ಚಿಕ್ಕಮಗಳೂರು : ಜಿಲ್ಲೆಯಲ್ಲಿ ಸತತ 1 ವಾರ ಸುರಿದ ಧಾರಾಕಾರ ಮಳೆ ಇನ್ನೇನು ಹೋಯಿತು ಎನ್ನುವಷ್ಟರಲ್ಲಿ ಮಲೆನಾಡು ಭಾಗದಲ್ಲಿ ಬುಧವಾರದಿಂದ ಮತ್ತೆ ಶುರುವಾಗಿದೆ.
ಬೋರ್ಗೆರೆದು ಸುರಿದ ಮಹಾಮಳೆಯಿಂದ ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗು ನರಸಿಂಹರಾಜಪುರ ತಾಲೂಕಿನಲ್ಲಿ ಅತೀವೃಷ್ಟಿಯಾಗಿದ್ದು, ಮೂಡಿಗೆರೆ ತಾಲೂಕಿನಲ್ಲಿ ಅತಿ ಹೆಚ್ಚು ಭೂಕುಸಿತವಾಗಿ ಜನ ಮನೆ ತೊರೆದು ಕಾಳಜಿ ಕೇಂದ್ರಗಳಲ್ಲಿದ್ದಾರೆ. ಇನ್ನೇನು ಮಳೆ ಬಿಡುವು ನೀಡಿತು ಎಂದು ಮಂಗಳವಾರ ಕೆಲವರು ತಮ್ಮ ಊರುಗಳತ್ತ ಹೆಜ್ಜೆ ಹಾಕಿದ್ದರು. ಮಳೆಯಿಂದ ಮನೆ ಕಳೆದುಕೊಂಡ ನಿರಾಶ್ರಿತರು ಕೂಡ ಇನ್ನೇನು ಊರಿಗೆ ತಲುಪಿ ಮುಂದೆ ಬದುಕು ಕಟ್ಟಿಕೊಳ್ಳುವ ಆಲೋಚನೆಯಲ್ಲಿರುವಾಗ ಮತ್ತೆ ಮಳೆ ಆರಂಭವಾಗಿದೆ.
ಮೂಡಿಗೆರೆ, ಕೊಟ್ಟಿಗೆಹಾರ , ಬಾಳೆಹೊನ್ನೂರು ಭಾಗದಲ್ಲಿ ಮಳೆ ತುಸು ಹೆಚ್ಚಾಗಿದ್ದು ನೆರೆ ಪೀಡಿತ ಪ್ರದೇಶದಲ್ಲಿ ಮತ್ತೆ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಇದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯ ಚಿಕ್ಕಮಗಳೂರು ಕಸಬಾ ಹೋಬಳಿ 3 ಮಿಮೀ, ಅಂಬಳೆ ಹೋಬಳಿ 2, ಆಲ್ದೂರು 8, ಸಂಗಮೇಶ್ವರಪೇಟೆ 10,ಕಳಸಾಪುರ 1, ಆವತಿ 8, ಜಾಗರ 6, ವಸ್ತಾರೆ 6, ಕಡೂರು ತಾಲೂಕಿನ ಸಿಂಗಟಗೆರೆ 2, ಯಗಟಿ 1, ಪಂಚನಹಳ್ಳಿ 5, ಕೊಪ್ಪ 11, ಹರಿಹರಪುರ 19,ಮೇಗುಂದ 18, ಮೂಡಿಗೆರೆ 3, ಬಣಕಲ್ 5, ಗೋಣಿಬೀಡು 4, ಕಳಸ 20, ಜಾವಳಿ 10, ನರಸಿಂಹರಾಜಪುರ 7, ಬಾಳೆಹೊನ್ನೂರು 9, ಶೃಂಗೇರಿ 19, ಕಿಗ್ಗಾ ಹೋಬಳಿಯಲ್ಲಿ 36ಮಿಮೀ ಮಳೆಯಾಗಿದೆ.
ಬೋರ್ಗೆರೆದು ಸುರಿದ ಮಹಾಮಳೆಯಿಂದ ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗು ನರಸಿಂಹರಾಜಪುರ ತಾಲೂಕಿನಲ್ಲಿ ಅತೀವೃಷ್ಟಿಯಾಗಿದ್ದು, ಮೂಡಿಗೆರೆ ತಾಲೂಕಿನಲ್ಲಿ ಅತಿ ಹೆಚ್ಚು ಭೂಕುಸಿತವಾಗಿ ಜನ ಮನೆ ತೊರೆದು ಕಾಳಜಿ ಕೇಂದ್ರಗಳಲ್ಲಿದ್ದಾರೆ. ಇನ್ನೇನು ಮಳೆ ಬಿಡುವು ನೀಡಿತು ಎಂದು ಮಂಗಳವಾರ ಕೆಲವರು ತಮ್ಮ ಊರುಗಳತ್ತ ಹೆಜ್ಜೆ ಹಾಕಿದ್ದರು. ಮಳೆಯಿಂದ ಮನೆ ಕಳೆದುಕೊಂಡ ನಿರಾಶ್ರಿತರು ಕೂಡ ಇನ್ನೇನು ಊರಿಗೆ ತಲುಪಿ ಮುಂದೆ ಬದುಕು ಕಟ್ಟಿಕೊಳ್ಳುವ ಆಲೋಚನೆಯಲ್ಲಿರುವಾಗ ಮತ್ತೆ ಮಳೆ ಆರಂಭವಾಗಿದೆ.
ಮೂಡಿಗೆರೆ, ಕೊಟ್ಟಿಗೆಹಾರ , ಬಾಳೆಹೊನ್ನೂರು ಭಾಗದಲ್ಲಿ ಮಳೆ ತುಸು ಹೆಚ್ಚಾಗಿದ್ದು ನೆರೆ ಪೀಡಿತ ಪ್ರದೇಶದಲ್ಲಿ ಮತ್ತೆ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಇದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯ ಚಿಕ್ಕಮಗಳೂರು ಕಸಬಾ ಹೋಬಳಿ 3 ಮಿಮೀ, ಅಂಬಳೆ ಹೋಬಳಿ 2, ಆಲ್ದೂರು 8, ಸಂಗಮೇಶ್ವರಪೇಟೆ 10,ಕಳಸಾಪುರ 1, ಆವತಿ 8, ಜಾಗರ 6, ವಸ್ತಾರೆ 6, ಕಡೂರು ತಾಲೂಕಿನ ಸಿಂಗಟಗೆರೆ 2, ಯಗಟಿ 1, ಪಂಚನಹಳ್ಳಿ 5, ಕೊಪ್ಪ 11, ಹರಿಹರಪುರ 19,ಮೇಗುಂದ 18, ಮೂಡಿಗೆರೆ 3, ಬಣಕಲ್ 5, ಗೋಣಿಬೀಡು 4, ಕಳಸ 20, ಜಾವಳಿ 10, ನರಸಿಂಹರಾಜಪುರ 7, ಬಾಳೆಹೊನ್ನೂರು 9, ಶೃಂಗೇರಿ 19, ಕಿಗ್ಗಾ ಹೋಬಳಿಯಲ್ಲಿ 36ಮಿಮೀ ಮಳೆಯಾಗಿದೆ.