ಜಯಪುರ (ಚಿಕ್ಕಮಗಳೂರು) : ಕೊಪ್ಪ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶದ ಕೆಲವೆಡೆಗಳಲ್ಲಿಮಂಗನ ಕಾಯಿಲೆ ಹರಡಿದೆ ಎಂಬುದು ಕೇವಲ ವದಂತಿಯಾಗಿದ್ದು, ಜನರು ಈ ಕುರಿತು ಭಯಭೀತರಾಗುವುದು ಬೇಡ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಜ.13ರಿಂದ ಮೂರು ದಿನಗಳ ಕಾಲ ಶಾಂತಿಗ್ರಾಮ ಆರೋಗ್ಯ ಕೇಂದ್ರದ ವೈದ್ಯರ ತಂಡ ವನ ಪ್ರದೇಶಗಳಲ್ಲಿರುವ ಉಣ್ಣೆಗಳನ್ನು ಶಿವಮೊಗ್ಗದ ಪರಿಮಾಣು ಕ್ರಿಮಿ ಪರಿಶೋಧನಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಸಾತ್ಕೊಡಿಗೆ ಎಸ್ಟೇಟ್ ವ್ಯಾಪ್ತಿಯಲ್ಲಿಸಿಕ್ಕ ಉಣ್ಣೆಯಲ್ಲಿಮಂಗನ ಕಾಯಿಲೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಆದರೂ ಮಂಗನ ಕಾಯಿಲೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲಎಂದು ಇಲಾಖೆ ತಿಳಿಸಿದೆ.
ತ್ವರಿತ ಮುಂಜಾಗ್ರತಾ ಕ್ರಮ
ಸೂಕ್ಷ್ಮ ಮಾಹಿತಿ ದೊರೆತ ತಕ್ಷಣವೇ ಮೆಣಸಿನಹಾಡ್ಯ, ಕಲ್ಲುಗುಡ್ಡೆ, ಕೊಗ್ರೆಯ 10 ಕಿ.ಮೀ. ಅಂತರದಲ್ಲಿವಾಸಿಸುವ 6ರಿಂದ 65 ವರ್ಷದೊಳಗಿನ ಸುಮಾರು 925 ಜನರಿಗೆ ಮುಂಜಾಗರೂಕತಾ ಕ್ರಮವಾಗಿ ಚುಚ್ಚುಮದ್ದು ನೀಡಲಾಗಿದೆ. 2010ರಲ್ಲಿಇದೇ ರೀತಿ ವ್ಯಾಕ್ಸಿಲೇಷನ್ ನೀಡಲಾಗಿದ್ದು, ಈ ವರ್ಷವೂ ಹೆಚ್ಚು ಜನರು ಇದರ ಪ್ರಯೋಜನ ಪಡೆದಿರುವುದರಿಂದ ಊಹಾಪೋಹಗಳನ್ನು ನಂಬದೆ ನಿರಾತಂಕವಾಗಿರಬಹುದು.
- ಡಾ.ಸುಧೀಂದ್ರ, ವೈಧ್ಯಾಧಿಕಾರಿ, ಜಯಪುರ ಪಿಎಚ್ಸಿ.
ಜ.13ರಿಂದ ಮೂರು ದಿನಗಳ ಕಾಲ ಶಾಂತಿಗ್ರಾಮ ಆರೋಗ್ಯ ಕೇಂದ್ರದ ವೈದ್ಯರ ತಂಡ ವನ ಪ್ರದೇಶಗಳಲ್ಲಿರುವ ಉಣ್ಣೆಗಳನ್ನು ಶಿವಮೊಗ್ಗದ ಪರಿಮಾಣು ಕ್ರಿಮಿ ಪರಿಶೋಧನಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಸಾತ್ಕೊಡಿಗೆ ಎಸ್ಟೇಟ್ ವ್ಯಾಪ್ತಿಯಲ್ಲಿಸಿಕ್ಕ ಉಣ್ಣೆಯಲ್ಲಿಮಂಗನ ಕಾಯಿಲೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಆದರೂ ಮಂಗನ ಕಾಯಿಲೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲಎಂದು ಇಲಾಖೆ ತಿಳಿಸಿದೆ.
ತ್ವರಿತ ಮುಂಜಾಗ್ರತಾ ಕ್ರಮ
ಸೂಕ್ಷ್ಮ ಮಾಹಿತಿ ದೊರೆತ ತಕ್ಷಣವೇ ಮೆಣಸಿನಹಾಡ್ಯ, ಕಲ್ಲುಗುಡ್ಡೆ, ಕೊಗ್ರೆಯ 10 ಕಿ.ಮೀ. ಅಂತರದಲ್ಲಿವಾಸಿಸುವ 6ರಿಂದ 65 ವರ್ಷದೊಳಗಿನ ಸುಮಾರು 925 ಜನರಿಗೆ ಮುಂಜಾಗರೂಕತಾ ಕ್ರಮವಾಗಿ ಚುಚ್ಚುಮದ್ದು ನೀಡಲಾಗಿದೆ. 2010ರಲ್ಲಿಇದೇ ರೀತಿ ವ್ಯಾಕ್ಸಿಲೇಷನ್ ನೀಡಲಾಗಿದ್ದು, ಈ ವರ್ಷವೂ ಹೆಚ್ಚು ಜನರು ಇದರ ಪ್ರಯೋಜನ ಪಡೆದಿರುವುದರಿಂದ ಊಹಾಪೋಹಗಳನ್ನು ನಂಬದೆ ನಿರಾತಂಕವಾಗಿರಬಹುದು.
- ಡಾ.ಸುಧೀಂದ್ರ, ವೈಧ್ಯಾಧಿಕಾರಿ, ಜಯಪುರ ಪಿಎಚ್ಸಿ.