ಆ್ಯಪ್ನಗರ

ಪೋಟೊ ಮೂಲಕ ನೆನಪಿನ ಬುತ್ತಿ ದಾಖಲು

ಹುಟ್ಟಿದ ಮಗುವಿನಿಂದ ವೃದ್ಯಾಪ್ಯದವರೆಗೆ ಪೋಟೊವನ್ನು ತೆಗೆದು ನೆನಪಿನ ಬುತ್ತಿಯನ್ನು ದಾಖಲು ಮಾಡುತ್ತೇವೆ ಎಂದು ತಾಲೂಕು ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಅಭಿನವ ಗಿರಿರಾಜ್‌ ತಿಳಿಸಿದರು.

Vijaya Karnataka 20 Aug 2019, 5:00 am
ನರಸಿಂಹರಾಜಪುರ : ಹುಟ್ಟಿದ ಮಗುವಿನಿಂದ ವೃದ್ಯಾಪ್ಯದವರೆಗೆ ಪೋಟೊವನ್ನು ತೆಗೆದು ನೆನಪಿನ ಬುತ್ತಿಯನ್ನು ದಾಖಲು ಮಾಡುತ್ತೇವೆ ಎಂದು ತಾಲೂಕು ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಅಭಿನವ ಗಿರಿರಾಜ್‌ ತಿಳಿಸಿದರು.
Vijaya Karnataka Web CKM-19nrp2


ತಾಲೂಕಿನ ಗುಬ್ಬಿಗಾ ಹಿರಿಯ ಸರಕಾರಿ ಶಾಲೆ ಆವರಣದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ಆಶ್ರಯದಲ್ಲಿ ಸೋಮವಾರ ನಡೆದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಕೃತಿ ಉಳಿವಿಗೆ ಮುಂದಾಗದಿದ್ದರೆ ಏನಾಗುತ್ತದೆ ಎಂದು ಈ ವರ್ಷ ಮಳೆಯ ರುದ್ರ ನರ್ತನದಿಂದ ಗೊತ್ತಾಗಿದೆ. ಮನುಷ್ಯನ ದುರಾಸೆಯಿಂದ ಹಳ್ಳ, ಕಾಲುವೆ ಒತ್ತುವರಿ ಮಾಡಿ ಮನೆ, ಜಮೀನು ಮಾಡಿದ್ದರ ಪರಿಣಾಮವಾಗಿ ಪ್ರವಾಹದಿಂದ ಸಾವು ನೋವು ಜಾಸ್ತಿಯಾಗಿದೆ. ಗಿಡ, ಮರ, ಗುಡ್ಡ,ಬೆಟ್ಟ,ನದಿ ಸೇರಿದಂತೆ ಪ್ರಕೃತಿಯನ್ನು ವಿರೂಪ ಮಾಡಬಾರದು. ಗುಡ್ಡವನ್ನು ಅಗೆದು ರೆಸಾರ್ಟ್‌ ಮಾಡಿದ್ದರ ಪರಿಣಾಮ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಪ್ರಕೃತಿಯನ್ನು ರಕ್ಷಿಸಬೇಕು, ಮಕ್ಕಳು ಶಾಲಾ ಹಂತದಲ್ಲೇ ಪರಿಸರದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಗುಬ್ಬಿಗಾ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಜಯರಾಂ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಎಂ.ಓ.ಜೋಯಿ ಮಾತನಾಡಿದರು. ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಲ್‌.ಪಿ.ಜಗದೀಶ್‌ ಅಧ್ಯಕ್ಷತೆ ವಹಿಸಿದ್ದರು.

ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ಎಲಿಯಾಸ್‌, ಉಪಾಧ್ಯಕ್ಷ ರಾದ ಸೀಬು, ಪ್ರವೀಣ್‌, ಖಜಾಂಚಿ ಸಾಜು, ಸಂಘಟನಾ ಕಾರ್ಯದರ್ಶಿ ಜೋಬಿಚೆರಿಯನ್‌, ಮುಖ್ಯಶಿಕ್ಷಕ ಎಂ.ಪಿ.ಜೋಯಿ ಹಾಜರಿದ್ದರು.

ಜುಬೇದ ಸ್ವಾಗತಿಸಿ, ಮೋಹನ್‌ ರಾಜ್‌ ನಿರೂಪಿಸಿ, ವಿಜು ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ