ಆ್ಯಪ್ನಗರ

ವೃದ್ಧರ ಹೆಬ್ಬೆಟ್ಟು ಗುರುತು ಬದಲಿಗೆ ಸಹಿ ಪಡೆದು ಪಡಿತರ ವಿತರಿಸಿ

ನ್ಯಾಯ ಬೆಲೆಯ ಅಂಗಡಿಯ ಬಯೋ ಮೆಟ್ರಿಕ್‌ ಯಂತ್ರದಲ್ಲಿವೃದ್ಧರ ಹೆಬ್ಬೆಟ್ಟು ಬದಲಿಗೆ ಸಹಿ ಮಾಡಿಸಿಕೊಂಡು ಪಡಿತರ ನೀಡುವ ಕುರಿತು ನಿರ್ಣಯ ಕೈಗೊಳ್ಳಬೇಕಿದೆ ಎಂದು ನಾಗ ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೇಬಿ, ಸದಸ್ಯ ಶೇವಿಯಾರ್‌ ಹೇಳಿದರು.

Vijaya Karnataka 16 Oct 2019, 5:00 am
ನರಸಿಂಹರಾಜಪುರ: ನ್ಯಾಯ ಬೆಲೆಯ ಅಂಗಡಿಯ ಬಯೋ ಮೆಟ್ರಿಕ್‌ ಯಂತ್ರದಲ್ಲಿವೃದ್ಧರ ಹೆಬ್ಬೆಟ್ಟು ಬದಲಿಗೆ ಸಹಿ ಮಾಡಿಸಿಕೊಂಡು ಪಡಿತರ ನೀಡುವ ಕುರಿತು ನಿರ್ಣಯ ಕೈಗೊಳ್ಳಬೇಕಿದೆ ಎಂದು ನಾಗ ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೇಬಿ, ಸದಸ್ಯ ಶೇವಿಯಾರ್‌ ಹೇಳಿದರು.
Vijaya Karnataka Web replace the thumb impression of the elderly
ವೃದ್ಧರ ಹೆಬ್ಬೆಟ್ಟು ಗುರುತು ಬದಲಿಗೆ ಸಹಿ ಪಡೆದು ಪಡಿತರ ವಿತರಿಸಿ

ಮಂಗಳ ವಾರ ನಾಗ ಲಾಪುರ ಗ್ರಾ, ಪಂ. ನಡೆದ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿಅವರು ಸಭೆಯಲ್ಲಿ ಅವರು ಮಾತನಾಡಿ, ಯಾವುದೇ ಕಾರಣಕ್ಕೂ ವೃದ್ಧರ ಪಡಿತರ ಚೀಟಿಯನ್ನು ರದ್ದು ಮಾಡಬಾರದು ಎಂದು ಮನವಿ ಮಾಡಿದರು. ವೃದ್ಧರು ನ್ಯಾಯಬೆಲೆಯ ಅಂಗಡಿ ಯಲ್ಲಿಪಡಿತರ ಪಡೆಯಬೇಕಾದರೆ ಹೆಬ್ಬೆಟ್ಟು ನೀಡಬೇಕಾಗಿದೆ.ಆದರೆ, ವಯಸ್ಸಾದವರ ಹೆಬ್ಬೆಟ್ಟು ಸರಿಯಾಗಿ ಬೀಳಲ್ಲಎಂದು ಸರಕಾರವು ಅವರ ಪಡಿತರ ಚೀಟಿ ರದ್ದು ಮಾಡಲು ಹೊರಟಿರುವುದು ಸರಿಯಲ್ಲಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಸತೀಶ್‌ ಮಾತನಾಡಿ, ಬಿ.ಎಚ್‌.ಕೈಮರದ ನ್ಯಾಯಬೆಲೆ ಅಂಗಡಿಗಳಲ್ಲಿಸರ್ವರ್‌ ಪ್ಲಾಬ್ಲಂ ಇಲ್ಲ. ಆದರೆ, ನರಸಿಂಹರಾಜಪುರದ ವಿ.ಎಸ್‌.ಎಸ್‌.ಎನ್‌.ಹಾಗೂ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘಗಳಲ್ಲಿಮಾತ್ರ ಯಾವಾ ಗಲೂ ಸರ್ವರ್‌ ಪ್ಲಾಬ್ಲಂ ಅಥವಾ ಕಂಪ್ಯೂ ಟರ್‌ ದೋಷ ಎಂದು ಪಡಿತರ ನೀಡಲು ಸತಾಯಿಸ ಲಾಗುತ್ತಿದೆ ಎಂದು ದೂರಿದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿ ಪಾಲಾಕ್ಷಪ್ಪ ಮಾತನಾಡಿ ದರು. ಗ್ರಾಮ ಪಂಚಾಯಿತಿ ಸದಸ್ಯೆ ಯಶೋಧ ಬಾಯಿ ಮಾತ ನಾಡಿ, ಸರಕಾರಿ ಆಸ್ಪತ್ರೆ ಯಲ್ಲಿಹೊರ ರೋಗಿಗಳಿಗೆ ಔಷಧಿ,ಮಾತ್ರೆಯನ್ನು ಮೆಡಿಕಲ್‌ ಶಾಪ್‌ಗೆ ಬರೆದು ಕೊಡುತ್ತಿ ದ್ದಾರೆ. ಆಸ್ಪತ್ರೆಯಲ್ಲಿಅಗತ್ಯವಿರುವ ಎಲ್ಲಔಷಧಿ ದಾಸ್ತಾನು ಮಾಡಿ.ಇದರಿಂದ ಬಡ ರೋಗಿಗಳಿಗೆ ಅನು ಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ