ಆ್ಯಪ್ನಗರ

ಚಿಕ್ಕಮಗಳೂರು: ಕೊರೊನಾ ವೈರಸ್‌ಗಿಂತ ಆಸ್ಪತ್ರೆಯ ಬಿಲ್‌ ಡೇಂಜರ್‌, ಚಿಕಿತ್ಸೆಗೆ 9 ಲಕ್ಷ, ಡಿಸ್ಕೌಂಟ್‌ 1 ರೂಪಾಯಿ!

ಸಖರಾಯಪಟ್ಟಣದ ಪಿಳ್ಳೆನಹಳ್ಳಿಯ 70 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕ್ಕಮಗಳೂರಿನ ಈ ವ್ಯಕ್ತಿಯನ್ನು ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಚಿಕಿತ್ಸೆ ನೀಡಲಾಗಿತ್ತು. ಆದರೆ ಅದು ಫಲಕಾರಿಯಾಗದೆ ವ್ಯಕ್ತಿಯು ಕೊನೆಯುಸಿರೆಳೆದರು.

Vijaya Karnataka Web 18 Sep 2020, 10:37 am
ಚಿಕ್ಕಮಗಳೂರು: ಕೊರೊನಾ ವೈರಸ್‌ ಈಗ ಜನರನ್ನು ಭಯ ಬೀಳಿಸುತ್ತಿಲ್ಲ ಆದರೆ ಆಸ್ಪತ್ರೆಯ ಬಿಲ್‌ಗಳೇ ಕೊರೊನಾ ವೈರಸ್‌ಗಿಂತಲೂ ಡೇಂಜರ್‌ ಆಗಿದೆ.
Vijaya Karnataka Web ಆಸ್ಪತ್ರೆ ಬಿಲ್‌
ಆಸ್ಪತ್ರೆ ಬಿಲ್‌


ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯೊಂದು ಕೊರೊನಾ ಚಿಕಿತ್ಸೆ ನೀಡಿ ಹಾಕಿರುವ ಬಿಲ್‌ ಮೊತ್ತ ಎಷ್ಟು ಗೊತ್ತಾ?

9 ಲಕ್ಷ ರೂಪಾಯಿ. ಇದಕ್ಕೆ ಆಸ್ಪತ್ರೆಯು 1 ರೂಪಾಯಿಯ ಬೃಹತ್‌ ಮೊತ್ತದ ಡಿಸ್ಕೌಂಟ್‌ ಕೂಡ ನೀಡಿದೆ.

ಈ ಬಿಲ್ ನೋಡಿ ಕೊರೊನ ಸೋಂಕಿತರ ಕುಟುಂಬ ಸದಸ್ಯರಿಗೆ ಫುಲ್‌ ಶಾಕ್!

ದೂರಿನ ಪ್ರತಿ


ಮೊದಲೇ ಕುಟುಂಬ ಸದಸ್ಯರು ದುಃಖದಲ್ಲಿದ್ದಾರೆ. ಕೊರೊನಾ ಸೋಂಕಿನಿಂದ ಮೃತ ಪಟ್ಟಿರೋ ಕುಟುಂಬಕ್ಕೆ ಖಾಸಗಿ ಆಸ್ಪತ್ರೆಯ ಬಿಲ್ ಈಗ ಮತ್ತೊಂದು ಪೆಟ್ಟು ನೀಡಿದೆ.

ಸಖರಾಯಪಟ್ಟಣದ ಪಿಳ್ಳೆನಹಳ್ಳಿಯ 70 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕ್ಕಮಗಳೂರಿನ ಈ ವ್ಯಕ್ತಿಯನ್ನು ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಚಿಕಿತ್ಸೆ ನೀಡಲಾಗಿತ್ತು. ಆದರೆ ಅದು ಫಲಕಾರಿಯಾಗದೆ ವ್ಯಕ್ತಿಯು ಕೊನೆಯುಸಿರೆಳೆದರು.

ಈಗ ಆಸ್ಪತ್ರೆಯು ಈ ಕುಟುಂಬ ಸದಸ್ಯರ ಮುಂದಿಟ್ಟಿರುವ ಬಿಲ್ ಮೊತ್ತ ರೂ. 9,25,601. ಒಟ್ಟು ಬಿಲ್ ಮೊತ್ತದಲ್ಲಿ 1 ರೂಪಾಯಿ ವಿನಾಯಿತಿಯನ್ನೂ ನೀಡಿದೆ ಈ ಆಸ್ಪತ್ರೆ.

ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರ ಒಡೆತನದಲ್ಲಿರುವ ಖಾಸಗಿ ಆಸ್ಪತ್ರೆಯ ಈ ಬಿಲ್‌ ಬಗ್ಗೆ ಸಾರ್ವಜನಿಕರಿಂದಲೂ ಭಾರೀ ಅಸಮಾಧಾನ ವ್ಯಕ್ತವಾಗಿದೆ.

ಬಿಲ್‌ನಿಂದ ಕಂಗೆಟ್ಟಿರುವ ಕುಟುಂಬ ಸದಸ್ಯರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ