ಆ್ಯಪ್ನಗರ

ಹಣ್ಣೆ ಮಠ ಗುರು ಪಟ್ಟಾಧಿಕಾರಕ್ಕೆ ಸಿದ್ಧತೆ

ಪಟ್ಟಣ ಸಮೀಪ ಹಣ್ಣೆ ಗ್ರಾಮದ ಹಿರೇಮಠದಲ್ಲಿ ನ. 9ರಂದು ನಡೆಯುವ ಶ್ರೀಶೈಲ ಶಾಖಾ ಹಣ್ಣೆ ಹಿರೇಮಠದ ಗುರು ಪಟ್ಟಾಧಿಕಾರದ ಧಾರ್ಮಿಕ ಪೂರ್ವಭಾವಿ ಸಭೆ ಗುರುವಾರ ನಡೆಯಿತು.

Vijaya Karnataka 29 Sep 2018, 5:00 am
ಅಜ್ಜಂಪುರ : ಪಟ್ಟಣ ಸಮೀಪ ಹಣ್ಣೆ ಗ್ರಾಮದ ಹಿರೇಮಠದಲ್ಲಿ ನ. 9ರಂದು ನಡೆಯುವ ಶ್ರೀಶೈಲ ಶಾಖಾ ಹಣ್ಣೆ ಹಿರೇಮಠದ ಗುರು ಪಟ್ಟಾಧಿಕಾರದ ಧಾರ್ಮಿಕ ಪೂರ್ವಭಾವಿ ಸಭೆ ಗುರುವಾರ ನಡೆಯಿತು.
Vijaya Karnataka Web CKM-28AJP02


ಶಾಸಕ ಡಿ.ಎಸ್‌. ಸುರೇಶ್‌ ಮಾತನಾಡಿ, ಹಣ್ಣೆ ಮಠದ ಲಿಂಗೈಕ್ಯ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾಹಿತಿ, ಕವಿ, ವಿಮರ್ಶಕ, ಕಾದಂಬರಿಕಾರ ಮತ್ತು ಕೃಷಿಕರಾಗಿ ಗುರುತಿಸಿಕೊಂಡು ಪ್ರಗತಿಪರ ಚಿಂತಕರಾಗಿದ್ದರು. ಅವರ ಅಕಾಲಿಕ ನಿಧನ ನಮಗೆ ತುಂಬಲಾರದ ನಷ್ಟವಾಗಿದೆ.ಈ ನಷ್ಟವನ್ನು ಭರಿಸಲು ಹರಗುರು ಚರಮೂರ್ತಿಗಳು ವೇ. ಸಂತೋಷ್‌ ದೇವರನ್ನು ಪಟ್ಟಾಧಿಕಾರಕ್ಕೆ ಆಯ್ಕೆ ಮಾಡಿದ್ದಾರೆ.ನ. 9ರಂದು ನಡೆಯಲಿರುವ ಗುರು ಪಟ್ಟಾಧಿಕಾರದ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರು ಭಾಗಿಯಾಗುವುದರ ಮೂಲಕ ಸಮಾರಂಭ ಯಶಸ್ವಿಯಾಗಬೇಕು. ಸ್ಮರಣ ಸಂಚಿಕೆ, ಹಣಕಾಸು, ದಾಸೋಹ, ಪೆಂಡಾಲ್‌, ಪೂಜಾ ವಿಧಿ ವಿಧಾನ, ಪ್ರಚಾರ, ಇತರೆ ವಿಭಾಗಗಳಿಗೆ ಸಮಿತಿ ರಚಿಸಲಾಗಿದೆ ಎಂದು ವಿವರಿಸಿದರು.

ಜಿ.ಪಂ. ಉಪಾಧ್ಯಕ್ಷ ಕೆ.ಆರ್‌. ಆನಂದಪ್ಪ ಮಾತನಾಡಿ, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು, ಬಾಳೆಹೊನ್ನೂರು ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಭಾಗವಹಿಸುವರು. ನಾಡಿನ ವಿವಿಧ ಭಾಗದಿಂದ ಸುಮಾರು 30ಕ್ಕೂ ಹೆಚ್ಚು ಶಿವಾಚಾರ್ಯರು, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಸುಮಾರು 8 ಸಾವಿರ ಭಕ್ತರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಚಿಕ್ಕಮಗಳೂರಿನ ಪ್ರಭುಲಿಂಗ ಶಾಸ್ತ್ರಿ ಮಾತನಾಡಿದರು.ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಹಿರೇಮಠದ ಶಿವಾಚಾರ್ಯರು ಉಪಸ್ಥಿತರಿದ್ದರು. ಮಠದ ಉತ್ತರಾಧಿಕಾರಿ ವೇ. ಸಂತೋಷ್‌ ದೇವರು ಹಾಜರಿದ್ದರು.

ಬಿಜೆಪಿ ತಾಲೂಕು ಅಧ್ಯಕ್ಷ ಎಸ್‌.ಬಿ. ಆನಂದಪ್ಪ, ಕಾಂಗ್ರೆಸ್‌ ಮುಖಂಡ ದೋರನಾಳ್‌ ಪರಮೇಶ್‌, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬಿ.ಎಂ. ಏಕೋರಾಮಸ್ವಾಮಿ, ವರ್ತಕ ಎಸ್‌. ಸದಾಶಿವಪ್ಪ, ಗುತ್ತಿಗೆದಾರ ದೇವಿಕೆರೆ ಜಯಪ್ಪ, ನಿವೃತ್ತ ಪ್ರಾಚಾರ್ಯ ಹಾಲಪ್ಪ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ