ಆ್ಯಪ್ನಗರ

ಪ್ರಕೃತಿಗೆ ಧಕ್ಕೆ ಉಂಟುಮಾಡಿದೆರೆ ಮುಂದೆ ಪಶ್ಚಾತ್ತಾಪ : ಸಿ.ಟಿ.ರವಿ

ಮನುಷ್ಯ ದುರಾಸೆಗೆ ಒಳಗಾಗಿ ಪ್ರಕೃತಿಗೆ ಧಕ್ಕೆ ಉಂಟು ಮಾಡಿದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

Vijaya Karnataka 6 Jan 2020, 5:00 am
ಚಿಕ್ಕಮಗಳೂರು: ಮನುಷ್ಯ ದುರಾಸೆಗೆ ಒಳಗಾಗಿ ಪ್ರಕೃತಿಗೆ ಧಕ್ಕೆ ಉಂಟು ಮಾಡಿದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
Vijaya Karnataka Web repentance if it threatens nature ct ravi
ಪ್ರಕೃತಿಗೆ ಧಕ್ಕೆ ಉಂಟುಮಾಡಿದೆರೆ ಮುಂದೆ ಪಶ್ಚಾತ್ತಾಪ : ಸಿ.ಟಿ.ರವಿ


ತಾಲೂಕಿನ ಅತ್ತಿಗುಂಡಿ ಗ್ರಾಮದಲ್ಲಿಇನಾಂ ದತ್ತಾತ್ರೇಯ ಪೀಠ ಗ್ರಾಮ ಪಂಚಾಯಿತಿಯ ನೂತನ ಕಚೇರಿ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗಿರಿ ಪ್ರದೇಶಕ್ಕೆ ನಿತ್ಯ ಸಹಸ್ರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಪ್ರಕೃತಿ ಆಸ್ವಾದಿಸಲು ಹಾಗೂ ಜಲಪಾತಗಳನ್ನು ನೋಡಲು ಬರುತ್ತಾರೆ. ಅವುಗಳನ್ನು ಉಳಿಸಿಕೊಳ್ಳದಿದ್ದಲ್ಲಿಯಾವುದೇ ಪ್ರವಾಸಿಗರೂ ಇಲ್ಲಿಗೆ ಬರುವುದಿಲ್ಲ. ಪ್ರಕೃತಿ ಈ ಪ್ರದೇಶವನ್ನು ಸ್ವರ್ಗವಾಗಿಸಿದೆ. ನಾವು ನಮ್ಮ ದುರಾಸೆಗಾಗಿ ಇದನ್ನು ನರಕವಾಗಿಸಿಕೊಳ್ಳುತ್ತಿದ್ದೇವೆ ಎಂದರು.

ಧಬಾಧಬಿ ಜಲಪಾತ ಅಭಿವೃದ್ಧಿ : ಈ ಭಾಗದಲ್ಲಿರುವ ಧಬಾಧಬಿ ಜಲಪಾತಕ್ಕೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ಜಲಪಾತವು ಸರಕಾರಿ ಜಾಗದಲ್ಲಿದೆ. ಜಲಪಾತಕ್ಕೆ ಹೋಗುವ ರಸ್ತೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ರಸ್ತೆ ಸರಿಪಡಿಸಿದ ನಂತರ ಜಲಪಾತಕ್ಕೆ ಬರುವ ಪ್ರವಾಸಿಗರಿಂದ ಪ್ರವೇಶ ಶುಲ್ಕ ಪಡೆದುಕೊಳ್ಳಬಹುದು. ಆ ಹಣವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದರು.

ಹೆಚ್ಚಿನ ಅನುದಾನ : 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ನಂತರ 2018ರಿಂದ ಈವರೆಗೆ ಜಾಗರ ಹೋಬಳಿಗೆ 40 ಕೋಟಿ ರೂ.ಗೂ ಹೆಚ್ಚು ಅನುದಾನ ಮಂಜೂರು ಮಾಡಿಸಿದ್ದೇನೆ. ಈ ಅನುದಾನದಲ್ಲಿರಸ್ತೆ ಅಭಿವೃದ್ಧಿ, ಪ್ರವಾಸಿ ತಾಣಗಳ ಅಭಿವೃದ್ಧಿ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್‌ ಕುಮಾರ್‌ ಮಾತನಾಡಿ, ಐ.ಡಿ.ಪೀಠ ಗ್ರಾಮ ಪಂಚಾಯಿತಿ ಕಚೇರಿಯು ಸಂಪೂರ್ಣ ಶಿಥಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ25 ಲಕ್ಷ ರೂ. ವೆಚ್ಚದಲ್ಲಿಹೊಸ ಕಟ್ಟಡ ನಿರ್ಮಿಸಲಾಗಿದೆ ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ, ಜಿ.ಪಂ. ಸದಸ್ಯ ಸೋಮಶೇಖರ್‌, ಗ್ರಾ.ಪಂ.ಅಧ್ಯಕ್ಷೆ ಸುಮಿತ ಮಾತನಾಡಿದರು. ಜಿ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ, ತಾ.ಪಂ. ಸದಸ್ಯರಾದ ರಮೇಶ್‌, ವೈ.ಜೆ.ಸುರೇಶ್‌, ಎಪಿಎಂಸಿ ಸದಸ್ಯ ಶಿವೇಗೌಡ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ