ಆ್ಯಪ್ನಗರ

ಖಾತೆ ಮಾಡಿಕೊಡದಿದ್ದರೆ ಪ್ರತಿಭಟನೆ: ಬಿಎಸ್ಪಿ

ತಾಲೂಕಿನಾದ್ಯಂತ ಹಕ್ಕುಪತ್ರ ಇರುವ ರೈತರ ಒತ್ತುವರಿ ಭೂಮಿಗೆ ಖಾತೆ ಮಾಡಿಕೊಡದಿದ್ದರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ಆಯೋಜಿಸುವುದಾಗಿ ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಆನಂದ್‌ ಹೇಳಿದರು.

Vijaya Karnataka 16 Jul 2019, 5:00 am
ತಾಲೂಕಿನಾದ್ಯಂತ ಹಕ್ಕುಪತ್ರ ಇರುವ ರೈತರ ಒತ್ತುವರಿ ಭೂಮಿಗೆ ಖಾತೆ ಮಾಡಿಕೊಡದಿದ್ದರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ಆಯೋಜಿಸುವುದಾಗಿ ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಆನಂದ್‌ ಹೇಳಿದರು.
Vijaya Karnataka Web CKM-15KPH3


ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ನೂರಾರು ರೈತರಿಗೆ ಈಗಾಗಲೆ ಅರ್ಜಿ ಸಂಖ್ಯೆ 50 ಮತ್ತು 53ರಲ್ಲಿ ಭೂಮಿ ಹಕ್ಕುಪತ್ರ ನೀಡಲಾಗಿದೆ. ಆದರೆ ಸರಕಾರ ಅದರ ಕಿಮ್ಮತ್ತು ನಿಗದಿಪಡಿಸಿಲ್ಲ. ಆದ್ದರಿಂದ ತಾಲೂಕು ಕಚೇರಿಯಲ್ಲಿ ಅದಕ್ಕೆ ಖಾತೆ ಆಗುತ್ತಿಲ್ಲ. ಪರಿಣಾಮವಾಗಿ ರೈತಾಪಿ ಸಮೂಹ ಸರಕಾರದ ಹಲವು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಪ್ರಶ್ನಿಸಿದಾಗ ಕೆಲಸದ ಒತ್ತಡದಿಂದ ವಿಳಂಬವಾಗಿರುವುದಾಗಿ ತಹಸೀಲ್ದಾರ್‌ ಎರ್ರಿಸ್ವಾಮಿ ತಿಳಿಸಿದ್ದಾರೆ. ರೈತರ ಹಕ್ಕುಪತ್ರದ ವಿವರ ನೀಡಿದಲ್ಲಿ 15 ದಿನದೊಳಗೆ ಕಿಮ್ಮತ್ತು ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ. ಅದರಂತೆ ದಾಖಲೆ ನೀಡಲಾಗುವುದು. ಆದರೆ ಮತ್ತೊಮ್ಮೆ ವಿಳಂಬವಾದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಮುಖಂಡರಾದ ಪ್ರಭಾಕರ, ಕಿರಣ್‌, ಶಿವರಾಮ ಶೆಟ್ಟಿ, ನಾಗೇಶ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ