ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಿದರಹಳ್ಳಿ ನಿರಾಶ್ರಿತರ ಕೇಂದ್ರದಲ್ಲಿರುವವರನ್ನು ಬಲವಂತವಾಗಿ ಹೊರಕಳಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಮಧುಗುಂಡಿ ನಿರಾಶ್ರಿತರು ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ನೇತೃತ್ವ ಸೋಮವಾರ ನಗರದಲ್ಲಿಪ್ರತಿಭಟನೆ ನಡೆಸಿದರು.
ಈ ಸಂದರ್ಭ ನಿರಾಶ್ರಿತರು, ಕೆಲ ಅಧಿಕಾರಿ ಮತ್ತು ಜನಪ್ರತಿನಿಧಿಗಳು ನಿರಾಶ್ರಿತ ಕೇಂದ್ರಕ್ಕೆ ಬಂದು ಮಳೆ ಸಂಪೂರ್ಣವಾಗಿ ನಿಂತಿದೆ. ಗ್ರಾಮಗಳಿಗೆ ತೆರಳಿ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ನಿರಾಶ್ರಿತರು ಪ್ರತಿಭಟಿಸುತ್ತಿರುವ ವಿಷಯ ತಿಳಿದ ಎಡಿಸಿ ಡಾ.ಕುಮಾರ್ ಸ್ಥಳಕ್ಕೆ ಆಗಮಿಸಿ ನಿರಾಶ್ರಿತರ ಸಮಸ್ಯೆ ಆಲಿಸಿದರು. ಈಗಾಗಲೇ 120 ನಿರಾಶ್ರಿತರು ಬಿದರಳ್ಳಿ ನಿರಾಶ್ರಿತರ ಕೇಂದ್ರದಲ್ಲಿಆಶ್ರಯ ಪಡೆದಿದ್ದಾರೆ. ಮಲೆಮನೆ, ಮಧುಗುಂಡಿ, ಅಲೆಖಾನೆ ಹೊರಟ್ಟಿ ನಿರಾಶ್ರಿತರನ್ನು ಯಾವುದೇ ಕಾರಣಕ್ಕೂ ಒತ್ತಾಯ ಪೂರ್ವಕವಾಗಿ ಹೊರಗೆ ಕಳುಹಿಸುತ್ತಿಲ್ಲ. ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳುವ ಅಥವಾ ಬಾಡಿಗೆ ಮನೆ ಹುಡುಕಿಕೊಳ್ಳುವವರಿಗೆ ಇದ್ದಷ್ಟು ದಿನ ಇಲ್ಲಿರಲು ಅವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ನಿರಾಶ್ರಿತ ಕೇಂದ್ರದಿಂದ ಹೊರಹೋದರೆ ಪ್ರತಿ ತಿಂಗಳು 5 ಸಾವಿರದಂತೆ 10 ತಿಂಗಳಿಗಾಗುವ ಬಾಡಿಗೆ ಹಣವನ್ನು ಇಡಿಗಂಟಾಗಿ ಕೊಡುವುದಾಗಿ ತಿಳಿಸಿ ನಿರಾಶ್ರಿತ ಕೇಂದ್ರದಿಂದ ಹೊರಹೋಗುವಂತೆ ಒತ್ತಾಯಿಸಲಾಗುತ್ತಿದೆ. ಬಾಡಿಗೆ ಮನೆಗೆ ಮುಂಗಡ ಕೊಡಬೇಕಾಗಿದೆ. 5 ಸಾವಿರಕ್ಕೆ ಬಾಡಿಗೆ ಮನೆ ಎಲ್ಲಿದೊರೆಯುತ್ತದೆ ಎಂದು ಪ್ರಶ್ನಿಸಿದ ನಿರಾಶ್ರಿತರು, 5 ಸಾವಿರದಿಂದ 10 ಸಾವಿರಕ್ಕೆ ಬಾಡಿಗೆ ಹೆಚ್ಚಳಗೊಳಿಸುವಂತೆ ಮನವಿ ಮಾಡಿದರು.
ನಿರಾಶ್ರಿತ ಕೇಂದ್ರದಲ್ಲಿಸಮರ್ಪಕವಾಗಿ ತಿಂಡಿ, ಊಟ ಕೊಡುತ್ತಿಲ್ಲ. ಸಮರ್ಪಕ ಆಹಾರ ನೀಡದಿದ್ದರೆ ನಿರಾಶ್ರಿತರು ಬೇಸರಗೊಂಡು ಇಲ್ಲಿಂದ ಕಾಲ್ಕೀಳುತ್ತಾರೆ ಎಂಬ ಭಾವನೆಯನ್ನು ಅಧಿಕಾರಿಗಳು ಹೊಂದಿದ್ದಾರೆ ಎಂದು ಆರೋಪಿಸಿದ ದುಗ್ಗಪ್ಪಗೌಡ, ಅಲೇಖಾನ್ ಹೊರಟ್ಟಿ ಸಂಪರ್ಕಿಸುವ ರಸ್ತೆ ದುರಸ್ಥಿಯಾಗಿಲ್ಲ. ಹಾಗಿದ್ದರೂ ಅಲ್ಲಿನ ನಿರಾಶ್ರಿತರನ್ನು ವಾಹನದಲ್ಲಿಕೂರಿಸಿ ಜೆಸಿಬಿಯಲ್ಲಿತಳ್ಳಿ ವಾಹನವನ್ನು ಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ದೂರಿದರು.
ಬಿದರಹಳ್ಳಿ ನಿರಾಶ್ರಿತ ಕೇಂದ್ರವನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಪ್ರತಿಭಟನೆ ಸ್ಥಗಿತಗೊಳಿಸಿ ಕೇಂದ್ರಕ್ಕೆ ಹಿಂದಿರುಗುವಂತೆ ಅಪರ ಜಿಲ್ಲಾಧಿಕಾರಿ ಕುಮಾರ್ ಭರವಸೆ ನೀಡಿದ ಹಿನ್ನೆಲೆಯಲ್ಲಿಪ್ರತಿಭಟನೆ ಕೈಬಿಡಲಾಯಿತು
ಈ ಸಂದರ್ಭ ನಿರಾಶ್ರಿತರು, ಕೆಲ ಅಧಿಕಾರಿ ಮತ್ತು ಜನಪ್ರತಿನಿಧಿಗಳು ನಿರಾಶ್ರಿತ ಕೇಂದ್ರಕ್ಕೆ ಬಂದು ಮಳೆ ಸಂಪೂರ್ಣವಾಗಿ ನಿಂತಿದೆ. ಗ್ರಾಮಗಳಿಗೆ ತೆರಳಿ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ನಿರಾಶ್ರಿತರು ಪ್ರತಿಭಟಿಸುತ್ತಿರುವ ವಿಷಯ ತಿಳಿದ ಎಡಿಸಿ ಡಾ.ಕುಮಾರ್ ಸ್ಥಳಕ್ಕೆ ಆಗಮಿಸಿ ನಿರಾಶ್ರಿತರ ಸಮಸ್ಯೆ ಆಲಿಸಿದರು. ಈಗಾಗಲೇ 120 ನಿರಾಶ್ರಿತರು ಬಿದರಳ್ಳಿ ನಿರಾಶ್ರಿತರ ಕೇಂದ್ರದಲ್ಲಿಆಶ್ರಯ ಪಡೆದಿದ್ದಾರೆ. ಮಲೆಮನೆ, ಮಧುಗುಂಡಿ, ಅಲೆಖಾನೆ ಹೊರಟ್ಟಿ ನಿರಾಶ್ರಿತರನ್ನು ಯಾವುದೇ ಕಾರಣಕ್ಕೂ ಒತ್ತಾಯ ಪೂರ್ವಕವಾಗಿ ಹೊರಗೆ ಕಳುಹಿಸುತ್ತಿಲ್ಲ. ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳುವ ಅಥವಾ ಬಾಡಿಗೆ ಮನೆ ಹುಡುಕಿಕೊಳ್ಳುವವರಿಗೆ ಇದ್ದಷ್ಟು ದಿನ ಇಲ್ಲಿರಲು ಅವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ನಿರಾಶ್ರಿತ ಕೇಂದ್ರದಿಂದ ಹೊರಹೋದರೆ ಪ್ರತಿ ತಿಂಗಳು 5 ಸಾವಿರದಂತೆ 10 ತಿಂಗಳಿಗಾಗುವ ಬಾಡಿಗೆ ಹಣವನ್ನು ಇಡಿಗಂಟಾಗಿ ಕೊಡುವುದಾಗಿ ತಿಳಿಸಿ ನಿರಾಶ್ರಿತ ಕೇಂದ್ರದಿಂದ ಹೊರಹೋಗುವಂತೆ ಒತ್ತಾಯಿಸಲಾಗುತ್ತಿದೆ. ಬಾಡಿಗೆ ಮನೆಗೆ ಮುಂಗಡ ಕೊಡಬೇಕಾಗಿದೆ. 5 ಸಾವಿರಕ್ಕೆ ಬಾಡಿಗೆ ಮನೆ ಎಲ್ಲಿದೊರೆಯುತ್ತದೆ ಎಂದು ಪ್ರಶ್ನಿಸಿದ ನಿರಾಶ್ರಿತರು, 5 ಸಾವಿರದಿಂದ 10 ಸಾವಿರಕ್ಕೆ ಬಾಡಿಗೆ ಹೆಚ್ಚಳಗೊಳಿಸುವಂತೆ ಮನವಿ ಮಾಡಿದರು.
ನಿರಾಶ್ರಿತ ಕೇಂದ್ರದಲ್ಲಿಸಮರ್ಪಕವಾಗಿ ತಿಂಡಿ, ಊಟ ಕೊಡುತ್ತಿಲ್ಲ. ಸಮರ್ಪಕ ಆಹಾರ ನೀಡದಿದ್ದರೆ ನಿರಾಶ್ರಿತರು ಬೇಸರಗೊಂಡು ಇಲ್ಲಿಂದ ಕಾಲ್ಕೀಳುತ್ತಾರೆ ಎಂಬ ಭಾವನೆಯನ್ನು ಅಧಿಕಾರಿಗಳು ಹೊಂದಿದ್ದಾರೆ ಎಂದು ಆರೋಪಿಸಿದ ದುಗ್ಗಪ್ಪಗೌಡ, ಅಲೇಖಾನ್ ಹೊರಟ್ಟಿ ಸಂಪರ್ಕಿಸುವ ರಸ್ತೆ ದುರಸ್ಥಿಯಾಗಿಲ್ಲ. ಹಾಗಿದ್ದರೂ ಅಲ್ಲಿನ ನಿರಾಶ್ರಿತರನ್ನು ವಾಹನದಲ್ಲಿಕೂರಿಸಿ ಜೆಸಿಬಿಯಲ್ಲಿತಳ್ಳಿ ವಾಹನವನ್ನು ಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ದೂರಿದರು.
ಬಿದರಹಳ್ಳಿ ನಿರಾಶ್ರಿತ ಕೇಂದ್ರವನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಪ್ರತಿಭಟನೆ ಸ್ಥಗಿತಗೊಳಿಸಿ ಕೇಂದ್ರಕ್ಕೆ ಹಿಂದಿರುಗುವಂತೆ ಅಪರ ಜಿಲ್ಲಾಧಿಕಾರಿ ಕುಮಾರ್ ಭರವಸೆ ನೀಡಿದ ಹಿನ್ನೆಲೆಯಲ್ಲಿಪ್ರತಿಭಟನೆ ಕೈಬಿಡಲಾಯಿತು