ಆ್ಯಪ್ನಗರ

ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಸಿದ್ಧ ಮಾದರಿ ಕುರಿಗೊಬ್ಬರ..!

ರೈತರಿಂದ ಕುರಿ ಗೊಬ್ಬರ ಖರೀದಿಸಿ ಅದನ್ನು ಸಿದ್ಧ ಮಾದರಿಗೆ ತಂದು ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ವಿತರಿಸಲು ಸಿದ್ಧತೆ ನಡೆದಿದೆ. ವಿಶೇಷವಾಗಿ ಕೈತೋಟಗಳಿಗೆ 5ಕೆಜಿ ಕುರಿ ಗೊಬ್ಬರವನ್ನು ತಾಂತ್ರಿಕ ವಿಶೇಷತೆಯೊಂದಿಗೆ ಸಿದ್ಧಪಡಿಸಲಿದ್ದು, ಇದಕ್ಕೆ ನಬಾರ್ಡ್‌ ನೆರವು ನೀಡಲಿದೆ ಎಂದು ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಎ.ಎನ್‌.ಮಹೇಶ್‌ ಹೇಳಿದರು.

Vijaya Karnataka Web 24 Dec 2020, 8:51 am
ಚಿಕ್ಕಮಗಳೂರು: ಸಿದ್ಧ ಮಾದರಿಯ ಕುರಿ ಗೊಬ್ಬರವನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಕುರಿ ಮತ್ತು ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಎ.ಎನ್‌.ಮಹೇಶ್‌ ಹೇಳಿದರು.
Vijaya Karnataka Web Goats and sheeps
ಸಾಂದರ್ಭಿಕ ಚಿತ್ರ


ನಗರದ ಜಿಲ್ಲಾ ಸ್ಕೌಟ್ಸ್‌ ಭವನದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಕುರಿ ಮತ್ತು ಉಣ್ಣೆ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುರಿ ಸಾಕಣೆದಾರರಿಗೆ ಸೂಕ್ತ ಮಾರ್ಗದರ್ಶನ, ಮಹಿಳಾ ಕುರಿಗಾರರಿಗೆ ಆರ್ಥಿಕ ಚೈತನ್ಯಕ್ಕೆ ಕುರಿಮಿತ್ರ ಸಂಘಗಳ ರಚನೆಗೆ ಆದ್ಯತೆ ನೀಡಲಾಗಿದೆ. ಇದುವರೆಗೆ 1 ಕೋಟಿ ರೂ.ಗಳವರೆಗೆ ಸಾಲಸೌಲಭ್ಯ ಕಲ್ಪಿಸಲಾಗಿದೆ ಎಂದರು.

ತೆಂಗು ಬೆಳೆಗಾರರಿಗೆ ಗುಡ್‌ನ್ಯೂಸ್:‌ ತೆಂಗು ಬೆಳೆ ಉದ್ಯಮಕ್ಕೆ ಸಿಗುತ್ತೆ 10 ಲಕ್ಷ ರೂ. ಸಾಲ..! ಇಲ್ಲಿದೆ ವಿವರ

ಕುರಿಗಾರರಿಗೆ ಮಾರುಕಟ್ಟೆ ಸೌಲಭ್ಯ ಅಗತ್ಯವಾಗಿದೆ. ಮಾಂಸ, ಚರ್ಮ, ಕುರಿ ಗೊಬ್ಬರಕ್ಕೆ ಉತ್ತಮ ಮಾರುಕಟ್ಟೆ ಬೇಕಿದೆ. ಮಾಂಸ ಮಾರುಕಟ್ಟೆ ಮಳಿಗೆ ತೆರೆಯಲು ಸಂಘ ಉದ್ದೇಶಿಸಿದೆ. ರೈತರಿಂದ ಕುರಿ ಗೊಬ್ಬರ ಖರೀದಿಸಿ ಅದನ್ನು ಸಿದ್ಧ ಮಾದರಿಗೆ ತಂದು ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ವಿತರಿಸಲು ಸಿದ್ಧತೆ ನಡೆದಿದೆ. ವಿಶೇಷವಾಗಿ ಕೈತೋಟಗಳಿಗೆ 5ಕೆಜಿ ಕುರಿ ಗೊಬ್ಬರವನ್ನು ತಾಂತ್ರಿಕ ವಿಶೇಷತೆಯೊಂದಿಗೆ ಸಿದ್ಧಪಡಿಸಲಿದ್ದು, ಇದಕ್ಕೆ ನಬಾರ್ಡ್‌ ನೆರವು ನೀಡಲಿದೆ ಎಂದು ಹೇಳಿದರು.

ತವರಿಗೆ ತೆರಳಿದ್ದ ಪತ್ನಿಗೆ ಮತ್ತು ಅತ್ತೆ-ಮಾವನಿಗೆ ಗಂಭೀರ ಹಲ್ಲೆ..! ಯೋಧನ ವಿರುದ್ಧ ದೂರು ದಾಖಲು..!

ಸಂಘದಲ್ಲಿ1600 ಸದಸ್ಯರಿದ್ದು, ಲಾಭದಲ್ಲಿ ಮುನ್ನಡೆಯುತ್ತಿದೆ. ಸದಸ್ಯರಿಂದ ಠೇವಣಿ ಸಂಗ್ರಹಿಸುವ ಗುರಿ ಇದೆ. ಜಿಲ್ಲೆಯಲ್ಲಿ 50 ಸಾವಿರ ಅಸಂಘಟಿತ ಕುರಿಗಾರರಿದ್ದು, 10 ಲಕ್ಷಕ್ಕೂ ಹೆಚ್ಚು ಕುರಿ ಸಾಕಣೆ ಮಾಡಲಾಗುತ್ತಿದೆ. ಕುರಿ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ ಒಂದು ಸಾವಿರ ಕೋಟಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ