ಆ್ಯಪ್ನಗರ

ಹೊರಗುತ್ತಿಗೆ ನೌಕರರ ಮುಂದುವರೆಸಲು ಒತ್ತಾಯಿಸಿ 28ರಂದು ಪ್ರತಿಭಟನೆ

ವಿವಿಧ ಇಲಾಖೆಯ ಹಾಸ್ಟೆಲ್‌ಗಳಲ್ಲಿಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರನ್ನು ಮುಂದುವರೆಸಲು ಒತ್ತಾಯಿಸಿ ಆ.28 ರಿಂದ ರಾಜ್ಯಾದ್ಯಂತ ಚಳವಳಿ ನಡೆಸಲಾಗುವುದು ಎಂದು ರಾಜ್ಯ ವಸತಿ ಶಾಲೆæಗಳ ಮತ್ತು ವಸತಿ ನಿಲಯಗಳ ಬೋಧಕೇತರ ಸಿಬ್ಬಂದಿ ಒಕ್ಕೂಟದ ಅಧ್ಯಕ್ಷೆ ರಾಧಾ ಸುಂದರೇಶ್‌ ತಿಳಿಸಿದರು.

Vijaya Karnataka 27 Aug 2019, 9:46 pm
ಕಡೂರು: ವಿವಿಧ ಇಲಾಖೆಯ ಹಾಸ್ಟೆಲ್‌ಗಳಲ್ಲಿಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರನ್ನು ಮುಂದುವರೆಸಲು ಒತ್ತಾಯಿಸಿ ಆ.28 ರಿಂದ ರಾಜ್ಯಾದ್ಯಂತ ಚಳವಳಿ ನಡೆಸಲಾಗುವುದು ಎಂದು ರಾಜ್ಯ ವಸತಿ ಶಾಲೆæಗಳ ಮತ್ತು ವಸತಿ ನಿಲಯಗಳ ಬೋಧಕೇತರ ಸಿಬ್ಬಂದಿ ಒಕ್ಕೂಟದ ಅಧ್ಯಕ್ಷೆ ರಾಧಾ ಸುಂದರೇಶ್‌ ತಿಳಿಸಿದರು.
Vijaya Karnataka Web protest demanding the continuation of outsource
ಹೊರಗುತ್ತಿಗೆ ನೌಕರರ ಮುಂದುವರೆಸಲು ಒತ್ತಾಯಿಸಿ 28ರಂದು ಪ್ರತಿಭಟನೆ


ಪಟ್ಟಣದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ತಾಲೂಕಿನ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆಯಲ್ಲಿ27 ಹೊರಗುತ್ತಿಗೆ ನೌಕರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಒಟ್ಟಾರೆ ತಾಲೂಕಿನ ಇಲಾಖೆಯ ಯಾವುದೇ ನೌಕರರಿಗೆ ಮಾರ್ಚ್ನಿಂದ ವೇತನ ಪಾವತಿಯಾಗದಿರುವುದು ದುರದೃಷ್ಟಕರ ಎಂದು ಹೇಳಿದರು.

ರಾಜ್ಯದಲ್ಲಿಒಟ್ಟು 3,312 ಹೊರಗುತ್ತಿಗೆ ನೌಕರರಿಗೆ ಕೆಲಸದ ಭದ್ರತೆಯ ಶಾಶ್ವತ ನಿಯಾಮವಳಿ ರೂಪಿಸಬೇಕು. ಇದರಿಂದ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾ ಸಿಬ್ಬಂದಿ, ರಾತ್ರಿ ಕಾವಲುಗಾರರು, ಶುಶ್ರೂಷಕಿಯರು ಹಾಗೂ ಉಪನ್ಯಾಸಕರಿಗೆ ನೌಕರಿಯ ಭದ್ರತೆ ದೊರಕಲಿದೆ ಎಂದರು.

ಇವರನ್ನು ನೇಮಕ ಮಾಡಿಕೊಳ್ಳುವ ಏಜೆನ್ಸಿಗೆ ಸರಕಾರ ಹಣ ಪಾವತಿ ಮಾಡುವುದರಿಂದ ನೌಕರರಿಗೆ ವೇತನ ನಿಗಧಿತ ಸಮಯಕ್ಕೆ ಆಗದಿರುವುದು ಹಾಗೂ ವೇತನದಲ್ಲಿಅನಗತ್ಯ ಕಡಿತ ಉಂಟಾಗುತ್ತಿದೆ ಎಂದು ಟೀಕಿಸಿದರು.

ಈ ಎಲ್ಲಾಸಮಸ್ಯೆ ದೃಷ್ಟಿಯಲ್ಲಿಟ್ಟುಕೊಂಡು ಆ.28ರಿಂದ ರಾಜ್ಯಾದ್ಯಂತ ವಿವಿಧ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ನೌಕರರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅವರ ದೈನಂದಿನ ಕೆಲಸಕ್ಕೆ ಅಡ್ಡಿಯಾಗದ ಹಾಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ