ಆ್ಯಪ್ನಗರ

ಪಠ್ಯದಷ್ಟೆ ಕ್ರೀಡೆಗೂ ಪ್ರಾತಿನಿಧ್ಯ ನೀಡಿ

ಪಠ್ಯದಷ್ಟೆ ಕ್ರೀಡೆಗೂ ಪ್ರಾತಿನಿಧ್ಯ ನೀಡಿ ಎಂದು ಡಿವೈಎಸ್ಪಿ ರವೀಂದ್ರನಾಥ್‌ ಜಹಗೀರ್‌ದಾರ್‌ ಹೇಳಿದರು.

Vijaya Karnataka 17 Nov 2019, 5:00 am
ಕೊಪ್ಪ: ಪಠ್ಯದಷ್ಟೆ ಕ್ರೀಡೆಗೂ ಪ್ರಾತಿನಿಧ್ಯ ನೀಡಿ ಎಂದು ಡಿವೈಎಸ್ಪಿ ರವೀಂದ್ರನಾಥ್‌ ಜಹಗೀರ್‌ದಾರ್‌ ಹೇಳಿದರು.
Vijaya Karnataka Web represent the sport as much as the text
ಪಠ್ಯದಷ್ಟೆ ಕ್ರೀಡೆಗೂ ಪ್ರಾತಿನಿಧ್ಯ ನೀಡಿ


ಪಟ್ಟಣದ ಹೊರವಲಯದ ಸೆಂಟ್‌ ನಾರ್ಬರ್ಟ್‌ ಶಾಲೆಯಲ್ಲಿಶನಿವಾರ ಆಯೋಜಿಸಿದ್ದ ಅಂತರ ಶಾಲಾ ಅಥ್ಲೆಟಿಕ್ಸ್‌ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗೆ ಕ್ರೀಡೆಯು ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಎಲ್ಲರೂ ಗೆಲುವನ್ನು ಗುರಿಯಾಗಿಸಿಕೊಂಡು ಕ್ರೀಡಾಸ್ಪೂರ್ತಿಯಿಂದ ಸ್ಪರ್ಧಿಸಬೇಕು. ಪೋಷಕರು ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸಬಾರದು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಿಂದ ವಿದ್ಯಾರ್ಥಿಗೆ ಸಕಾರಾತ್ಮಕ ನಿಲುವು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಶಾಲೆಯ ಪ್ರಾಂಶುಪಾಲ ಜೋಸೆಫ್‌ ವಟ್ಟಪ್ಲಾಕಿಲ್‌ ಮತ್ತಿತರರು ಹಾಜರಿದ್ದರು.
ವಿವಿಧ ಜಿಲ್ಲೆಯಿ 12 ಶಾಲೆಯಿಂದ ಸುಮಾರು 300 ವಿದ್ಯಾರ್ಥಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ