ಆ್ಯಪ್ನಗರ

ಶೃಂಗೇರಿಯಲ್ಲಿ ಜಡಿ ಮಳೆ

ತಾಲೂಕಿನಾದ್ಯಾಂತ ಸತತ ಎರಡನೇ ದಿನ ಮುಂಗಾರು ಮಳೆ ಚುರುಕಾಗಿದ್ದು,ದಿನವಿಡಿ ಜಡಿ ಮಳೆಯಾಗಿದೆ.

Vijaya Karnataka 10 Jun 2018, 5:00 am
ಶೃಂಗೇರಿ : ತಾಲೂಕಿನಾದ್ಯಾಂತ ಸತತ ಎರಡನೇ ದಿನ ಮುಂಗಾರು ಮಳೆ ಚುರುಕಾಗಿದ್ದು,ದಿನವಿಡಿ ಜಡಿ ಮಳೆಯಾಗಿದೆ.
Vijaya Karnataka Web rainfall in sringeri
ಶೃಂಗೇರಿಯಲ್ಲಿ ಜಡಿ ಮಳೆ


ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರಿದಿದ್ದು,ತುಂಗಾ ನದಿಯಲ್ಲಿ ಸತತವಾಗಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.ತುಂಗಾ ನದಿ ಪಾತ್ರದ ಕೆರೆಕಟ್ಟೆ,ಗುಲಗಂಜಿಮನೆ,ಮಾತೊಳ್ಳಿ,ಹಾಲ್ಮಕ್ಕಿ,ಮೀನುಗರಡಿ,ಹೆಮ್ಮಿಗೆ,ಬುಕಡಿಬೈಲು,ನೆಮ್ಮಾರ್‌ ಭಾಗದಲ್ಲಿ ಸತತ ಮಳೆಯಾಗಿದ್ದು,ಇದರಿಂದ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ತುಂಗಾ ನದಿ ದಂಡೆಯಲ್ಲಿರುವ ಕಪ್ಪೆ ಶಂಕರ ಪ್ರವಾಹದ ನೀರಿನಿಂದ ಆವೃತ್ತವಾಗಿದೆ. ಶ್ರೀಮಠದಲ್ಲಿ ಭಕ್ತಾದಿಗಳ ಸಂಖ್ಯೆ ಸಾಕಷ್ಟಿದ್ದು,ಮಳೆಯಿಂದ ಪರದಾಡಿದರು.

ಪಟ್ಟಣದಿಂದ ಆಗುಂಬೆ ಕಡೆ ಸಾಗುವ ರಾಜ್ಯ ಹೆದ್ದಾರಿಯ ಕೈಮನೆ ಸಮೀಪ ರಸ್ತೆ ಬದಿಯ ಅಕೇಶಿಯಾ ಮರಗಳು ಬುಡ ಸಹಿತ ರಸ್ತೆಗೆ ಉರುಳಿ ಬಿದ್ದಿದ್ದರಿಂದ ಬೆಳಗ್ಗೆ ಸಂಚಾರಕ್ಕೆ ಅಡ್ಡಿಯಾಗಿತ್ತು.ಶಾಲೆ ಮಕ್ಕಳು,ಮಣಿಪಾಲಕ್ಕೆ ತೆರಳುತ್ತಿದ್ದ ರೋಗಿಗಳಿಗೆ ಇದರಿಂದ ತೊಂದರೆ ಉಂಟಾಯಿತು.ರಭಸವಾದ ಗಾಳಿಯಿಂದ ಹಲವಾರು ಕಡೆ ವಿದ್ಯುತ್‌ ಕಂಬ ನೆಲಕ್ಕೆ ಉರುಳಿದ್ದು,ತಾಲೂಕಿನಾದ್ಯಾಂತ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಅಡಕೆ ತೋಟದಲ್ಲಿ ಮರಗಳು ನೆಲಕ್ಕೆ ಉರುಳಿ ಬಿದ್ದಿದೆ.ಶಾಲೆ ಕಾಲೇಜಿಗೆ ರಜೆ ನೀಡದಿದ್ದರೂ,ವಿದ್ಯಾರ್ಥಿಗಳ ಸಂಖ್ಯೆ ಕುಸಿದಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ