ಅರ್ಧಮಂಡಲೋತ್ಸವದ ಸ್ವಾಗತ ಸಮಿತಿ ಕಾರ್ಯದರ್ಶಿ ಗಜೇಂದ್ರಗೊರಸುಕುಡಿಗೆ ಮಾತನಾಡಿ, ಖ್ಯಾತ ಅರಣ್ಯ ಪರಿಸರ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ,ವೃಕ್ಷಲಕ್ಷ ಆಂದೋಲನ ಅನಂತಹೆಗಡೆ ಅಶೀಸರ, ಪ್ರೊ.ಬಿ.ಎಂ.ಕುಮಾರಸ್ವಾಮಿ, ವಿಜ್ಞಾನಿ ಡಾ.ಕೇಶವ ಎಚ್‌.ಕೊರ್ಸೆ, ಬರಹಗಾರ ರಾಧಾಕೃಷ್ಣಬಡ್ತಿ, ವನವಾಸಿ ಮುಖಂಡ ಶಾಂತರಾಂ ಸಿದ್ದಿ ಮತ್ತಿತರೆ ಗಣ್ಯರು ಭಾಗವಹಿಸಲಿದ್ದಾರೆ. ಪರಿಸರ ಗ್ರಾಮ ವಿಕಾಸಕ್ಕಾಗಿ ದೇಶವ್ಯಾಪಿ ಪಾದಯಾತ್ರೆ ನಡೆಸಿದ ಸೀತರಾಂ ಕೆದಿಲಾಯ ಸಮ್ಮೇಳನ ಉದ್ಘಾಟಿಲಿದ್ದಾರೆ. ದೂರದರ್ಶನದ ನಿವೃತ್ತ ನಿರ್ದೇಶಕ ಮಹೇಶ್‌ಜೋಷಿ, ಡಾ.ವಾಮನಚಾರ್ಯ, ಧರ್ಮದರ್ಶಿ ಭೀಮೇಶ್ವರ ಜೋಷಿ,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ಮೋಹನ್‌ರಾಜ್‌ ಕಾರ್ಯಕ್ರಮದಲ್ಲಿಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ