ಆ್ಯಪ್ನಗರ

ಪ್ರೊ.ಶಮಂದ್‌ ಬಶೀರ್‌ ಮರಣೋತ್ತರ ಪರೀಕ್ಷೆ

ತಾಲೂಕಿನ ಇನಾಂ ದತ್ತಪೀಠದ ಮಾಣಿಕ್ಯಾಧಾರ ರಸ್ತೆಯಲ್ಲಿ ತಮ್ಮದೇ ಕಾರಿನೊಳಗೆ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದ ಭಾರತದ ಖ್ಯಾತ ವಕೀಲ ಪ್ರೊ.ಶಮಂದ್‌ ಬಶೀರ್‌ ಮರಣೋತ್ತರ ಪರೀಕ್ಷೆ ಶುಕ್ರವಾರ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆಯಿತು.

Vijaya Karnataka 10 Aug 2019, 5:00 am
ಚಿಕ್ಕಮಗಳೂರು : ತಾಲೂಕಿನ ಇನಾಂ ದತ್ತಪೀಠದ ಮಾಣಿಕ್ಯಾಧಾರ ರಸ್ತೆಯಲ್ಲಿ ತಮ್ಮದೇ ಕಾರಿನೊಳಗೆ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದ ಭಾರತದ ಖ್ಯಾತ ವಕೀಲ ಪ್ರೊ.ಶಮಂದ್‌ ಬಶೀರ್‌ ಮರಣೋತ್ತರ ಪರೀಕ್ಷೆ ಶುಕ್ರವಾರ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆಯಿತು.
Vijaya Karnataka Web prof shamand basheer post mortem
ಪ್ರೊ.ಶಮಂದ್‌ ಬಶೀರ್‌ ಮರಣೋತ್ತರ ಪರೀಕ್ಷೆ


ಶಮಂದ್‌ ಬಶೀರ್‌ ಅನಾರೋಗ್ಯದಿಂದ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ. ಬಶೀರ್‌ ಅವರ ತಂದೆ ಮತ್ತು ಸೋದರ ಚಿಕ್ಕಮಗಳೂರಿಗೆ ಆಗಮಿಸಿದ್ದು, ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಅವರಿಗೆ ಗ್ರಾಮಾಂತರ ಠಾಣೆ ಪೊಲೀಸರು ಹಸ್ತಾಂತರಿಸಿದರು.

ಆ.3ರಂದು ಸ್ಕೋಡಾ ರಾರ‍ಯಪಿಡ್‌ ಕಾರಿನಲ್ಲಿ ಬಾಬಾಬುಡನ್‌ಗಿರಿಗೆ ತೆರಳಿದ್ದ ಬಶೀರ್‌ ನಂತರ ವಾಪಸಾಗಿರಲಿಲ್ಲ. ಆ.7ರಂದು ಕುಟುಂಬದವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಗುರುವಾರ ದಿನವಿಡೀ ಹುಡುಕಿದಾಗ ಮಾಣಿಕ್ಯಾಧಾರ ರಸ್ತೆಯ ಬಳಿ ಕಾರಿನೊಳಗೆ ಮೃತದೇಹ ಪತ್ತೆಯಾಗಿತ್ತು.

ಮಳೆ, ವಿಪರೀತ ಚಳಿ ಹಾಗೂ ದಟ್ಟವಾದ ಮಂಜು ಕವಿದಿದ್ದ ಕಾರಣ ಸ್ಥಳೀಯರಿಗೂ ಕಾರು ಕಣ್ಣಿಗೆ ಬಿದ್ದಿರಲಿಲ್ಲ. ಗುಡ್ಡಕುಸಿತ, ರಸ್ತೆ ಸಂಪರ್ಕ ಕಡಿತವಾದ ಹಿನ್ನೆಲೆಯಲ್ಲಿ ಪ್ರವಾಸಿಗರ ಓಡಾಟವೂ ಇರಲಿಲ್ಲ. ಹೀಗಾಗಿ ಪ್ರೊ.ಬಶೀರ್‌ ಮೃತಪಟ್ಟು 6 ದಿನವಾದರೂ ಯಾರಿಗೂ ಗೊತ್ತಾಗಿರಲಿಲ್ಲ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ