ಎ.ಆರ್.ಉದಯಶಂಕರ್
ಮೂಡಿಗೆರೆ (ಚಿಕ್ಕಮಗಳೂರು) : ಕಳೆದ ತಿಂಗಳ ಮಹಾಮಳೆ, ತೀವ್ರ ಪ್ರವಾಹಕ್ಕೆ ತಾಲೂಕಿನ ಬಣಕಲ್, ಬಾಳೂರು, ಕಳಸ, ಗೋಣಿಬೀಡು ಹೋಬಳಿಗಳಲ್ಲಿಅಪಾರ ಪ್ರಮಾಣದಲ್ಲಿತೋಟ, ಗದ್ದೆ, ವಾಸದ ಮನೆ ನಾಶವಾಗಿ ಬೀದಿಗೆಬಿದ್ದ ಜನರ ಬದುಕು ಇನ್ನೂ ಹಸನಾಗುವ ಲಕ್ಷಣ ಕಾಣುತ್ತಿಲ್ಲ. ಎಲ್ಲವನ್ನೂ ಕಳೆದುಕೊಂಡವರು ಬದುಕು ಕಟ್ಟಿಕೊಳ್ಳಲಾಗದೇ ತೀವ್ರ ಆತಂಕದಲ್ಲಿಕಾಲಕಳೆಯುತ್ತಿದ್ದಾರೆ.
ತಾಲೂಕು ಆಡಳಿತವು ನಿರಾಶ್ರಿತರ ಬದುಕಿಗಾಗಿ ಬದಲಿ ಭೂಮಿ, ಮನೆ ನೀಡಲು ಈಗಾಗಲೇ ಸ್ಥಳ ಗುರುತು ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಯಾವಾಗ ಮನೆ ಕಟ್ಟಿಕೊಡುತ್ತಾರೆ? ನಮ್ಮ ಬದುಕು ಯಾವಾಗ ಹಸನಾಗುತ್ತದೆ ಎಂಬುದು ಬಿದರಹಳ್ಳಿ ಮೊರಾರ್ಜಿ ಶಾಲೆಯ ಕಾಳಜಿ ಕೇಂದ್ರದಲ್ಲಿರುವ ಮಧುಗುಂಡಿಯ ನಿರಾಶ್ರಿತರಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಮಧುಗುಂಡಿಯಲ್ಲಿಪರಿಶಿಷ್ಟರು, ಒಕ್ಕಲಿಗರು, ಪೂಜಾರಿ ಜನಾಂಗದ ಸುಮಾರು 71 ಕುಟುಂಬಗಳು ವಾಸವಾಗಿವೆ. ಬಹುತೇಕ ಕುಟುಂಬದವರು ಜಮೀನು ಹೊಂದಿದ್ದರು. ಅದರಲ್ಲಿಕೆಲವರು ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡು ಫಾರಂ ನಂ. 53 ಮತ್ತು 57ರಲ್ಲಿಅರ್ಜಿ ಹಾಕಿದ್ದರು. ಬಹುತೇಕ ಎಲ್ಲರ ಜಮೀನು, ತೋಟ, ಮನೆ ಕೊಚ್ಚಿಹೋಗಿವೆ. ಪ್ರವಾಹದ ನಂತರ ಎಲ್ಲಕುಟಂಬದವರು ಮನೆ, ಜಮೀನು ಕಳೆದುಕೊಂಡಿದ್ದು, ಕೆಲವರು ನೆಂಟರ ಮನೆಯ ಆಸರೆ ಪಡೆದಿದ್ದಾರೆ. 41 ಕುಟುಂಬದ 106 ಮಂದಿ ಇಂದಿಗೂ ಬಿದರಹಳ್ಳಿ ಮೊರಾರ್ಜಿ ವಸತಿ ನಿಲಯದಲ್ಲಿರುವ ಕಾಳಜಿ ಕೇಂದ್ರದಲ್ಲಿಆಸರೆ ಪಡೆದಿದ್ದಾರೆ.
ಪರಿಹಾರ ವಂಚನೆ ಅಪಾಯ:
ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಮಕ್ಕಳನ್ನು ಹಾಸ್ಟೆಲ್ ಮತ್ತು ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ಸಂತ್ರಸ್ತರು ಬಾಡಿಗೆ ಮನೆ ಮಾಡಿಕೊಂಡರೆ, ತಿಂಗಳಿಗೆ 5 ಸಾವಿರ ರೂ. ಬಾಡಿಗೆ ಮೊತ್ತ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಬಾಡಿಗೆ ಮನೆಗೆ ಹೋಗೋಣವೆಂದರೆ ಮನೆ ಮಾಲೀಕರು ಮುಂಗಡ ಹಣ 25ರಿಂದ 50 ಸಾವಿರ ರೂ. ಕೇಳುತ್ತಾರೆ. ಮುಂಗಡ ಹಣ ನಮ್ಮ ಬಳಿಯಿಲ್ಲ. ಬಾಡಿಗೆ ಮನೆ ಮಾಡಿಕೊಂಡರೂ ಅಗತ್ಯ ವಸ್ತುಗಳಿಲ್ಲ. ಕೂಲಿ ಕೆಲಸ ಸಿಗದೇ ಜೀವನ ನಡೆಸುವುದು ಕಷ್ಟವಾಗಿದೆ. ಒಂದು ವೇಳೆ ಇಲ್ಲಿಂದ ಹೊರ ಹೋದರೆ ನಾವು ಬೀದಿ ಪಾಲಾಗುವುದು ಗ್ಯಾರಂಟಿ. ಮನೆ, ಜಮೀನು ಕಳೆದುಕೊಂಡು ತಿಂಗಳು ಕಳೆದರೂ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಿಗುತ್ತಿಲ್ಲ. ನಮಗೆ ದಿಕ್ಕೇ ತೋಚದಂತಾಗಿದೆ ಎಂದು ಮದುಗುಂಡಿ ನಿರಾಶ್ರಿತರು ಅಳಲು ತೋಡಿಕೊಂಡಿದ್ದಾರೆ.
ನಿರಾಶ್ರಿತರ ಪರಿಹಾರದ ಕಾರ್ಯಕ್ಕಾಗಿ ಈಗಾಗಲೇ ತಾಲೂಕು ಆಡಳಿತದಿಂದ ಸರ್ವೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ಭೂಮಿ ಕಳೆದುಕೊಂಡ ರೈತರ ಜಮೀನನ್ನು ವೀಕ್ಷಿಸಲು ಯಾವ ಅಧಿಕಾರಿಗಳೂ ಬಂದಿಲ್ಲ. ಕಚೇರಿಯಲ್ಲೇ ಕುಳಿತು ತಯಾರಿಸಿ ಕಳಿಸಿದ ವರದಿಯಿಂದ ಅನೇಕ ನಿರಾಶ್ರಿತರು ಪರಿಹಾರದಿಂದ ವಂಚಿತರಾಗುವ ಅಪಾಯವಿದೆ ಎಂಬ ದೂರುಗಳು ಕೇಳಿಬರುತ್ತಿದೆ. ಇತ್ತೀಚೆಗೆ ತಾಲೂಕು ಪಂಚಾಯಿತಿಯಲ್ಲಿಎಂಎಲ್ಸಿ ಪ್ರಾಣೇಶ್ ಸಭೆ ನಡೆಸಿದ್ದಾಗ, ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕಾಗಿದೆ. ನಿರಾಶ್ರಿತರಿಗೆ ತ್ವರಿತವಾಗಿ ಸೂಕ್ತ ಪರಿಹಾರ ಕಲ್ಪಿಸಬೇಕಿದೆ.
---------
ನಿರಾಶ್ರಿತರಿಗೆ ಪರಿಹಾರ ಒದಗಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರವಾಹದಲ್ಲಿಹಾನಿಯಾದ ಮನೆ, ಜಮೀನು ಅಲ್ಲದೆ, ಕಳೆದ ವರ್ಷ ಹಾನಿಯಾದ ಮನೆಗಳನ್ನು ತೋರಿಸಲೂ ಕೆಲವರು ಮುಂದಾಗಿದ್ದಾರೆ. ಅದನ್ನು ಪರಿಗಣಿಸುವುದಿಲ್ಲ. ಈ ಬಗ್ಗೆ ಸದ್ಯದಲ್ಲೇ ಅಧಿಕಾರಿಗಳ ಸಭೆ ನಡೆಸಿ ಅರ್ಹ ನಿರಾಶ್ರಿತರಿಗೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು.
- ಎಂ.ಪಿ.ಕುಮಾರಸ್ವಾಮಿ, ಶಾಸಕರು.
--------
ನಿರಾಶ್ರಿತರ ಜಮೀನನ್ನು ಸರಕಾರದ ವಶಕ್ಕೆ ಪಡೆದು ಬದಲಿ ಜಾಗ ನೀಡಲಾಗುತ್ತದೆ. ಈಗಾಗಲೇ ಮನೆ ಕಟ್ಟಿಕೊಡಲು ಬಣಕಲ್, ಹಂತೂರು ಮತ್ತು ಅಂಗಡಿ ಗ್ರಾಮದಲ್ಲಿಸುಮಾರು 80 ಎಕರೆ ಸರಕಾರಿ ಜಮೀನು ಗುರುತು ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ನಿರಾಶ್ರಿತರನ್ನು ಹೊರದಬ್ಬಲು ಯಾರೂ ಮುಂದಾಗಿಲ್ಲ. ಹಾಗೇನದರೂ ಒತ್ತಡ ಹಾಕಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
- ರಮೇಶ್, ತಹಸೀಲ್ದಾರ್, ಮೂಡಿಗೆರೆ
------
ಮದುಗುಂಡಿಯ ಬಹುತೇಕ ಕುಟುಂಬಗಳು ಸರಕಾರಿ ಭೂಮಿಯಲ್ಲಿಕೃಷಿ ಮಾಡಿಕೊಂಡಿದ್ದು, ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದೆವು. ಈಗ ನಮ್ಮ ಜೀವನ ಅಧೋಗತಿಯಾಗಿದೆ. ಇನ್ನಷ್ಟು ಸಂಕಷ್ಟಕ್ಕೆ ತಳ್ಳಬಾರದು. ನಮಗೆ ಬದಲಿ ಜಮೀನು ನೀಡುವಾಗ ಹಕ್ಕುಪತ್ರ ಜತೆಗೇ ನೀಡಬೇಕು. ಇಲ್ಲಿಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಕೆಲಸ ಮಾಡೋಣವೆಂದರೆ ಕೂಲಿ ಕೆಲಸ ಸಿಗುತ್ತಿಲ್ಲ. ಜಿಲ್ಲಾಡಳಿತ ಕೂಡಲೇ ಪರಿಹಾರ ಒದಗಿಸಬೇಕು.
- ಉದೀಶ್, ಪ್ರವೀಣ್, ಮಧುಗುಂಡಿ ಗ್ರಾಮಸ್ಥರು.
---------
ಕಸಬಾ ಹೋಬಳಿಯ ಹೆಸಗಲ್ ಗ್ರಾಮದಲ್ಲಿತನ್ನ ಕಾಫಿ ತೋಟ ಪ್ರವಾಹದಿಂದ ಹಾನಿಯಾಗಿದೆ. ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಿ ಎಂದು ಕಾಫಿ ಬೋರ್ಡ್ಗೆ ತಿಳಿಸಿದರೆ, ಕಸಬಾ ಹೋಬಳಿಯಲ್ಲಿಯಾವುದೆ ಹಾನಿಯಾಗಿಲ್ಲ. ಸಂಬಾರ ಮಂಡಳಿಗೆ ಹೋಗಿ ಹೇಳಿ ಎಂಬ ಉಡಾಫೆ ಉತ್ತರ ನೀಡುತ್ತಾರೆ. ನಾನು ಪರಿಹಾರ ಪಡೆಯುವುದು ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
- ವಿ.ಕೆ.ಚಂದ್ರೇಗೌಡ, ಕಾಫಿ ಬೆಳೆಗಾರ
ಮೂಡಿಗೆರೆ (ಚಿಕ್ಕಮಗಳೂರು) : ಕಳೆದ ತಿಂಗಳ ಮಹಾಮಳೆ, ತೀವ್ರ ಪ್ರವಾಹಕ್ಕೆ ತಾಲೂಕಿನ ಬಣಕಲ್, ಬಾಳೂರು, ಕಳಸ, ಗೋಣಿಬೀಡು ಹೋಬಳಿಗಳಲ್ಲಿಅಪಾರ ಪ್ರಮಾಣದಲ್ಲಿತೋಟ, ಗದ್ದೆ, ವಾಸದ ಮನೆ ನಾಶವಾಗಿ ಬೀದಿಗೆಬಿದ್ದ ಜನರ ಬದುಕು ಇನ್ನೂ ಹಸನಾಗುವ ಲಕ್ಷಣ ಕಾಣುತ್ತಿಲ್ಲ. ಎಲ್ಲವನ್ನೂ ಕಳೆದುಕೊಂಡವರು ಬದುಕು ಕಟ್ಟಿಕೊಳ್ಳಲಾಗದೇ ತೀವ್ರ ಆತಂಕದಲ್ಲಿಕಾಲಕಳೆಯುತ್ತಿದ್ದಾರೆ.
ತಾಲೂಕು ಆಡಳಿತವು ನಿರಾಶ್ರಿತರ ಬದುಕಿಗಾಗಿ ಬದಲಿ ಭೂಮಿ, ಮನೆ ನೀಡಲು ಈಗಾಗಲೇ ಸ್ಥಳ ಗುರುತು ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಯಾವಾಗ ಮನೆ ಕಟ್ಟಿಕೊಡುತ್ತಾರೆ? ನಮ್ಮ ಬದುಕು ಯಾವಾಗ ಹಸನಾಗುತ್ತದೆ ಎಂಬುದು ಬಿದರಹಳ್ಳಿ ಮೊರಾರ್ಜಿ ಶಾಲೆಯ ಕಾಳಜಿ ಕೇಂದ್ರದಲ್ಲಿರುವ ಮಧುಗುಂಡಿಯ ನಿರಾಶ್ರಿತರಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಮಧುಗುಂಡಿಯಲ್ಲಿಪರಿಶಿಷ್ಟರು, ಒಕ್ಕಲಿಗರು, ಪೂಜಾರಿ ಜನಾಂಗದ ಸುಮಾರು 71 ಕುಟುಂಬಗಳು ವಾಸವಾಗಿವೆ. ಬಹುತೇಕ ಕುಟುಂಬದವರು ಜಮೀನು ಹೊಂದಿದ್ದರು. ಅದರಲ್ಲಿಕೆಲವರು ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡು ಫಾರಂ ನಂ. 53 ಮತ್ತು 57ರಲ್ಲಿಅರ್ಜಿ ಹಾಕಿದ್ದರು. ಬಹುತೇಕ ಎಲ್ಲರ ಜಮೀನು, ತೋಟ, ಮನೆ ಕೊಚ್ಚಿಹೋಗಿವೆ. ಪ್ರವಾಹದ ನಂತರ ಎಲ್ಲಕುಟಂಬದವರು ಮನೆ, ಜಮೀನು ಕಳೆದುಕೊಂಡಿದ್ದು, ಕೆಲವರು ನೆಂಟರ ಮನೆಯ ಆಸರೆ ಪಡೆದಿದ್ದಾರೆ. 41 ಕುಟುಂಬದ 106 ಮಂದಿ ಇಂದಿಗೂ ಬಿದರಹಳ್ಳಿ ಮೊರಾರ್ಜಿ ವಸತಿ ನಿಲಯದಲ್ಲಿರುವ ಕಾಳಜಿ ಕೇಂದ್ರದಲ್ಲಿಆಸರೆ ಪಡೆದಿದ್ದಾರೆ.
ಪರಿಹಾರ ವಂಚನೆ ಅಪಾಯ:
ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಮಕ್ಕಳನ್ನು ಹಾಸ್ಟೆಲ್ ಮತ್ತು ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ಸಂತ್ರಸ್ತರು ಬಾಡಿಗೆ ಮನೆ ಮಾಡಿಕೊಂಡರೆ, ತಿಂಗಳಿಗೆ 5 ಸಾವಿರ ರೂ. ಬಾಡಿಗೆ ಮೊತ್ತ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಬಾಡಿಗೆ ಮನೆಗೆ ಹೋಗೋಣವೆಂದರೆ ಮನೆ ಮಾಲೀಕರು ಮುಂಗಡ ಹಣ 25ರಿಂದ 50 ಸಾವಿರ ರೂ. ಕೇಳುತ್ತಾರೆ. ಮುಂಗಡ ಹಣ ನಮ್ಮ ಬಳಿಯಿಲ್ಲ. ಬಾಡಿಗೆ ಮನೆ ಮಾಡಿಕೊಂಡರೂ ಅಗತ್ಯ ವಸ್ತುಗಳಿಲ್ಲ. ಕೂಲಿ ಕೆಲಸ ಸಿಗದೇ ಜೀವನ ನಡೆಸುವುದು ಕಷ್ಟವಾಗಿದೆ. ಒಂದು ವೇಳೆ ಇಲ್ಲಿಂದ ಹೊರ ಹೋದರೆ ನಾವು ಬೀದಿ ಪಾಲಾಗುವುದು ಗ್ಯಾರಂಟಿ. ಮನೆ, ಜಮೀನು ಕಳೆದುಕೊಂಡು ತಿಂಗಳು ಕಳೆದರೂ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಿಗುತ್ತಿಲ್ಲ. ನಮಗೆ ದಿಕ್ಕೇ ತೋಚದಂತಾಗಿದೆ ಎಂದು ಮದುಗುಂಡಿ ನಿರಾಶ್ರಿತರು ಅಳಲು ತೋಡಿಕೊಂಡಿದ್ದಾರೆ.
ನಿರಾಶ್ರಿತರ ಪರಿಹಾರದ ಕಾರ್ಯಕ್ಕಾಗಿ ಈಗಾಗಲೇ ತಾಲೂಕು ಆಡಳಿತದಿಂದ ಸರ್ವೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ಭೂಮಿ ಕಳೆದುಕೊಂಡ ರೈತರ ಜಮೀನನ್ನು ವೀಕ್ಷಿಸಲು ಯಾವ ಅಧಿಕಾರಿಗಳೂ ಬಂದಿಲ್ಲ. ಕಚೇರಿಯಲ್ಲೇ ಕುಳಿತು ತಯಾರಿಸಿ ಕಳಿಸಿದ ವರದಿಯಿಂದ ಅನೇಕ ನಿರಾಶ್ರಿತರು ಪರಿಹಾರದಿಂದ ವಂಚಿತರಾಗುವ ಅಪಾಯವಿದೆ ಎಂಬ ದೂರುಗಳು ಕೇಳಿಬರುತ್ತಿದೆ. ಇತ್ತೀಚೆಗೆ ತಾಲೂಕು ಪಂಚಾಯಿತಿಯಲ್ಲಿಎಂಎಲ್ಸಿ ಪ್ರಾಣೇಶ್ ಸಭೆ ನಡೆಸಿದ್ದಾಗ, ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕಾಗಿದೆ. ನಿರಾಶ್ರಿತರಿಗೆ ತ್ವರಿತವಾಗಿ ಸೂಕ್ತ ಪರಿಹಾರ ಕಲ್ಪಿಸಬೇಕಿದೆ.
---------
ನಿರಾಶ್ರಿತರಿಗೆ ಪರಿಹಾರ ಒದಗಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರವಾಹದಲ್ಲಿಹಾನಿಯಾದ ಮನೆ, ಜಮೀನು ಅಲ್ಲದೆ, ಕಳೆದ ವರ್ಷ ಹಾನಿಯಾದ ಮನೆಗಳನ್ನು ತೋರಿಸಲೂ ಕೆಲವರು ಮುಂದಾಗಿದ್ದಾರೆ. ಅದನ್ನು ಪರಿಗಣಿಸುವುದಿಲ್ಲ. ಈ ಬಗ್ಗೆ ಸದ್ಯದಲ್ಲೇ ಅಧಿಕಾರಿಗಳ ಸಭೆ ನಡೆಸಿ ಅರ್ಹ ನಿರಾಶ್ರಿತರಿಗೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು.
- ಎಂ.ಪಿ.ಕುಮಾರಸ್ವಾಮಿ, ಶಾಸಕರು.
--------
ನಿರಾಶ್ರಿತರ ಜಮೀನನ್ನು ಸರಕಾರದ ವಶಕ್ಕೆ ಪಡೆದು ಬದಲಿ ಜಾಗ ನೀಡಲಾಗುತ್ತದೆ. ಈಗಾಗಲೇ ಮನೆ ಕಟ್ಟಿಕೊಡಲು ಬಣಕಲ್, ಹಂತೂರು ಮತ್ತು ಅಂಗಡಿ ಗ್ರಾಮದಲ್ಲಿಸುಮಾರು 80 ಎಕರೆ ಸರಕಾರಿ ಜಮೀನು ಗುರುತು ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ನಿರಾಶ್ರಿತರನ್ನು ಹೊರದಬ್ಬಲು ಯಾರೂ ಮುಂದಾಗಿಲ್ಲ. ಹಾಗೇನದರೂ ಒತ್ತಡ ಹಾಕಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
- ರಮೇಶ್, ತಹಸೀಲ್ದಾರ್, ಮೂಡಿಗೆರೆ
------
ಮದುಗುಂಡಿಯ ಬಹುತೇಕ ಕುಟುಂಬಗಳು ಸರಕಾರಿ ಭೂಮಿಯಲ್ಲಿಕೃಷಿ ಮಾಡಿಕೊಂಡಿದ್ದು, ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದೆವು. ಈಗ ನಮ್ಮ ಜೀವನ ಅಧೋಗತಿಯಾಗಿದೆ. ಇನ್ನಷ್ಟು ಸಂಕಷ್ಟಕ್ಕೆ ತಳ್ಳಬಾರದು. ನಮಗೆ ಬದಲಿ ಜಮೀನು ನೀಡುವಾಗ ಹಕ್ಕುಪತ್ರ ಜತೆಗೇ ನೀಡಬೇಕು. ಇಲ್ಲಿಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಕೆಲಸ ಮಾಡೋಣವೆಂದರೆ ಕೂಲಿ ಕೆಲಸ ಸಿಗುತ್ತಿಲ್ಲ. ಜಿಲ್ಲಾಡಳಿತ ಕೂಡಲೇ ಪರಿಹಾರ ಒದಗಿಸಬೇಕು.
- ಉದೀಶ್, ಪ್ರವೀಣ್, ಮಧುಗುಂಡಿ ಗ್ರಾಮಸ್ಥರು.
---------
ಕಸಬಾ ಹೋಬಳಿಯ ಹೆಸಗಲ್ ಗ್ರಾಮದಲ್ಲಿತನ್ನ ಕಾಫಿ ತೋಟ ಪ್ರವಾಹದಿಂದ ಹಾನಿಯಾಗಿದೆ. ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಿ ಎಂದು ಕಾಫಿ ಬೋರ್ಡ್ಗೆ ತಿಳಿಸಿದರೆ, ಕಸಬಾ ಹೋಬಳಿಯಲ್ಲಿಯಾವುದೆ ಹಾನಿಯಾಗಿಲ್ಲ. ಸಂಬಾರ ಮಂಡಳಿಗೆ ಹೋಗಿ ಹೇಳಿ ಎಂಬ ಉಡಾಫೆ ಉತ್ತರ ನೀಡುತ್ತಾರೆ. ನಾನು ಪರಿಹಾರ ಪಡೆಯುವುದು ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
- ವಿ.ಕೆ.ಚಂದ್ರೇಗೌಡ, ಕಾಫಿ ಬೆಳೆಗಾರ