ಬಾಳೆಹೊನ್ನೂರು: ಜೀವನದಲ್ಲಿ ಧರ್ಮ ಮತ್ತು ಧನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಿಲ್ಲದೇ ಮನುಷ್ಯ ಬಾಳುವುದು ಕಷ್ಟ ಎಂದು ಶ್ರೀರಂಭಾಪುರೀ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಅವರು ಗುರುವಾರ ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಶ್ರಾವಣ ಸಂಭ್ರಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹೊನ್ನು, ಹೆಣ್ಣು, ಮಣ್ಣಿಗಾಗಿ ಹೋರಾಡಿದವರು ಬಹಳ ಜನ. ಆದರೆ, ದೇವರು, ಧರ್ಮ, ಸತ್ಯಕ್ಕಾಗಿ ಹೋರಾಡಿದವರು ಬಹಳ ಅಪರೂಪ. ನೀರು ಎರೆದವರಿಗೂ ಕಡಿಯ ಬಂದವರಿಗೂ ಮರ ಹಣ್ಣು ,ನೆರಳು ಕೊಡುತ್ತದೆ. ಇದೇ ಮನೋಭಾವ ಮನುಷ್ಯನಲ್ಲಿ ಯಾಕೆ ಬೆಳೆಯಬಾರದು. ನೀತಿ ನಿಯಮ ನಿಯತ್ತುಗಳು ನಮ್ಮೆಲ್ಲರನ್ನು ರಕ್ಷಿಸುತ್ತವೆ ವಿನ: ಕೇಡನ್ನು ಎಂದಿಗೂ ಉಂಟು ಮಾಡುವುದಿಲ್ಲ. ಸಿರಿ ಸಂಪತ್ತಿನ ವ್ಯಾಮೋಹದಲ್ಲಿ ಸಿಲುಕಿದ ಮನುಷ್ಯ ಧರ್ಮ ಸಂಸ್ಕೃತಿಯ ಬಗೆಗೆ ನಿರ್ಲಕ್ಷ ್ಯ ಮನೋಭಾವ ತೋರುವುದು ಸಲ್ಲದು ಎಂದರು.
ಹಂಪಸಾಗರ ಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹರಿಯುವ ನೀರಿಗೆ, ಬೀಸುವ ಗಾಳಿಗೆ, ಹೊತ್ತ ಭೂಮಿಗೆ, ಬೆಳಗುವ ಸೂರ್ಯನಿಗೆ ಒಂದು ಧರ್ಮವಿದೆ. ಅದರಂತೆ ಮನುಷ್ಯನಿಗೂ ಕೂಡಾ ಒಂದು ಧರ್ಮವಿದೆ. ಧರ್ಮದ ದಾರಿ ತಪ್ಪಿ ನಡೆದರೆ ಆತಂಕ ತಪ್ಪಿದ್ದಲ್ಲ ಎಂದರು.
ಈ ಸಂದರ್ಭ ಸಿಂಧನೂರು ಕ್ಷೇತ್ರದ ಶಾಸಕ, ಮಾಜಿ ಸಚಿವ ವೆಂಕಟರಾವ್ ನಾಡಗೌಡ , ಚಿಕ್ಕಮಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟಿನ ಸದಸ್ಯರು ಪಾಲ್ಗೊಂಡಿದ್ದರು.
ಪಂ. ಮೋಕ್ಷ ನಾಥಯ್ಯ ಶಾಸ್ತ್ರಿಗಳಿಂದ ವೇದಘೋಷ, ದಾರುಕಾರಾಧ್ಯ ಶಾಸ್ತ್ರಿಗಳಿಂದ ಭಕ್ತಿಗೀತೆ ಗಾಯನ ನಡೆಯಿತು. ಶಿಕ್ಷ ಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಅವರು ಗುರುವಾರ ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಶ್ರಾವಣ ಸಂಭ್ರಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹೊನ್ನು, ಹೆಣ್ಣು, ಮಣ್ಣಿಗಾಗಿ ಹೋರಾಡಿದವರು ಬಹಳ ಜನ. ಆದರೆ, ದೇವರು, ಧರ್ಮ, ಸತ್ಯಕ್ಕಾಗಿ ಹೋರಾಡಿದವರು ಬಹಳ ಅಪರೂಪ. ನೀರು ಎರೆದವರಿಗೂ ಕಡಿಯ ಬಂದವರಿಗೂ ಮರ ಹಣ್ಣು ,ನೆರಳು ಕೊಡುತ್ತದೆ. ಇದೇ ಮನೋಭಾವ ಮನುಷ್ಯನಲ್ಲಿ ಯಾಕೆ ಬೆಳೆಯಬಾರದು. ನೀತಿ ನಿಯಮ ನಿಯತ್ತುಗಳು ನಮ್ಮೆಲ್ಲರನ್ನು ರಕ್ಷಿಸುತ್ತವೆ ವಿನ: ಕೇಡನ್ನು ಎಂದಿಗೂ ಉಂಟು ಮಾಡುವುದಿಲ್ಲ. ಸಿರಿ ಸಂಪತ್ತಿನ ವ್ಯಾಮೋಹದಲ್ಲಿ ಸಿಲುಕಿದ ಮನುಷ್ಯ ಧರ್ಮ ಸಂಸ್ಕೃತಿಯ ಬಗೆಗೆ ನಿರ್ಲಕ್ಷ ್ಯ ಮನೋಭಾವ ತೋರುವುದು ಸಲ್ಲದು ಎಂದರು.
ಹಂಪಸಾಗರ ಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹರಿಯುವ ನೀರಿಗೆ, ಬೀಸುವ ಗಾಳಿಗೆ, ಹೊತ್ತ ಭೂಮಿಗೆ, ಬೆಳಗುವ ಸೂರ್ಯನಿಗೆ ಒಂದು ಧರ್ಮವಿದೆ. ಅದರಂತೆ ಮನುಷ್ಯನಿಗೂ ಕೂಡಾ ಒಂದು ಧರ್ಮವಿದೆ. ಧರ್ಮದ ದಾರಿ ತಪ್ಪಿ ನಡೆದರೆ ಆತಂಕ ತಪ್ಪಿದ್ದಲ್ಲ ಎಂದರು.
ಈ ಸಂದರ್ಭ ಸಿಂಧನೂರು ಕ್ಷೇತ್ರದ ಶಾಸಕ, ಮಾಜಿ ಸಚಿವ ವೆಂಕಟರಾವ್ ನಾಡಗೌಡ , ಚಿಕ್ಕಮಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟಿನ ಸದಸ್ಯರು ಪಾಲ್ಗೊಂಡಿದ್ದರು.
ಪಂ. ಮೋಕ್ಷ ನಾಥಯ್ಯ ಶಾಸ್ತ್ರಿಗಳಿಂದ ವೇದಘೋಷ, ದಾರುಕಾರಾಧ್ಯ ಶಾಸ್ತ್ರಿಗಳಿಂದ ಭಕ್ತಿಗೀತೆ ಗಾಯನ ನಡೆಯಿತು. ಶಿಕ್ಷ ಕ ವೀರೇಶ ಕುಲಕರ್ಣಿ ನಿರೂಪಿಸಿದರು.