ಆ್ಯಪ್ನಗರ

ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ

ಬಾಳೂರು ಹೋಬಳಿಯ ಕಲ್ಮನೆಯ ಲೋಕೇಶ್‌ ಎಂಬುವರ ಜಮೀನಿಗೆ ಕೆಲವರು ಅಕ್ರಮವಾಗಿ ಪ್ರವೇಶಿಸಿ ಕಾಫಿ ಕೊಯ್ಲು ಮಾಡಿದ್ದರೂ ಅವರ ವಿರುದ್ದ ಪೊಲೀಸರು ದೂರು ನೋಂದಾಯಿಸಿಲ್ಲ ಎಂದು ಆರೋಪಿಸಿ ಬಾಳೂರು ಪೊಲೀಸ್‌ ಠಾಣೆ ಎದುರು ಸಿಪಿಐ,ಜೆಡಿಎಸ್‌, ಬಿಎಸ್‌ಪಿ ಹಾಗೂ ಎಐವೈಪ್‌ನ ಮುಖಂಡರು ಪ್ರತಿಭಟನೆ ನಡೆಸಿದರು.

Vijaya Karnataka 19 Feb 2019, 5:00 am
ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಕಲ್ಮನೆಯ ಲೋಕೇಶ್‌ ಎಂಬುವರ ಜಮೀನಿಗೆ ಕೆಲವರು ಅಕ್ರಮವಾಗಿ ಪ್ರವೇಶಿಸಿ ಕಾಫಿ ಕೊಯ್ಲು ಮಾಡಿದ್ದರೂ ಅವರ ವಿರುದ್ದ ಪೊಲೀಸರು ದೂರು ನೋಂದಾಯಿಸಿಲ್ಲ ಎಂದು ಆರೋಪಿಸಿ ಬಾಳೂರು ಪೊಲೀಸ್‌ ಠಾಣೆ ಎದುರು ಸಿಪಿಐ,ಜೆಡಿಎಸ್‌, ಬಿಎಸ್‌ಪಿ ಹಾಗೂ ಎಐವೈಪ್‌ನ ಮುಖಂಡರು ಪ್ರತಿಭಟನೆ ನಡೆಸಿದರು.
Vijaya Karnataka Web CKM-18KTG5


ಆಖಿಲ ಭಾರತ ಯೂತ್‌ ಪೆಡರೇಷನ್‌ನ ತಾ.ಅಧ್ಯಕ್ಷ ರಮೇಶ್‌ ಕೆಳಗೂರು ಮಾತನಾಡಿ, ಕಲ್ಮನೆ ಗ್ರಾಮದ ಸರ್ವೆ ನಂ.49ರ ಜಾಗ ಲೋಕೇಶ್‌ ಎಂಬುವರಿಗೆ ಸೇರಿದೆ. ಈ ಜಮೀನಿನ ಮೇಲೆ ಬ್ಯಾಂಕಿನಲ್ಲಿ ಸಾಲವೂ ಪಡೆಯಲಾಗಿದೆ. ನ್ಯಾಯಾಲಯದಲ್ಲಿ ಸದರಿ ತೀರ್ಪಿನ ಅನ್ವಯ ಮೇಲ್ಮನವಿ ಕೂಡ ಸಲ್ಲಿಸಲಾಗಿದೆ. ಸರ್ವೆ ನಂ.49ರ 5 ಎಕರೆ ಜಮೀನು ಶಾಸಕರಿಗೆ ಸೇರಿದ್ದು ಎಂದು ಶಾಸಕರ ಬೆಂಬಲಿಗರು ಅಕ್ರಮವಾಗಿ ಕಾಫಿ ಬೆಳೆಯನ್ನು ಕೊಯ್ಲು ಮಾಡಿದ್ದಾರೆ ಎಂದರು.

ಈ ಜಮೀನು ತಂದೆ ತಾಯಿ ಮರಣ ನಂತರ ಲೋಕೇಶ್‌ ಅವರ ಒಡೆತನಕ್ಕೆ ಸೇರಿದೆ. ಅದರ ಸಂಪೂರ್ಣ ದಾಖಲೆ ನಮ್ಮಲ್ಲಿ ಇದ್ದು ಬೆಂಬಲಿಗರು ಯಾವುದೇ ದಾಖಲಾತಿ ಇಲ್ಲದೇ ಅಕ್ರಮವಾಗಿ 60 ಮೂಟೆ ಕಾಫಿ ಬೆಳೆ ಕೊಯ್ಲು ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ದೂರು ನೋಂದಾಯಿಸದೇ ಕಡೆಗಣಿಸಲಾಗಿದೆ. ನಮಗೆ ನ್ಯಾಯ ಒದಗಿಸಬೇಕು. ತಪ್ಪಿತಸ್ಥರ ವಿರುಧ್ದ ದೂರು ದಾಖಲಿಸಬೇಕು ಎಂದು ಆಗ್ರಹಿಸಿದರು.

ಬಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರತಿಭಟನೆಯ ಮುಖಂಡರೊಂದಿಗೆ ಚಿಕ್ಕಮಗಳೂರು ಡಿವೈಎಸ್‌ಎಪಿ ಚಂದ್ರಶೇಖರ್‌ ಮಾತನಾಡಿ, ಜಮೀನಿನ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ತಹಸೀಲ್ದಾರ್‌ ಮತ್ತು ಸ್ಥಳೀಯ ರಾಜಸ್ವ ನಿರೀಕ್ಷ ಕರ ವರದಿಯನ್ನು ಆಧರಿಸಿ ಜಮೀನಿನ ಸಮಸ್ಯೆ ಬಗ್ಗೆ ಒಂದು ತೀರ್ಮಾನಕ್ಕೆ ಬರಲಾಗುವುದು. 145 ಸೆಕ್ಷ ನ್‌ ಅನ್ವಯ ಪ್ರಕರಣ ದಾಖಲಿಸಲಾಗುವುದು. ಸಮಸ್ಯೆಯ ಕೂಲಂಕಶ ತನಿಖೆ ನಡೆಸಿ ಅಕ್ರಮ ಕೊಯ್ಲು ಮಾಡಿದ್ದರೆ ಅದರ ಬಗ್ಗೆ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ.ಇದರ ಪರಿಶೀಲನೆಗೆ ಸ್ವಲ್ಪ ಕಾಲಾವಕಾಶ ಕೊಡಬೇಕು ಎಂದರು.

ಮೂಡಿಗೆರೆ ವೃತ್ತ ನಿರೀಕ್ಷ ಕ ಜಗದೀಶ್‌ ಕೂಡ ಪ್ರತಿಭಟನೆಯ ಮುಖಂಡರಿಗೆ ಸಮಸ್ಯೆ ಇತ್ಯರ್ಥದ ಬಗ್ಗೆ ಭರವಸೆ ನೀಡಿದರು. ಪೊಲೀಸರು ಈ ಜಮೀನಿನ ಸಮಸ್ಯೆ ಬಗ್ಗೆ ಪ್ರತಿಭಟನಾಕಾರರಿಗೆ ಗಡುವು ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. ಸಮಸ್ಯೆ ಇತ್ಯರ್ಥ ಆಗದಿದ್ದರೆ ಮೂಡಿಗೆರೆ ತಾಲೂಕು ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಪ್ರತಿಭಟನೆಗೆ ಕೈಜೋಡಿಸಿದ್ದ ವಿವಿಧ ಸಂಘಟನೆಯ ಮುಖಂಡರು ಎಚ್ಚರಿಸಿದ್ದಾರೆ.

ಬಾಳೂರು ಠಾಣೆಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಅಂಗನವಾಡಿ ರಾಜ್ಯ ಕಾರ್ಯಕರ್ತೆ ರಾಧಾ ಸುಂದರೇಶ್‌, ಜಿಲ್ಲಾ ಕಾರ್ಯಧರ್ಶಿ ರೇಣುಕಾರಾಧ್ಯ, ತಾ.ಕಾರ್ಯದರ್ಶಿ ಹೆಚ್‌.ಟಿ.ರವಿಕುಮಾರ್‌, ಸಿಪಿಐ ಮುಖಂಡ ಗೋಪಾಲ್‌ಶೆಟ್ಟಿ, ಸಿಪಿಐನ ಲಕ್ಷ ್ಮಣ್‌ಕುಮಾರ್‌, ವಲಯ ಕಾರ್ಯದರ್ಶಿ ಬಿ.ಎಸ್‌.ಸುಂದರ್‌, ತಾ.ಜೆಡಿಎಸ್‌ ಅಧ್ಯಕ್ಷ ಬಿ.ಎಸ್‌.ಲಕ್ಷ ್ಮಣ್‌ಗೌಡ, ಬಿಎಸ್‌ಪಿಯ ತಾಲೂಕು ಕ್ಷೇತ್ರ ಸಮಿತಿಯ ಪ್ರ.ಕಾರ್ಯದರ್ಶಿ ಪ್ರಭಾಕರ್‌ಬಿನ್ನಡಿ, ಜೈಪಾಲ್‌,ಕೃಷ್ಣಪ್ಪ ಹಾಗೂ ಮತ್ತಿತರ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮೂಡಿಗೆರೆ ಪಿಎಸೈ ರಮೇಶ್‌, ಗೋಣಿಬೀಡು ಪಿಎಸೈ ರಾಕೇಶ್‌, ಬಾಳೂರು ಪಿಎಸೈ ಮಲ್ಲಿಕಾರ್ಜುನ್‌ ಹಾಗೂ ಮೂಡಿಗೆರೆ,ಬಣಕಲ್‌,ಗೋಣಿಬೀಡು ಪೊಲೀಸರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ