ಆ್ಯಪ್ನಗರ

ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ

ಜಿಲ್ಲೆಯಲ್ಲಿ ಕಳೆದ ಕೆಲ ದಿನದಿಂದ ಬಿಡುವು ನೀಡಿದ್ದ ಮಳೆ ಗುರುವಾರ ರಾತ್ರಿಯಿಂದ ಮಲೆನಾಡು ಭಾಗದಲ್ಲಿ ಚುರುಕಾಗಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲೂಕುಗಳಲ್ಲಿ ಗುರುವಾರ ರಾತ್ರಿಯಿಂದಲೇ ಉತ್ತಮ ಮಳೆಯಾಗಿದೆ. ತುಂಗ, ಭದ್ರ ಹಾಗೂ ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

Vijaya Karnataka 27 Jul 2019, 6:46 pm
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕಳೆದ ಕೆಲ ದಿನದಿಂದ ಬಿಡುವು ನೀಡಿದ್ದ ಮಳೆ ಗುರುವಾರ ರಾತ್ರಿಯಿಂದ ಮಲೆನಾಡು ಭಾಗದಲ್ಲಿ ಚುರುಕಾಗಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲೂಕುಗಳಲ್ಲಿ ಗುರುವಾರ ರಾತ್ರಿಯಿಂದಲೇ ಉತ್ತಮ ಮಳೆಯಾಗಿದೆ. ತುಂಗ, ಭದ್ರ ಹಾಗೂ ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.
Vijaya Karnataka Web rainfall in malnadu district
ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ


ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಲ ಪ್ರದೇಶಗಳಲ್ಲಿಯೂ ಶುಕ್ರವಾರ ಬೆಳಗಿನಿಂದಲೂ ನಿರಂತರವಾಗಿ ಸೋನೆ ಮಳೆ ಸುರಿಯಿತು. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 13 ಮಿ.ಮೀ. ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಸರಾಸರಿ 9ಮಿ.ಮೀ, ಕಡೂರು ತಾಲೂಕಿನಲ್ಲಿ 2, ಕೊಪ್ಪ 19, ಮೂಡಿಗೆರೆ 24, ನರಸಿಂಹರಾಜಪುರ 13, ಶೃಂಗೇರಿ 42 ಹಾಗೂ ತರೀಕೆರೆ ತಾಲೂಕಿನಲ್ಲಿ 6 ಮಿ.ಮೀ. ಮಳೆಯಾಗಿದೆ.

ಹೋಬಳಿವಾರು ಮಳೆ ವಿವರ:

ಚಿಕ್ಕಮಗಳೂರು ತಾಲೂಕಿನ ಕಸಬಾ ಹೋಬಳಿ 36 ಮಿಮೀ, ಅಂಬಳೆ ಹೋಬಳಿ 6, ಆಲ್ದೂರು 10, ಸಂಗಮೇಶ್ವರಪೇಟೆ 19, ಕಳಸಾಪುರ 2, ಆವತಿ 16, ಜಾಗರ 10, ವಸ್ತಾರೆ 9, ಕಡೂರು ತಾಲೂಕಿನ ಬೀರೂರು 2, ಹಿರೇನಲ್ಲೂರು 1, ಸಖರಾಯಪಟ್ಟಣ 1, ಸಿಂಗಟಗೆರೆ 3, ಯಗಟಿ 1, ಹಿರೇಚೌಳೂರು 1, ಪಂಚನಹಳ್ಳಿ ಹೋಬಳಿಯಲ್ಲಿ 11 ಮಿ.ಮೀ. ಮಳೆಯಾಗಿದೆ.

ಕೊಪ್ಪ ತಾಲೂಕಿನ ಕಸಬಾ ಹೋಬಳಿಯಲ್ಲಿ 11, ಹರಿಹರಪುರ 17, ಮೇಗುಂದ 26, ಮೂಡಿಗೆರೆ ತಾಲೂಕಿನ ಕಸಬಾ 17, ಬಣಕಲ್‌ 22, ಗೋಣಿಬೀಡು 27, ಕಳಸ 25, ಜಾವಳಿ 24, ನರಸಿಂಹರಾಜಪುರ ತಾಲೂಕಿನ ಕಸಬಾ 13, ಬಾಳೆಹೊನ್ನೂರು 13, ಶೃಂಗೇರಿ 31, ಕಿಗ್ಗ 46, ತರೀಕೆರೆ ಕಸಬಾ 10, ಅಜ್ಜಂಪುರ 2, ಅಮೃತಾಪುರ 6, ಲಕ್ಕವಳ್ಳಿ 14, ಲಿಂಗದಹಳ್ಳಿ 3 ಹಾಗೂ ಶಿವನಿ ಹೋಬಳಿಯಲ್ಲಿ 1 ಮಿ.ಮೀ. ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ