ಆ್ಯಪ್ನಗರ

ಕಡೂರು ಕ್ಷೇತ್ರದಲ್ಲಿ ಪ್ರಜ್ವಲ್‌ ಪರ ಕಾಂಗ್ರೆಸ್‌ ಮುಖಂಡರ ಪ್ರಚಾರ

ಹಾಸನ ಲೋಕಸಭಾ ಕ್ಷೇತ್ರ ಮೈತ್ರಿಕೂಟದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ಅವರ ಪರವಾಗಿ ಕೆಪಿಸಿಸಿ ಸದಸ್ಯ ಕೆ.ಎಸ್‌. ಆನಂದ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಮತ್ತು ಸದಸ್ಯರು ತಾಲೂಕಿನ ಹೇಮಗಿರಿ ಪುಣ್ಯಕ್ಷೇತ್ರದಿಂದ ಗುರುವಾರ ಪ್ರಚಾರ ಆರಂಭಿಸಿದರು.

Vijaya Karnataka 5 Apr 2019, 5:00 am
ಕಡೂರು : ಹಾಸನ ಲೋಕಸಭಾ ಕ್ಷೇತ್ರ ಮೈತ್ರಿಕೂಟದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ಅವರ ಪರವಾಗಿ ಕೆಪಿಸಿಸಿ ಸದಸ್ಯ ಕೆ.ಎಸ್‌. ಆನಂದ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಮತ್ತು ಸದಸ್ಯರು ತಾಲೂಕಿನ ಹೇಮಗಿರಿ ಪುಣ್ಯಕ್ಷೇತ್ರದಿಂದ ಗುರುವಾರ ಪ್ರಚಾರ ಆರಂಭಿಸಿದರು.
Vijaya Karnataka Web CKM-4KDR1


ತಾಲೂಕಿನ ಕಸಬಾ ಕ್ಷೇತ್ರದ ಮತಿಘಟ್ಟ, ಅಂಚೆಚೋಮನಹಳ್ಳಿ, ನಂಜಪ್ಪನಹಳ್ಳಿ, ಜಯಲಕ್ಷ್ಮೀಪುರ, ಲಿಂಗ್ಲಾಪುರ, ಕರಿಯನಹಳ್ಳಿ, ಬಾಬಾಕಾಲೊನಿ, ಲಕ್ಕೇನಹಳ್ಳಿ, ಬಾಪೂಜಿ ಕಾಲೋನಿ, ಕುಪ್ಪಾಳು ಮತ್ತಿತರ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಲಾಯಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್‌. ಆನಂದ್‌, ಲೋಕಸಭೆ ಚುನಾವಣೆ ಅಖಾಡದಲ್ಲಿ ಮೋದಿ ಹವಾ ಇದೆ ಎನ್ನುವವರಿಗೆ ಮೇ 23ರಂದು ತಕ್ಕ ಉತ್ತರ ಸಿಗಲಿದೆ. ಕಟ್ಟ ಕಡೆಯ ಪ್ರಜೆಯೂ ಮೋದಿ ಆಡಳಿತದಿಂದ ತಾನು ಅನುಭವಿಸಿದ ನೋವನ್ನು ಮರೆತಿಲ್ಲ ಎಂದರು.

ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.

ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿ ಎಂದು ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಟ್ಟಾಗಿ ಗೆಲುವಿಗೆ ದುಡಿಯಲಿದ್ದು, 40 ಸಾವಿರಕ್ಕೂ ಅಧಿಕ ಮತಗಳನ್ನು ಈ ಕ್ಷೇತ್ರದಲ್ಲಿ ಲೀಡ್‌ ನೀಡಲಾಗುವುದು ಎಂದರು.

ಅಭಿವೃದ್ದಿ ವಿಷಯದಲ್ಲಿ ಕ್ಷೇತ್ರದ ಶಾಸಕರು ಹಿನ್ನಡೆ ಸಾಧಿಸಿದ್ದು, ಭದ್ರಾ ಮೇಲ್ದಂಡೆ ಯೋಜನೆ ಸಂಬಂಧ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ. ಶಾಸಕರು ಇತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿ ನಿರಂಜನ್‌, ಮತಿಘಟ್ಟ ಗ್ರಾ.ಪಂ. ಮಾಜಿ ಅಧ್ಯಕ್ಷ ರಾದ ರವಿ, ಶ್ರೀಕಂಠಒಡೆಯರ್‌, ಸಮೀರ್‌, ಕೃಷ್ಣಮೂರ್ತಿ, ಮುಖಂಡರಾದ ರಾಜೇಶ್‌, ರಂಗನಾಥನಾಯ್ಕ, ಜಿಮ್‌ ಶ್ರೀನಿವಾಸ್‌, ಬಾಬು, ಬಸವರಾಜ್‌ನಾಯ್ಕ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ