ಆ್ಯಪ್ನಗರ

13ವಿವಿ ಸಿಂಡಿಕೇಟ್‌ ಸದಸ್ಯರ ನೇಮಕ ರದ್ದತಿಗೆ ಆಗ್ರಹ

ಕುವೆಂಪು ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ 13ವಿವಿಗಳ ಸಿಂಡಿಕೇಟ್‌ ಸದಸ್ಯರ ನೇಮಕಾದೇಶ ರದ್ದುಗೊಳಿಸಬೇಕು ಎಂದು ಕುವೆಂಪು ವಿವಿ ಸಿಂಡಿಕೇಟ್‌ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ.

Vijaya Karnataka 29 Jul 2019, 5:00 am
ಚಿಕ್ಕಮಗಳೂರು : ಕುವೆಂಪು ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ 13ವಿವಿಗಳ ಸಿಂಡಿಕೇಟ್‌ ಸದಸ್ಯರ ನೇಮಕಾದೇಶ ರದ್ದುಗೊಳಿಸಬೇಕು ಎಂದು ಕುವೆಂಪು ವಿವಿ ಸಿಂಡಿಕೇಟ್‌ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ.
Vijaya Karnataka Web request for cancellation of 13 vv syndicate members
13ವಿವಿ ಸಿಂಡಿಕೇಟ್‌ ಸದಸ್ಯರ ನೇಮಕ ರದ್ದತಿಗೆ ಆಗ್ರಹ


ರಾಜ್ಯ ಸರಕಾರ ಈಗ ಪ್ರಕಟಿಸಿರುವ 13 ವಿವಿಗಳ ಸಿಂಡಿಕೇಟ್‌ ಸದಸ್ಯರ ನೇಮಕಾದೇಶದ ಬಗ್ಗೆ ಅನೇಕ ಊಹಾಪೋಹಗಳು ಶೈಕ್ಷ ಣಿಕ ವಲಯದಲ್ಲಿ ಕೇಳಿ ಬರುತ್ತಿವೆ. ಭ್ರಷ್ಟಾಚಾರದ ವಾಸನೆ ಹೊಡೆಯುತ್ತಿದೆ ಎಂಬ ಆರೋಪಗಳು ರಾಜ್ಯವ್ಯಾಪಿ ವ್ಯಕ್ತವಾಗುತ್ತಿವೆ ಎಂದು ಅವರು ನೀಡಿರುವ ಹೇಳಿಕೆಯಲ್ಲಿ ಆಪಾದಿಸಿದ್ದಾರೆ.

ವಿಶ್ವ ವಿದ್ಯಾನಿಲಯಗಳಲ್ಲಿ ಶೈಕ್ಷ ಣಿಕ ಬೆಳವಣಿಗೆ ಮತ್ತು ನೀತಿ ರೂಪಿಸುವಲ್ಲಿ ಸಿಂಡಿಕೇಟ್‌ ಮಹತ್ತರ ಪಾತ್ರ ನಿರ್ವಹಿಸುತ್ತದೆ. ಅಂತಹ ಸಿಂಡಿಕೇಟ್‌ಗೆ ಸದಸ್ಯರ ನೇಮಕ ನಡೆಯುವ ಸಂದರ್ಭ ಪ್ರತಿ ಹಂತದಲ್ಲೂ ಶೈಕ್ಷ ಣಿಕ ವಲಯದ ತಜ್ಞರು ಮತ್ತು ಆಯಾ ಪ್ರದೇಶದ ಶಿಕ್ಷ ಣ ಕ್ಷೇತ್ರದಿಂದ ಮಾಹಿತಿ ಸಂಗ್ರಹಿಸಬೇಕಾಗುತ್ತದೆ.ಆದರೆ, ಈ ಬಾರಿ ನೇಮಕವಾಗಿರುವ ಸದಸ್ಯರ ಪಟ್ಟಿ ಗಮನಿಸಿದಾಗ ಅನೇಕ ಲೋಪಗಳು ನಡೆದಿರುವುದು ಗೋಚರಿಸುತ್ತಿವೆ ಎಂದು ಹೇಳಿದ್ದಾರೆ.

ಸದಸ್ಯರ ನೇಮಕ ಪಟ್ಟಿ ಗಮನಿಸಿದಾಗ ರಾಜಕೀಯ ಪ್ರಭಾವ ಹೊಂದಿರುವವರಿಗೆ ಮನ್ನಣೆ ನೀಡುವುದರೊಂದಿಗೆ ಭ್ರಷ್ಟಾಚಾರದ ಸಂಶಯಗಳು ಕೇಳಿಬರುತ್ತಿವೆ. ಯಾವುದೇ ವಿಶ್ವವಿದ್ಯಾನಿಲಯ ಇರಲಿ ಸಿಂಡಿಕೇಟ್‌ಗೆ ಸದಸ್ಯರ ನೇಮಕ ಮಾಡುವ ಸಂದರ್ಭ ಸರಕಾರದ ಮಾರ್ಗ ಸೂಚಿಯ ಜತೆಗೆ ಸ್ಥಳೀಯರಿಗೆ ಅವಕಾಶ, ಪ್ರಾದೇಶಿಕತೆ, ಭೌಗೋಳಿಕ ಅಂಶ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಆದರೆ, ಇಲ್ಲಿ ಯಾವುದನ್ನು ಪರಿಗಣಿಸಿದಂತಿಲ್ಲ. ಸ್ಥಳೀಯರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದ್ದು, ಹೊರಗಿನವರನ್ನೇ ನೇಮಕ ಮಾಡುವ ಮೂಲಕ ಮೂಲ ಉದ್ದೇಶಕ್ಕೆ ಕೊಡಲಿ ಪೆಟ್ಟುಕೊಟ್ಟಂತಾಗಿದೆ ಎಂದು ದೂರಿದ್ದಾರೆ.

ಕುವೆಂಪು ವಿವಿ ವ್ಯಾಪ್ತಿಗೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಸೇರುತ್ತವೆ. ಸಿಂಡಿಕೇಟ್‌ಗೆ ಸದಸ್ಯರ ನೇಮಕ ನಡೆಯುವ ಸಂದರ್ಭ ಈ ಎರಡೂ ಜಿಲ್ಲೆಗಳಿಗೆ ಸಮಾನ ಅವಕಾಶ ನೀಡಬೇಕಿತ್ತು. ಒಟ್ಟು 6 ಸದಸ್ಯರಲ್ಲಿ 5 ಮಂದಿಯನ್ನು ಸರಕಾರ ನೇಮಕ ಮಾಡುತ್ತದೆ. ಉಳಿದ ಒಂದು ಸ್ಥಾನಕ್ಕೆ ರಾಜ್ಯಪಾಲರು ನೇಮಕ ಮಾಡುತ್ತಾರೆ. ಆದರೆ, ನೇಮಕ ಮಾಡಿರುವ ಸದಸ್ಯರಲ್ಲಿ ನಾಲ್ಕು ಮಂದಿ ಈ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವುದಿಲ್ಲ. ಶಿವಮೊಗ್ಗ ಜಿಲ್ಲೆಯ ಸಾಗರ, ಚಿಕ್ಕಬಳ್ಳಾಪುರ, ಬೆಂಗಳೂರು ಜಿಲ್ಲೆಗೆ ಸೇರಿದವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರ್ಹರು ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಈಗ ಪ್ರಕಟಿಸಿರುವ ರಾಜ್ಯದ 13 ವಿವಿಗಳಲ್ಲೂ ಈ ಲೋಪ ನಡೆದಿವೆ. ಈ ಹಿನ್ನೆಲೆಯಲ್ಲಿ ಸರಕಾರ ತೆಗೆದುಕೊಂಡಿರುವ ನಿರ್ಧಾರ ಸಂಪೂರ್ಣ ತಪ್ಪಾಗಿದ್ದು, ಈ ಪಟ್ಟಿಯನ್ನು ರದ್ದುಗೊಳಿಸಿ ಲೋಪಗಳನ್ನು ಸರಿಪಡಿಸಿಕೊಂಡು ಹೊಸ ನೇಮಕಾತಿ ಆದೇಶಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ