ಆ್ಯಪ್ನಗರ

ಕಲುಷಿತ ನೀರು ಸರಬರಾಜು ವಿರುದ್ಧ ಪ್ರತಿಭಟನೆ

ಪಟ್ಟಣದ ಜನತೆಗೆ ಕುಡಿಯಲು ಕಲುಷಿತ ನೀರನ್ನು ಒದಗಿಸಲಾಗುತ್ತಿದೆ ಎಂದು ಆರೋಪಿಸಿ ನಿತ್ಯ ಕಲ್ಯಾಣ ಟ್ರಸ್ಟ್‌ ಮತ್ತು ನಾಗರೀಕ ವೇದಿಕೆ ವತಿಯಿಂದ ಪುರಸಭೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

Vijaya Karnataka 14 Sep 2019, 5:00 am
ತರೀಕೆರೆ: ಪಟ್ಟಣದ ಜನತೆಗೆ ಕುಡಿಯಲು ಕಲುಷಿತ ನೀರನ್ನು ಒದಗಿಸಲಾಗುತ್ತಿದೆ ಎಂದು ಆರೋಪಿಸಿ ನಿತ್ಯ ಕಲ್ಯಾಣ ಟ್ರಸ್ಟ್‌ ಮತ್ತು ನಾಗರೀಕ ವೇದಿಕೆ ವತಿಯಿಂದ ಪುರಸಭೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
Vijaya Karnataka Web protest against contaminated water supply
ಕಲುಷಿತ ನೀರು ಸರಬರಾಜು ವಿರುದ್ಧ ಪ್ರತಿಭಟನೆ


ಪುರಸಭೆ ಆಡಳಿತದ ವೈಪಲ್ಯದಿಂದ ಕುಡಿಯಲು ಶುದ್ಧ ನೀರು ದೊರಕದೆ ಜನರು ಆಸ್ಪತ್ರೆ ಸೇರುತ್ತಿದ್ದಾರೆ. ನೀರಿಗಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲಎಂದು ಪ್ರತಿಭಟನಾಕಾರರು ಆರೋಪಿಸಿದರು.ಕಳೆದ ಒಂದು ತಿಂಗಳಿಂದ ಅಶುದ್ಧ ನೀರು ಪೂರೈಕೆಯಾಗುತ್ತಿದೆ. ಜನತೆಗೆ ಉತ್ತಮ ಆರೋಗ್ಯಕ್ಕೆ ಬೇಕಿರುವ ವ್ಯವಸ್ಥೆ ಕಲ್ಪಿಸುತ್ತಿಲ್ಲ.ಆಡಳಿತ ವ್ಯವಸ್ಥೆ ತನ್ನ ಧೋರಣೆ ಬದಲಿಸಿಕೊಳ್ಳಬೇಕು.ವಾರ್ಷಿಕ ಒಂದು ಕೋಟಿ 80 ಲಕ್ಷ ತೆರಿಗೆ ವಸೂಲಿ ಮಾಡುತ್ತಿದ್ದು, ಜನರಿಗೆ ಸೂಕ್ತ ಸೌಲಭ್ಯ ನೀಡುತ್ತಿಲ್ಲ. ನೀರು ಶುದ್ಧೀಕರಣಕ್ಕಾಗಿ 1962ನೇ ಇಸವಿಯಲ್ಲಿಅಳವಡಿಸಿದ ಯಂತ್ರಗಳನ್ನು ಇದುವರೆಗೂ ಬದಲಾಯಿಸಿಲ್ಲ. ನಾಲ್ಕನೇ ಹಂತದ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ದೊರೆತಿಲ್ಲಎಂದು ದೂರಿದರು.

ಉಪವಿಭಾಗಾಧಿಕಾರಿಗಳೂ ಆಗಿರುವ ಪುರಸಭೆಯ ಆಡಳಿತಾಧಿಕಾರಿ ಬಿ.ಆರ್‌.ರೂಪ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿ, ಕಲುಷಿತ ನೀರು ಸರಬರಾಜು ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಕುಡಿಯುವ ನೀರಿನ ಇಲಾಖೆಯ ಅಧಿಕಾರಿಗಳು ಮತ್ತು ಪುರಸಭೆಯ ಅಧಿಕಾರಿಗಳ ಜತೆ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲು ತುರ್ತಾಗಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಹಿರಿಯ ಪತ್ರಕರ್ತ ಎನ್‌.ರಾಜು, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಟಿ.ಎಲ್‌.ರಮೇಶ್‌, ಎಂ.ನರೇಂದ್ರ, ಬಿ.ಬಿ.ರವಿಕುಮಾರ್‌, ಪುರಸಭೆ ಮಾಜಿ ಸದಸ್ಯರಾದ ಟಿ.ಎಂ.ಭೋಜರಾಜ್‌, ಮಿಲ್ಟಿ್ರೕ ಶ್ರೀನಿವಾಸ್‌, ಮುಖಂಡರಾದ ಎಂ.ರಂಗಪ್ಪ, ಈರುಳ್ಳಿ ಮಂಜಣ್ಣ, ಪರಮೇಶ್‌, ಪ್ರಸಾದ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ