ಆ್ಯಪ್ನಗರ

ಮಳೆ ಅಬ್ಬರ: ಕೆರೆಯಲ್ಲಿ ಮುಳುಗಿದ ಹಿಟಾಚಿ

ಕಡೂರು ತಾಲೂಕಿನ ಹಿರೇನಲ್ಲೂರು ಹೋಬಳಿಯಲ್ಲಿ ಭಾನುವಾರ ಸುರಿದ ಮಳೆಗೆ ಗಿರಿಯಾಪುರ ಗ್ರಾಮದ ಕೆರೆಯಲ್ಲಿ ರಸ್ತೆ ನಿರ್ಮಾಣಕ್ಕೆ ಮಣ್ಣು ಸಾಗಿಸಲು ಕಾರ್ಯ ನಿರ್ವಹಿಸುತ್ತಿದ್ದ ಹಿಟಾಚಿ ಯಂತ್ರ ಮುಳುಗಿ ಹೋಗಿದೆ.

Vijaya Karnataka 23 May 2018, 5:00 am
ಬೀರೂರು (ಚಿಕ್ಕಮಗಳೂರು) : ಕಡೂರು ತಾಲೂಕಿನ ಹಿರೇನಲ್ಲೂರು ಹೋಬಳಿಯಲ್ಲಿ ಭಾನುವಾರ ಸುರಿದ ಮಳೆಗೆ ಗಿರಿಯಾಪುರ ಗ್ರಾಮದ ಕೆರೆಯಲ್ಲಿ ರಸ್ತೆ ನಿರ್ಮಾಣಕ್ಕೆ ಮಣ್ಣು ಸಾಗಿಸಲು ಕಾರ್ಯ ನಿರ್ವಹಿಸುತ್ತಿದ್ದ ಹಿಟಾಚಿ ಯಂತ್ರ ಮುಳುಗಿ ಹೋಗಿದೆ.
Vijaya Karnataka Web rain hitachi drowned in the lake
ಮಳೆ ಅಬ್ಬರ: ಕೆರೆಯಲ್ಲಿ ಮುಳುಗಿದ ಹಿಟಾಚಿ


ಗಿರಿಯಾಪುರ ಗ್ರಾಮದ ಕೆರೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಈ ಯಂತ್ರ ಮಣ್ಣು ತೆಗೆಯುತ್ತಿತ್ತು. ಇಲ್ಲಿ ತೆಗೆದ ಮಣ್ಣನ್ನು ದಾವಣಗೆರೆ, ಬೀರೂರು ನಡುವೆ ನಿರ್ಮಿಸಲಾಗುತ್ತಿರುವ ಹೆದ್ದಾರಿ ಕೆಲಸದಲ್ಲಿ ಬಳಸಲಾಗುತ್ತಿತ್ತು. ಕೆರೆಯಲ್ಲಿ ಸುಮಾರು 20 ಅಡಿಗೂ ಹೆಚ್ಚು ಆಳಕ್ಕೆ ಮಣ್ಣು ಬಗಿಯಲಾಗಿದ್ದು, ಭಾನುವಾರ ಹಿಟಾಚಿ ಯಂತ್ರದ ಚಾಲಕ ಕೆಲಸ ಮುಗಿಸಿ ಕೆರೆಯಲ್ಲಿಯೇ ವಾಹನವನ್ನು ಬಿಟ್ಟು ಹೋಗಿದ್ದನು. ಅಂದು ಸಂಜೆ ಒಂದು ಗಂಟೆಕಾಲ ಸುರಿದ ಬಿರುಸುಮಳೆಗೆ ಹಿಟಾಚಿಯಂತ್ರವು ನೀರಿನಿಂದ ತುಂಬಿಹೋದ ಕೆರೆಯ ಮಧ್ಯದಲ್ಲಿ ಸಿಲುಕಿದೆ. 70 ಲಕ್ಷ ರೂ. ಮೌಲ್ಯದ ಯಂತ್ರವನ್ನು ಹೊರತೆಗೆಯಲು ಹರಸಾಹಸ ಪಡುವಂತಾಗಿದೆ.

ನೀರನ್ನು ಹೊರಹಾಕದೆ ಯಂತ್ರ ಹೊರತೆಗೆಯುವುದು ಸಾಧ್ಯವಿಲ್ಲವಾಗಿದ್ದು ಆಲ್ದೂರು, ಚಿಕ್ಕಮಗಳೂರುಗಳ ಎಸ್ಟೇಟ್‌ಗಳಿಂದ ತಂದ ನೂರು ಎಚ್‌ಪಿ ಸಾಮರ್ಥ್ಯ‌ದ ಮೋಟಾರುಗಳನ್ನು ಬಳಸಿ ನೀರು ಹೊರಹಾಕಲು ಮೂರು ದಿನಗಳಿಂದ ಯತ್ನಿಸಲಾಗುತ್ತಿದೆ. ಈವರೆಗೆ ಸುಮಾರು 2ಅಡಿ ನೀರು ಮಾತ್ರ ಖಾಲಿಯಾಗಿದೆ.

ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಕೂಡಾ ಸ್ಥಳದಲ್ಲಿದ್ದು ಅವಿರತ ಶ್ರಮ ನಡೆಸಿದ್ದಾರೆ. ಆದರೆ, ಮತ್ತೆ ಮಳೆ ಸುರಿದರೆ ಹಿಟಾಚಿ ಯಂತ್ರದ ಭವಿಷ್ಯ ಡೋಲಾಯಮಾನವಾಗುವ ಆತಂಕವಿದೆ. ಗ್ರಾಮಸ್ಥರಿಗೇನೋ ಕೆರೆಗೆ ನೀರು ಬಂದ ಬಗ್ಗೆ ಸಂತಸವಿದೆ. ಆದರೆ, ಈಗ ನೀರು ತೆಗೆಯುತ್ತಿದ್ದು, ಮತ್ತೆ ತುಂಬುವುದೋ ಇಲ್ಲವೋ ಎಂಬ ಆತಂಕ ಎದುರಾಗಿದೆ.

ಭಾನುವಾರದಂದು ಸುರಿದ ಮಳೆಗೆ ಉಮಾಮಹೇಶ್ವರಪ್ಪ ಎನ್ನುವವರ ದಾಸ್ತಾನು ಮಳಿಗೆಗೆ ನೀರು ನುಗ್ಗಿ ಮೆಕ್ಕೆಜೋಳ, ರಾಗಿ ಮತ್ತು ಬಿತ್ತನೆಗಾಗಿ ತೆಗೆದಿರಿಸಲಾಗಿದ್ದ ಕಡಲೆಕಾಳು ನಷ್ಟವಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ