ಆ್ಯಪ್ನಗರ

ಹಳಿಯೂರು ಬಳಿ ರೈಲು ಸಂಚಾರಕ್ಕೆ ತೊಡಕು

ತಾಲೂಕಿನ ಹಳಿಯೂರು ಬಳಿ ರೈಲ್ವೆ ಹಳಿಯಲ್ಲಿ ಶುಕ್ರವಾರ ತೊಂದರೆ ಕಂಡುಬಂದ ಕಾರಣ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಬೇಕಿದ್ದ ರೈಲು ಮಧ್ಯಾಹ್ನ 3 ಗಂಟೆಯಿಂದ ಪಟ್ಟಣದ ರೈಲ್ವೇ ನಿಲ್ದಾಣದಲ್ಲಿಯೇ ನಿಂತಿದ್ದು, ಪ್ರಯಾಣಿಕರು ಪರದಾಡಿದರು.

Vijaya Karnataka 29 Dec 2018, 5:00 am
ತರೀಕೆರೆ ಗ್ರಾಮಾಂತರ (ಚಿಕ್ಕಮಗಳೂರು) : ತಾಲೂಕಿನ ಹಳಿಯೂರು ಬಳಿ ರೈಲ್ವೆ ಹಳಿಯಲ್ಲಿ ಶುಕ್ರವಾರ ತೊಂದರೆ ಕಂಡುಬಂದ ಕಾರಣ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಬೇಕಿದ್ದ ರೈಲು ಮಧ್ಯಾಹ್ನ 3 ಗಂಟೆಯಿಂದ ಪಟ್ಟಣದ ರೈಲ್ವೇ ನಿಲ್ದಾಣದಲ್ಲಿಯೇ ನಿಂತಿದ್ದು, ಪ್ರಯಾಣಿಕರು ಪರದಾಡಿದರು.
Vijaya Karnataka Web CKM-28sid2a


ಬೆಂಗಳೂರು, ಮೈಸೂರು ಕಡೆಯಿಂದ ಶಿವಮೊಗ್ಗದತ್ತ ಚಲಿಸುವ ರೈಲುಗಳನ್ನು ಬೀರೂರು, ಕಡೂರು ಭಾಗದಲ್ಲಿ ನಿಲುಗಡೆ ಮಾಡಲಾಗಿತ್ತು. ಹಳಿಯೂರಿನ ಬಳಿ ರೈಲ್ವೆ ಹಳಿ ಕೆಳಗಡೆ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ಹಾದು ಹೋಗಿದೆ. ಈ ಹಿಂದೆಯೂ ಕೂಡ ಇದೇ ಜಾಗದಲ್ಲಿ ಕೆಲವು ಬಾರಿ ಸಮಸ್ಯೆ ಕಾಣಿಸಿಕೊಂಡಿತ್ತು. ಸಾರ್ವಜನಿಕರು ವಿಷಯ ತಿಳಿಸಿದ್ದರಿಂದ ಭಾರಿ ಅನಾಹುತ ತಪ್ಪಿತ್ತು. ನಿತ್ಯ ಹತ್ತಾರು ರೈಲುಗಳು ಈ ಮೂಲಕ ಶಿವಮೊಗ್ಗ, ಬೆಂಗಳೂರು ಕಡೆಗೆ ಸಂಚರಿಸುತ್ತವೆ. ಹಲವು ಬಾರಿ ಹಳಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರೂ ರೈಲ್ವೆ ಇಲಾಖೆ ಅಧಿಕಾರಿಗಳು ಶಾಶ್ವತ ಪರಿಹಾರದ ಹಾದಿ ಕಂಡುಕೊಳ್ಳುತ್ತಿಲ್ಲ. ನಿರಂತರ ನಿರ್ಲಕ್ಷ ್ಯ ವಹಿಸಿರುವುದರಿಂದ ಸಮಸ್ಯೆ ಪುನರಾವರ್ತನೆಯಾಗುತ್ತಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿರುಕು ಉಂಟಾದ ಸ್ಥಳದಲ್ಲಿ ರೈಲ್ವೇ ಇಲಾಖೆ ಅಧಿಕಾರಿಗಳು ಯಂತ್ರಗಳನ್ನು ಬಳಸಿ ಹಳಿ ಸರಿಪಡಿಸಲು ಮುಂದಾಗಿದ್ದರು. ಸಂಜೆ ಬಳಿಕ ಹಳಿಯಲ್ಲಿನ ತೊಂದರೆ ಸರಿಪಡಿಸಿದ್ದು, ರೈಲುಗಳು ಸಂಚಾರ ಆರಂಭಿಸಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ