ಆ್ಯಪ್ನಗರ

ಪ್ರೊ.ಕೃಷ್ಣಪ್ಪ 81ನೇ ಜನ್ಮ ದಿನಾಚರಣೆ

ಸಾಹಿತಿಗಳು, ವಿದ್ಯಾರ್ಥಿಗಳು, ನೌಕರರನ್ನು ಸಂಘಟಿಸಿ 70ರ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದ ಪ್ರೊ.ಬಿ.ಕೃಷ್ಣಪ್ಪ ಎಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಸಿ.ವಸಂತಕುಮಾರ್‌ ಹೇಳಿದರು.

Vijaya Karnataka 12 Jun 2019, 5:00 am
ಚಿಕ್ಕಮಗಳೂರು : ಸಾಹಿತಿಗಳು, ವಿದ್ಯಾರ್ಥಿಗಳು, ನೌಕರರನ್ನು ಸಂಘಟಿಸಿ 70ರ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದ ಪ್ರೊ.ಬಿ.ಕೃಷ್ಣಪ್ಪ ಎಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಸಿ.ವಸಂತಕುಮಾರ್‌ ಹೇಳಿದರು.
Vijaya Karnataka Web CKM-10SHIVUP4-1


ನಗರದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ 81ನೇ ಜನ್ಮ ದಿನಾಚರಣೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.

ಕೃಷ್ಣಪ್ಪ ಅವರು ಮಾತು ಬಾರದ ಜನರಿಗೆ ಘೋಷಣೆ ಕೂಗುವುದು, ಭಾಷಣ ಮಾಡಿಸುವುದು, ಸಂವಿಧಾನದ ಹಕ್ಕು ಕೇಳುವ ಪಾಠ ಕಲಿಸಿದರು. ಕರ್ನಾಟಕದ ಬಹುತೇಕ ಹಳ್ಳಿಗಳಲ್ಲೂ ಸಂಘಟನೆ ಮಾಡಿದ ಅವರು, ಗುಡಿಸಿಲಿನಲ್ಲಿ ದೀಪ ಹಚ್ಚಿದ್ದೇನೆ, ಅದಕ್ಕೆ ಹೊರಗಿನ ಗಾಳಿಯ ಭಯವಿದೆ, ಅದು ಆರದಂತೆ ನೋಡಿಕೊಳ್ಳಿ ಎಂದು ಕರೆ ಕೊಟ್ಟಿದ್ದರು ಎಂಬುದನ್ನು ನೆನಪು ಮಾಡಿದರು.

ಭೂ ಹೋರಾಟಕ್ಕೆ ಚಾಲನೆ ನೀಡಿದ್ದ ಬಿ.ಕೃಷ್ಣಪ್ಪ, ಶಿವಮೊಗ್ಗ, ಕೋಲಾರ, ಹಾಸನ, ರಾಯಚೂರು, ಚಿಕ್ಕಮಗಳೂರಿನಲ್ಲೂ ಹೋರಾಟ ಸಂಘಟಿಸಿ ದಲಿತರಿಗೆ ಭೂಮಿ ಕೊಡಿಸುವ ಪ್ರಯತ್ನ ಮಾಡಿದರು. ದಲಿತ ಸಂಘರ್ಷ ಸಮಿತಿ ಹುಟ್ಟಿ 43 ವರ್ಷಗಳಾಗಿವೆ. ಶ್ರೀಮಂತರ ಒತ್ತುವರಿ ಬಿಡಿಸಿ ಭೂಹೀನ ಬಡವರಿಗೆ ಹಂಚಬೇಕು. ಆದರೆ, ಶ್ರೀಮಂತರ ಪರ ಇರುವ ಸರಕಾರಗಳು ಬಡವರ ಬೇಡಿಕೆ ಪರಿಗಣಿಸದೆ ಶ್ರೀಮಂತ ಜಿಂದಾಲ್‌ಗೆ ಸಾವಿರಗಟ್ಟಲೆ ಎಕರೆ ಜಮೀನು ಕೊಟ್ಟಿದೆ ಎಂದು ಟೀಕಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಎಚ್‌.ಇ.ದೊಡ್ಡಯ್ಯ, ದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಭೀಮಯ್ಯ, ಖಜಾಂಚಿ ಜಯರಾಮಯ್ಯ, ಕಡೂರು ತಾಲೂಕು ಸಂಚಾಲಕ ಪ್ರಶಾಂತ್‌, ತಾಲೂಕು ಸಂಚಾಲಕ ಚಂದ್ರಪ್ಪ, ಧರ್ಮೇಶ್‌, ಯಶೋಧರ, ಮಂಜುನಾಥ್‌, ರಂಗನಾಥ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ