ಆ್ಯಪ್ನಗರ

ಅಪ್ಪುಗೆ ಅಕ್ಕಿರೊಟ್ಟಿ, ಚಿಕನ್‌ ಸಖತ್‌ ಇಷ್ಟ: ಪತ್ನಿ ಅಶ್ವಿನಿ ಸಂಬಂಧಿ ಭರತ್‌ ನೆನಪು

ನಮ್ಮ ಮನೆಗೆ ಬಂದಾಗ ಖುಷಿ ಆಗ್ತಿತ್ತು. ಆದ್ರೆ ಸಾವಿನ ಸುದ್ದಿ ಕೇಳಿ ಬೇಜಾರ್ ಆಗ್ತಿದೆ. ನಮ್ಮ ಮನೆಗೆ ಬಂದಾಗ ಅಕ್ಕಿರೊಟ್ಟಿ, ಚಿಕನ್ ತುಂಬಾ ಇಷ್ಟ ಪಡ್ತಿದ್ರು. ಪ್ರತಿ ಸಲ ಬಂದಾಗ ಕೂಡ ಅಕ್ಕಿರೊಟ್ಟಿ ಹಾಗೂ ಚಿಕನ್ ಮಾಡಿಸಿಕೊಂಡು ತಿನ್ನುತ್ತಿದ್ರು

Vijaya Karnataka Web 29 Oct 2021, 8:11 pm
ಚಿಕ್ಕಮಗಳೂರು: ರಾಜ್‌ ಕುಟುಂಬದ ಕುಡಿ ಪುನೀತ್‌ ರಾಜ್‌ಕುಮಾರ್‌ ನಿಧನ ಸುದ್ದಿ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಇನ್ನು ಅವರ ಸಂಬಂಧಿಗಳಿಗಂತೂ ಈ ವಿಷಯವನ್ನು ಅರಗಿಸಿಕೊಳ್ಳಲೇ ಆಗುತ್ತಿಲ್ಲ...
Vijaya Karnataka Web ಪುನೀತ್‌ ರಾಜ್‌ಕುಮಾರ್
ಪುನೀತ್‌ ರಾಜ್‌ಕುಮಾರ್‌


ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಅವರ ಸಂಬಂಧಿಗಳ ಮನೆಗೆ ನಟ ಪುನೀತ್ ರಾಜಕುಮಾರ್ ನಿರಂತರ ಹೋಗಿ ಬರುತ್ತಿದ್ದರು. ಅವರಿಗೆ ಈಗ ಪುನೀತ್‌ ನಿಧನ ಸುದ್ದಿ ಕೇಳಿ ಆಕಾಶವೇ ಕಳಚಿ ಬಿದ್ದಂತಾಗಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಭಾಗಮನೆಯಲ್ಲಿ ಅಶ್ವಿನಿಯವರ ಚಿಕ್ಕಪ್ಪನ ಮಗ ಭರತ್ ಈಗ ದುಃಖದ ಮಡುವಿನಲ್ಲಿ ಮುಳುಗಿದ್ದಾರೆ.

ಇಂದು ಬೆಳಗ್ಗೆ ಏನಾಯ್ತು? ಪುನೀತ್ ರಾಜ್‌ಕುಮಾರ್ ಹಠಾತ್ ಸಾವಿಗೆ ಕಾರಣವೇನು?

ಅಪ್ಪು ನಮ್ಮ ಮನೆಗೆ ಬಂದಾಗ ಅಕ್ಕಿ ರೊಟ್ಟಿ ಮತ್ತು ಚಿಕನ್‌ ಮಾಡುತ್ತಿದ್ದೇವು. ಪ್ರತಿ ಸಲ ಬಂದಾಗಲೂ ಇದೇ ಮಾಡುವಂತೆ ಕೇಳುತ್ತಿದ್ದರು ಎಂದರು.

ನಮ್ಮ ಮನೆಗೆ ಬಂದಾಗ ಖುಷಿ ಆಗ್ತಿತ್ತು. ಆದ್ರೆ ಸಾವಿನ ಸುದ್ದಿ ಕೇಳಿ ಬೇಜಾರ್ ಆಗ್ತಿದೆ. ನಮ್ಮ ಮನೆಗೆ ಬಂದಾಗ ಅಕ್ಕಿರೊಟ್ಟಿ, ಚಿಕನ್ ತುಂಬಾ ಇಷ್ಟ ಪಡ್ತಿದ್ರು. ಪ್ರತಿ ಸಲ ಬಂದಾಗ ಕೂಡ ಅಕ್ಕಿರೊಟ್ಟಿ ಹಾಗೂ ಚಿಕನ್ ಮಾಡಿಸಿಕೊಂಡು ತಿನ್ನುತ್ತಿದ್ರು ಎಂದು ಭರತ್‌ ನೆನಪಿಸಿಕೊಂಡರು.

ಭಜರಂಗಿ-2 ಕಾರ್ಯಕ್ರಮದ ವೇಳೆ ಮಾಡಿದ ಡ್ಯಾನ್ಸ್ ವೀಡಿಯೋ ನೋಡಿ ಖುಷಿ ಆಗಿತ್ತು. ಆದ್ರೆ ಈವತ್ತು ತುಂಬಾ ಬೇಜಾರ್ ಆಗ್ತಿದೆ. ನಾನು ಕಾಲ್ ಮಾಡಿದಾಗ ತುಂಬಾ ಚೆನ್ನಾಗಿ ಮಾತಾನಾಡುತ್ತಿದ್ರು. ಚಿಕ್ಕಮಗಳೂರು ಅಂದ್ರೆ ಪುನೀತ್‌ಗೆ ತುಂಬಾ ಇಷ್ಟ. ಇಲ್ಲಿಗೆ ಬಂದಾಗ ತಮ್ಮ ಬಾಲ್ಯದಲ್ಲಿ ನಡೆದ ಶೂಟಿಂಗ್ ತಾಣಗಳಿಗೂ ಭೇಟಿ ನೀಡಿ ಖುಷಿ ಪಡುತ್ತಿದ್ದರು ಎಂದು ಭರತ್‌ ಕಣ್ಣೀರಿಡುತ್ತಲೇ ಸ್ಮರಿಸಿದರು.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪವರ್‌ಫುಲ್ ಸಿನಿ ಕೆರಿಯರ್

ಪುನೀತ್‌ ರಾಜ್‌ಕುಮಾರ್‌ ಸಾವಿನ ಸುದ್ದಿ ಕೇಳಿ ಭಾಗಮನೆ ಗ್ರಾಮದಲ್ಲಿ ನೀರವ ಮೌನವಿದೆ.

ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಸಮೀಪದ ಭಾಗಮನೆ ಪುನೀತ್ ಪತ್ನಿ ಅಶ್ವಿನಿಯವರ ಹುಟ್ಟೂರು.

ಭಾಗಮನೆ ಗ್ರಾಮದ ರೇವನಾಥ್-ವಿಜಯ ದಂಪತಿ ಪುತ್ರಿ ಅಶ್ವಿನಿ. ಆಗಾಗ ಭಾಗಮನೆ ಗ್ರಾಮಕ್ಕೆ ಬರುತ್ತಿದ್ದ ಪುನೀತ್ ರಾಜ್‌ಕುಮಾರ್‌ ಹಳ್ಳಿ ಸೊಗಡು ಸವಿಯುತ್ತಿದ್ದರು.

ಪುನೀತ್ ನಮ್ಮಿಂದ ದೂರ ವಾಗಿರುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಹೋದಾಗ ಭೇಟಿಯಾಗಿದ್ದೆ. ಭಾಗಮನೆಗೆ ವರ್ಷಕೊಮ್ಮೆ ಬರುತ್ತಿದ್ದರು, ಸದ್ಯದಲ್ಲೇ ಬರೋದಾಗಿ ಕೂಡ ಹೇಳಿದರು ಎಂದು ಭರತ್‌ ನೆನಪಿನಂಗಳಕ್ಕೆ ಜಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ