ಆ್ಯಪ್ನಗರ

ಮಲೆನಾಡಲ್ಲಿ ಇನ್ನೂ ನಿಂತಿಲ್ಲ ನಿರಾಶ್ರಿತರ ರಕ್ಷಣೆ

ಮೂಡಿಗೆರೆ ತಾಲೂಕಿನ ಆಲೇಖಾನ್‌ ಹೊರಟ್ಟಿಯಲ್ಲಿ ಕಳೆದೊಂದು ವಾರದಿಂದ ಗ್ರಾಮದಲ್ಲೇ ಇದ್ದ 12 ಜನರನ್ನು ಅಗ್ನಿಶಾಮಕ ಸಿಬ್ಬಂದಿ ಮಂಗಳವಾರ ರಕ್ಷಿಸಿದ್ದಾರೆ.

Vijaya Karnataka Web 14 Aug 2019, 5:00 am
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಆಲೇಖಾನ್‌ ಹೊರಟ್ಟಿಯಲ್ಲಿ ಕಳೆದೊಂದು ವಾರದಿಂದ ಗ್ರಾಮದಲ್ಲೇ ಇದ್ದ 12 ಜನರನ್ನು ಅಗ್ನಿಶಾಮಕ ಸಿಬ್ಬಂದಿ ಮಂಗಳವಾರ ರಕ್ಷಿಸಿದ್ದಾರೆ.
Vijaya Karnataka Web protection of refugees who are not standing still
ಮಲೆನಾಡಲ್ಲಿ ಇನ್ನೂ ನಿಂತಿಲ್ಲ ನಿರಾಶ್ರಿತರ ರಕ್ಷಣೆ


ಗ್ರಾಮದ ಸುತ್ತಲೂ ಗುಡ್ಡ ಕುಸಿದಿದ್ದರಿಂದ ಗ್ರಾಮದಲ್ಲೇ ಜನರು ಇದ್ದರು. ದುರ್ಗಮ ಹಾದಿಯಲ್ಲಿ ತೆರಳಿದ ಅಗ್ನಿ ಶಾಮಕ ದಳದ ಸಿಬ್ಬಂದಿ,ಇಬ್ಬರು ರೋಗಿಗಳನ್ನ ಸುಮಾರು 2 ಕಿ.ಮೀ.ಹೊತ್ತುಕೊಂಡೇ ಬಂದಿದ್ದಾರೆ.

ಮನೆಯಲ್ಲಿದ್ದ ನಾಯಿಗಳನ್ನು ಸಹ ರಕ್ಷಿಸಲಾಗಿದೆ. ಇದೇ ಗ್ರಾಮದಲ್ಲಿ ಸೈನಿಕರು 76 ಜನರನ್ನ ರಕ್ಷಿಸಿದ್ದರು.

ನಾವು ಮನೆ ಬಿಟ್ಟು ಬರಲ್ಲ ಎಂದು 8 ಜನ ಅಲ್ಲೇ ಇದ್ದರು. ಕೊನೆಗೂ ಮನವೊಲಿಸಿ 8 ಜನರನ್ನು ಅಗ್ನಿಶಾಮಕ ಸಿಬ್ಬಂದಿ

ರಕ್ಷಿಸಿದ್ದಾರೆ.

ಕುಸಿದು ಬಿದ್ದ 30 ಮನೆಗಳು: ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದಲ್ಲಿ 30 ಮನೆಗಳು ಕುಸಿದು ಬಿದ್ದಿದ್ದು, ಲಕ್ಷಾಂತರ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ನಾಶವಾಗಿವೆ.

ದುರ್ಗದಹಳ್ಳಿ ಸಮೀಪ ಗೌಡ್ಲು ಕೂಡಿಗೆ ಗ್ರಾಮದಲ್ಲಿ ಕಳೆದ 5 ದಿನಗಳಿಂದ ಸಂಕಷ್ಟದಲ್ಲಿ ಸಿಲುಕಿದ 7 ಮಂದಿ ರಕ್ಷಿಸಲಾಗಿದೆ.

ಜಾವಳಿಯ ಯುವಕರು ದುರ್ಗಮ ರಸ್ತೆಯಲ್ಲಿ ಹೋಗಿ, ನದಿಯನ್ನ ದಾಟಿ ಐವರು ಹಿರಿ ಜೀವಗಳು ಸೇರಿದಂತೆ 7 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ