ಆ್ಯಪ್ನಗರ

ರಥಸಪ್ತಮಿಗೆ ಸಾಮೂಹಿಕ ಸೂರ‍್ಯನಮಸ್ಕಾರ

ಪತಂಜಲಿ ಯೋಗ ಶಿಕ್ಷಣ ಸಮಿತಿ ನೇತೃತ್ವದಲ್ಲಿ ರಥಸಪ್ತಮಿ ಅಂಗವಾಗಿ ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ಸಾಮೂಹಿಕ ಸೂರ್ಯ ನಮಸ್ಕಾರ ನಡೆಯಿತು.

Vijaya Karnataka 13 Feb 2019, 5:00 am
ಚಿಕ್ಕಮಗಳೂರು : ಪತಂಜಲಿ ಯೋಗ ಶಿಕ್ಷಣ ಸಮಿತಿ ನೇತೃತ್ವದಲ್ಲಿ ರಥಸಪ್ತಮಿ ಅಂಗವಾಗಿ ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ಸಾಮೂಹಿಕ ಸೂರ್ಯ ನಮಸ್ಕಾರ ನಡೆಯಿತು.
Vijaya Karnataka Web CKM-12aragap2


ಬೆಳಗ್ಗೆ 5.30ಕ್ಕೆ ಜಮಾಯಿಸಿದ ಯೋಗಾಸಕ್ತರು ಬೆಳಗ್ಗೆ 8ರ ವರೆಗೆ ಯೋಗಾಭ್ಯಾಸ, ಸೂರ‍್ಯನಮಸ್ಕಾರ ಪ್ರದರ್ಶನ ನೀಡಿದರು. ವೃದ್ಧರು, ಮಹಿಳೆಯರು, ಯುವಜನರು, ಮಕ್ಕಳು ಪಾಲ್ಗೊಂಡಿದ್ದು, ಸೂರ್ಯೋದಯದೊಂದಿಗೆ ಸೂರ‍್ಯನಮಸ್ಕಾರ ಗಮನ ಸೆಳೆಯಿತು. ವಾಯುವಿಹಾರ, ವಿವಿಧ ಕ್ರೀಡಾ ಕಸರತ್ತುಗಳಿಗೆ ಬಂದಿದ್ದವರು ಕೂಡ ಸಾಮೂಹಿಕ ಸೂರ‍್ಯ ನಮಸ್ಕಾರದಲ್ಲಿ ಪಾಲ್ಗೊಂಡರು.

ಸೂರ‍್ಯ ನಮಸ್ಕಾರದ ವಿಶೇಷತೆ ಬಗ್ಗೆ ಯೋಗ ಶಿಕ್ಷಕರಿಂದ ಅರಿತುಕೊಂಡು ತಾವೂ ಅಭ್ಯಾಸ ಮಾಡುವ ಸಂಕಲ್ಪ ಮಾಡಿದರು. ಯೋಗ ಶಿಕ್ಷಕರಾದ ಶಿವಕುಮಾರ್‌, ಗೀತಾ ಸೂರ‍್ಯ ನಮಸ್ಕಾರ ಮಾಡುವ ಕ್ರಮದ ಬಗ್ಗೆ ಹೇಳಿಕೊಟ್ಟರು.

ಪಲ್ಲವಿ ರವಿ ಮಾತನಾಡಿ, ಫ್ಯಾಷನ್‌ಗಾಗಿ ಯೋಗಾಭ್ಯಾಸ ಮಾಡಬಾರದು. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳುವ ದೃಷ್ಟಿಯಿಂದ ಯೋಗವನ್ನು ಅಳವಡಿಸಿಕೊಂಡು ದೇಹದಂಡನೆ ಮಾಡಬೇಕು. ಯುವಜನರು ಮೊಬೈಲನ್ನೇ ಜಗತ್ತು ಎಂದು ತಿಳಿದುಕೊಂಡಿದ್ದಾರೆ. ಅದರಿಂದ ಹೊರಬಂದು ಉತ್ತಮ ಆರೋಗ್ಯಕ್ಕಾಗಿ ಯೋಗವನ್ನು ಅಭ್ಯಾಸ ಮಾಡಬೇಕು. ಹಿಂದೆ ಮನೆ ಕೆಲಸಗಳೇ ಯೋಗ ಮಾಡಿಸುತ್ತಿದ್ದವು. ಇಂದು ಎಲ್ಲದಕ್ಕೂ ತಾಂತ್ರಿಕತೆ ಬಂದುಬಿಟ್ಟಿದೆ. ಹಾಗಾಗಿ ಯೋಗ ಅತ್ಯಗತ್ಯವಾಗಿದೆ ಎಂದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ ನಗರ ಸಂಚಾಲಕಿ ಪುಷ್ಪ ಮಾತನಾಡಿ, ರಥಸಪ್ತಮಿ ದಿನ ಸಮಿತಿಯಿಂದ ಪ್ರತಿವರ್ಷ ಸಾಮೂಹಿಕ ಸೂರ‍್ಯ ನಮಸ್ಕಾರ ಕಾರ‍್ಯಕ್ರಮ ಆಯೋಜಿಸಲಾಗುತ್ತಿದೆ. ಈ ವರ್ಷ ಹೆಚ್ಚುಮಂದಿ ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ. ಯೋಗ ಎಲ್ಲ ಜನರಿಗೂ ಮುಟ್ಟಬೇಕು ಎಂಬುದು ಪ್ರಮುಖ ಉದ್ದೇಶ ಎಂದು ಹೇಳಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಸಂಚಾಲಕರಾದ ಗೌತಮ್‌ಪ್ರಭು, ಸುಮಿತ್ರ ಹಾಜರಿದ್ದರು. ಅಕ್ಷತಾ ಸ್ವಾಗತಿಸಿ, ಮಂಜುಳ ನಿರೂಪಿಸಿದರು. ಚೇತನ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ