ಆ್ಯಪ್ನಗರ

ಬಡ್ತಿ ಮೀಸಲು ರಕ್ಷಣೆ, 15 ಕ್ಕೆ ಬೆಂಗಳೂರು ಚಲೋ

ಬಡ್ತಿ ಮೀಸಲಿನ ರಕ್ಷಣೆ ಹಾಗೂ ಸಂವಿಧಾನ ಬದ್ಧ ಹಕ್ಕುಗಳ ಉಳಿವಿಗಾಗಿ ಜೂ.15 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್‌ ಪ್ರತಿಭಟನಾ ರಾರ‍ಯಲಿ ಬೆಂಗಳೂರುಚಲೋ ಏರ್ಪಡಿಸಲಾಗಿದೆ ಎಂದು ಕನಾಟಕ ರಾಜ್ಯ ಸರಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಲೋಕೇಶಪ್ಪ ಹೇಳಿದರು.

Vijaya Karnataka 6 Jun 2018, 5:00 am
ಚಿಕ್ಕಮಗಳೂರು : ಬಡ್ತಿ ಮೀಸಲಿನ ರಕ್ಷಣೆ ಹಾಗೂ ಸಂವಿಧಾನ ಬದ್ಧ ಹಕ್ಕುಗಳ ಉಳಿವಿಗಾಗಿ ಜೂ.15 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್‌ ಪ್ರತಿಭಟನಾ ರಾರ‍ಯಲಿ ಬೆಂಗಳೂರುಚಲೋ ಏರ್ಪಡಿಸಲಾಗಿದೆ ಎಂದು ಕನಾಟಕ ರಾಜ್ಯ ಸರಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಲೋಕೇಶಪ್ಪ ಹೇಳಿದರು.
Vijaya Karnataka Web promotion reserve protection bangalore chalo 15th
ಬಡ್ತಿ ಮೀಸಲು ರಕ್ಷಣೆ, 15 ಕ್ಕೆ ಬೆಂಗಳೂರು ಚಲೋ


ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಎಸ್ಸಿಎಸ್ಟಿ ನೌಕರರ ಬೃಹತ್‌ ಪ್ರತಿಭಟನಾ ರಾರ‍ಯಲಿ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂವಿಧಾನ ಅನುಚ್ಛೇದ 16(4ಬಿ) ಪ್ರಕಾರ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಿ ಸಾಂದರ್ಭಿಕ ಜೇಷ್ಠತೆಯನ್ನು ಪ.ಜಾತಿ, ಪ.ಪಂಗಡದ ನೌಕರರಿಗೆ ನೀಡಲು ಅವಕಾಶವಿದೆ. ಆದರೆ,ಬಿ.ಕೆ.ಪವಿತ್ರ ಪ್ರಕರಣದ ಸುಪ್ರೀಂಕೋರ್ಟ್‌ ತೀರ್ಪಿನಿಂದಾಗಿ ರಾಜ್ಯದ ಎಲ್ಲ ಇಲಾಖೆಗಳಲ್ಲಿರುವ 20 ಸಾವಿರಕ್ಕೂ ಹೆಚ್ಚು ಎಸ್ಸಿಎಸ್ಟಿ ನೌಕರರು ಬಡ್ತಿ ಕಳೆದುಕೊಂಡು ಹಿಂಬಡ್ತಿ ಪಡೆಯುವಂತಾಗಿದೆ ಎಂದು ದೂರಿದರು.

ಪವಿತ್ರ ಪ್ರಕರಣದ ತೀರ್ಪನ್ನು ಅನುಷ್ಠಾನಗೊಳಿಸುವ ನೆಪದಲ್ಲಿ ವಿವಿಧ ಇಲಾಖೆಗಳಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡವು. ಅದರಂತೆಯೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಜೇಷ್ಠತಾ ಪಟ್ಟಿ ತಯಾರಿಸಲು ಮುಂದಾಯಿತು. ಈ ಸಂದರ್ಭ ಸಂವಿಧಾನ ಬದ್ಧ ವಾಗಿ ಈ ಸಮೂಹಕ್ಕೆ ದೊರೆಯಬೇಕಾದ ಶೇ.15 ಮತ್ತು ಶೇ.3 ಮೀಸಲನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಇದರಿಂದ ಈ ಸಮೂಹಕ್ಕೆ ಅನ್ಯಾಯವಾಗಿದೆ ಎಂದರು. ಬಡ್ತಿ ಮೀಸಲಿಗೆ ರಾಜ್ಯ ಸರಕಾರ ಅಂಗೀಕರಿಸಿರುವ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಬೇಕು. ಹಿಂಬಡ್ತಿಯಾಗಿರುವ ನೌಕರರಿಗೆ ಮುಂಬಡ್ತಿ ನೀಡಬೇಕು. ಲೋಕಸಭೆಯಲ್ಲಿ ಬಾಕಿ ಇರುವ ಸಂವಿಧಾನದ 117 ನೇ ತಿದ್ದುಪಡಿಗೆ ಅನುಮೋದನೆ ನೀಡಬೇಕು. ಅವೈಜ್ಞಾನಿಕ ಜೇಷ್ಠತಾ ಪಟ್ಟಿ ತಯಾರಿಸುವವರ ವಿರುದ್ಧ ಕಾನೂನು ಕ್ರಮವಾಗಬೇಕು ಹಾಗೂ ಅಸ್ಪೃಶ್ಯತಾ ನಿವಾರಣಾ ಕಾಯಿದೆಯನ್ನು ಯಾವುದೇ ಕಾರಣಕ್ಕೂ ಬಲಹೀನಗೊಳಿಸಬಾರದು ಎಂದು ಆಗ್ರಹಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್‌, ಕಾರ್ಯದರ್ಶಿ ರವಿಕುಮಾರ್‌ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ