ಆ್ಯಪ್ನಗರ

ರಾಮಾಯಣ, ಮಹಾಭಾರತ ವಿಶ್ವಕ್ಕೆ ಮಾರ್ಗದರ್ಶಿ

ಭರತ ಖಂಡದ ಆಧ್ಯಾತ್ಮಿಕ ಗ್ರಂಥಗಳು ವಿಶ್ವಕ್ಕೇ ಮಾರ್ಗದರ್ಶಕಗಳಾಗಿವೆ. ಅದರಲ್ಲಿಯೂ ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಪ್ರಪಂಚದ ಎಲ್ಲ ಜನಾಂಗದವರೂ ಅನುಸರಿಸುವ ಮಹೋನ್ನತ ಮಾನವೀಯ ಮೌಲ್ಯಹೊಂದಿವೆ ಎಂದು ಗಮಕಿ ರಾಮಸುಬ್ರಾಯ ಶೇಟ್‌ ಹೇಳಿದರು.

Vijaya Karnataka 12 Aug 2019, 10:57 pm
ಚಿಕ್ಕಮಗಳೂರು : ಭರತ ಖಂಡದ ಆಧ್ಯಾತ್ಮಿಕ ಗ್ರಂಥಗಳು ವಿಶ್ವಕ್ಕೇ ಮಾರ್ಗದರ್ಶಕಗಳಾಗಿವೆ. ಅದರಲ್ಲಿಯೂ ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಪ್ರಪಂಚದ ಎಲ್ಲ ಜನಾಂಗದವರೂ ಅನುಸರಿಸುವ ಮಹೋನ್ನತ ಮಾನವೀಯ ಮೌಲ್ಯಹೊಂದಿವೆ ಎಂದು ಗಮಕಿ ರಾಮಸುಬ್ರಾಯ ಶೇಟ್‌ ಹೇಳಿದರು.
Vijaya Karnataka Web ramayana mahabharata a guide to the world
ರಾಮಾಯಣ, ಮಹಾಭಾರತ ವಿಶ್ವಕ್ಕೆ ಮಾರ್ಗದರ್ಶಿ


ಬೆಂಗಳೂರಿನ ರಾಜಾಜಿನಗರದ ಮಹಾಲಕ್ಷ್ಮಿ ಬಡಾವಣೆಯ ಶರಣ ಸೇವಾ ಸದನದ ಮಹಾಮನೆ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಮಾಯಣ, ಮಹಾಭಾರತದ ಮೌಲ್ಯದ ಪರಿಕಲ್ಪನೆ ಮತ್ತು ಗಮಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಈ 2 ಮಹಾ ಗ್ರಂಥಗಳಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದ ಅವರು, ರಾಮಾಯಣದಲ್ಲಿನ ಸತ್ಯ ಸಂಧತೆ, ಭ್ರಾತೃಪ್ರೇಮ, ಪಿತೃವಾಕ್ಯ ಪರಿಪಾಲನೆ, ರಾಜ ಧರ್ಮ, ರಾಮರಾಜ್ಯದ ಆದರ್ಶಗಳನ್ನು ವಿವರಿಸಿದರು.

ರಾಮ್‌ಸುಬ್ರಾಯ ಶೇಟ್‌ ಅವರು ಭಾಮಿನಿ ಷಟ್ಪದಿಯಲ್ಲಿ ರಚಿಸಿರುವ 'ಗಮಕ ನೂರೆಂಟು' ಕೃತಿಯ 'ದುರಾಸೆಯಿಂದ ನಾಶ ಹೊಂದಿದ ನಹುಷ' ಭಾಗವನ್ನು ಗಮಕಿ ಶೋಭಾ ಶಶಿಧರ್‌ ಸುಶ್ರಾವ್ಯವಾಗಿ ಗಾಯನ ಮಾಡಿದರು. ಅದಕ್ಕೆ ಶೇಟ್‌ ಅವರು ಅರ್ಥಪೂರ್ಣ ವ್ಯಾಖ್ಯಾನ ನೀಡಿದರು.

ದೊರಕಿದ ಅಧಿಕಾರವನ್ನು ದುರಾಸೆಯಿಂದ, ಸ್ವಾರ್ಥದಿಂದ ದುರುಪಯೋಗಪಡಿಸಿಕೊಳ್ಳದೆ ಪರೋಪಕಾರಿಗಳಾಗಿ ಸೇವೆ ಮಾಡಬೇಕು ಎಂದರು. ಶೇಟ್‌ ಅವರ ಮತ್ತೊಂದು ಕೃತಿ 'ಪಾರ್ಥನ ಸಾರ್ಥಕ ಬದುಕು' ಲೋಕಾರ್ಪಣೆ ಮಾಡಲಾಯಿತು. ರವಿಭಟ್ಟ ಸ್ವಾಗತಿಸಿ, ರಾಘವೇಂದ್ರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ