ಶೃಂಗೇರಿ: ತಾಲೂಕಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ಪುನರ್ವಸು ಮಳೆ ಚುರುಕಾಗಿದ್ದು, ಸೋಮವಾರ ಬೆಳಗ್ಗೆಯಿಂದ ಆರ್ಭಟಿಸುತ್ತಿದೆ.
ಪಟ್ಟಣ ಸೇರಿದಂತೆ ಕಸಬಾ, ಕಿಗ್ಗಾ ಹೋಬಳಿಯಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ತುಂಗಾ ನದಿಯ ನೀರಿನ ಮಟ್ಟ ಸತತವಾಗಿ ಏರಿಕೆಯಾಗುತ್ತಿದೆ.
ಕಳೆದ 24 ಗಂಟೆಯಲ್ಲಿ ಶೃಂಗೇರಿಯಲ್ಲಿ 134 ಮಿ.ಮೀ, ಕಿಗ್ಗಾ 143 ಮತ್ತು ಕೆರೆಕಟ್ಟೆಯಲ್ಲಿ 94 ಮಿ.ಮೀ ಮಳೆ ದಾಖಲಾಗಿದೆ.
ಸೋಮವಾರ ಬೆಳಗ್ಗೆಯಿಂದ ಮೆಣಸೆ ಗ್ರಾ.ಪಂ. ವ್ಯಾಪ್ತಿಯ ಕಿಕ್ರೆ ಹಳ್ಳದ ನೀರು ಸೇತುವೆ ಮೇಲೆ ಹರಿದ ಪರಿಣಾಮ ಸಂಚಾರ ಬಂದ್ ಆಗಿದೆ. ಇದರಿಂದ ಸಸಿಮನೆ-ಕೆರೆಮನೆ ಮೂಲಕ ಸಂಚರಿಸುತ್ತಿದ್ದ ಗ್ರಾಮಸ್ಥರಿಗೆ ಮಧ್ಯಾಹ್ನ ಮರಟೆ ಹಳ್ಳವೂ ಉಕ್ಕಿ ಹರಿದಿದ್ದರಿಂದ ಇಲ್ಲಿಯೂ ಸಂಚರಿಸಲು ತೊಂದರೆ ಉಂಟಾಯಿತು. ಕಿಕ್ರೆ ಗ್ರಾಮದ ಮೇಗಳಬೈಲು, ಕೊಂಡಗೆರೆ, ಜೈನರಮಕ್ಕಿ,ಕೆಳಕೊಡಿಗೆ,ಕೆಳಕೊಪ್ಪ,ಸಸಿಮನೆ,ಎತ್ತನಟ್ಟಿ ಮುಂತಾದ ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದ್ದರಿಂದ ಕಾಲೇಜು ವಿದ್ಯಾರ್ಥಿಗಳು ಹಾಗೂ ಪಟ್ಟಣಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಹಳ್ಳಕ್ಕೆ ಅಳವಡಿಸಿರುವ ಪೈಪ್ನಲ್ಲಿ ಕಸ ಕಡ್ಡಿ ತುಂಬಿಕೊಂಡಿದ್ದರಿಂದ ಪದೇ ಪದೇ ಸೇತುವೆ ಮೇಲೆ ಸಂಚಾರ ಬಂದ್ ಆಗುತ್ತಿದೆ. ಶಾಲೆಗಳಿಗೆ ಬೆಳಗ್ಗೆ ರಜೆ ನೀಡಲಾಗಿತ್ತಾದರೂ, ಕಾಲೇಜುಗಳಿಗೆ ರಜೆ ನೀಡಿರಲಿಲ್ಲ.
ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಸಂಜೆಯೂ ಮಳೆಯ ಆರ್ಭಟ ಮುಂದುವರಿದಿದ್ದು, ನದಿಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.
ಪಟ್ಟಣ ಸೇರಿದಂತೆ ಕಸಬಾ, ಕಿಗ್ಗಾ ಹೋಬಳಿಯಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ತುಂಗಾ ನದಿಯ ನೀರಿನ ಮಟ್ಟ ಸತತವಾಗಿ ಏರಿಕೆಯಾಗುತ್ತಿದೆ.
ಕಳೆದ 24 ಗಂಟೆಯಲ್ಲಿ ಶೃಂಗೇರಿಯಲ್ಲಿ 134 ಮಿ.ಮೀ, ಕಿಗ್ಗಾ 143 ಮತ್ತು ಕೆರೆಕಟ್ಟೆಯಲ್ಲಿ 94 ಮಿ.ಮೀ ಮಳೆ ದಾಖಲಾಗಿದೆ.
ಸೋಮವಾರ ಬೆಳಗ್ಗೆಯಿಂದ ಮೆಣಸೆ ಗ್ರಾ.ಪಂ. ವ್ಯಾಪ್ತಿಯ ಕಿಕ್ರೆ ಹಳ್ಳದ ನೀರು ಸೇತುವೆ ಮೇಲೆ ಹರಿದ ಪರಿಣಾಮ ಸಂಚಾರ ಬಂದ್ ಆಗಿದೆ. ಇದರಿಂದ ಸಸಿಮನೆ-ಕೆರೆಮನೆ ಮೂಲಕ ಸಂಚರಿಸುತ್ತಿದ್ದ ಗ್ರಾಮಸ್ಥರಿಗೆ ಮಧ್ಯಾಹ್ನ ಮರಟೆ ಹಳ್ಳವೂ ಉಕ್ಕಿ ಹರಿದಿದ್ದರಿಂದ ಇಲ್ಲಿಯೂ ಸಂಚರಿಸಲು ತೊಂದರೆ ಉಂಟಾಯಿತು. ಕಿಕ್ರೆ ಗ್ರಾಮದ ಮೇಗಳಬೈಲು, ಕೊಂಡಗೆರೆ, ಜೈನರಮಕ್ಕಿ,ಕೆಳಕೊಡಿಗೆ,ಕೆಳಕೊಪ್ಪ,ಸಸಿಮನೆ,ಎತ್ತನಟ್ಟಿ ಮುಂತಾದ ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದ್ದರಿಂದ ಕಾಲೇಜು ವಿದ್ಯಾರ್ಥಿಗಳು ಹಾಗೂ ಪಟ್ಟಣಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಹಳ್ಳಕ್ಕೆ ಅಳವಡಿಸಿರುವ ಪೈಪ್ನಲ್ಲಿ ಕಸ ಕಡ್ಡಿ ತುಂಬಿಕೊಂಡಿದ್ದರಿಂದ ಪದೇ ಪದೇ ಸೇತುವೆ ಮೇಲೆ ಸಂಚಾರ ಬಂದ್ ಆಗುತ್ತಿದೆ. ಶಾಲೆಗಳಿಗೆ ಬೆಳಗ್ಗೆ ರಜೆ ನೀಡಲಾಗಿತ್ತಾದರೂ, ಕಾಲೇಜುಗಳಿಗೆ ರಜೆ ನೀಡಿರಲಿಲ್ಲ.
ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಸಂಜೆಯೂ ಮಳೆಯ ಆರ್ಭಟ ಮುಂದುವರಿದಿದ್ದು, ನದಿಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.