ಆ್ಯಪ್ನಗರ

ಡೆಂಗೆ, ಚಿಕೂನ್‌ಗುನ್ಯ ನಿಯಂತ್ರಿಸಲು ಮನವಿ

ನಗರದ ಸಂತೆ ಮೈದಾನ ಮತ್ತಿತರ ಕಡೆ ಹರಡುತ್ತಿರುವ ಚಿಕುನ್‌ಗುನ್ಯ ಮತ್ತು ಡೆಂಗೆ ರೋಗ ತಡೆಯಲು ನಮಗಸಭೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆ ಭಾಗದ ನಿವಾಸಿಗಳು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರಿಗೆ ಮನವಿ ನೀಡಿ ಆಗ್ರಹಿಸಿದರು.

Vijaya Karnataka 17 Nov 2018, 5:00 am
ಚಿಕ್ಕಮಗಳೂರು : ನಗರದ ಸಂತೆ ಮೈದಾನ ಮತ್ತಿತರ ಕಡೆ ಹರಡುತ್ತಿರುವ ಚಿಕುನ್‌ಗುನ್ಯ ಮತ್ತು ಡೆಂಗೆ ರೋಗ ತಡೆಯಲು ನಮಗಸಭೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆ ಭಾಗದ ನಿವಾಸಿಗಳು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರಿಗೆ ಮನವಿ ನೀಡಿ ಆಗ್ರಹಿಸಿದರು.
Vijaya Karnataka Web request to control dengue chikungunya
ಡೆಂಗೆ, ಚಿಕೂನ್‌ಗುನ್ಯ ನಿಯಂತ್ರಿಸಲು ಮನವಿ


ಸಿಪಿಐ ಮುಖಂಡ ರಘ ನೇತೃತ್ವದಲ್ಲಿ ಶುಕ್ರವಾರ ಡಿಸಿ ಶ್ರೀರಂಗಯ್ಯ ಅವರನ್ನು ಭೇಟಿಯಾದ ನಿವಾಸಿಗಳು ಬಡಾವಣೆ ಜನರ ಸಂಕಷ್ಟ ತೆರೆದಿಟ್ಟರು.ತಮಿಳು ಕಾಲೊನಿ, ಎಕೆ ಕಾಲೊನಿ, ಸಂತೆ ಮೈದಾನದ ಸುತ್ತ ಮುತ್ತ ಕೊಳಚೆ ನೀರು ಹರಿಯುತ್ತಿದೆ. ಸಂತೆ ತ್ಯಾಜ್ಯವನ್ನೆಲ್ಲಾ ತಂದು ಸುರಿಯುತ್ತಿದ್ದು ಇದರಿಂದ ಇಡೀ ಪ್ರದೇಶವೆ ಮಲಿನವಾಗಿ ಕಾಯಿಲೆಗಳು ಹರಡಲು ಕಾರಣವಾಗಿದೆ. ಈಗಾಗಲೇ ಈ ಭಾಗದಲ್ಲಿ ಒಬ್ಬ ವ್ಯಕ್ತಿ ಡೆಂಗೆಯಿಂದ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನ ಚಿಕುನ್‌ ಗುನ್ಯ ಮತ್ತು ಡೆಂಗೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮೂರು ಬಡಾವಣೆಯಲ್ಲಿ ಸುಚಿತ್ವ ಕಾಪಾಡಲು ನಗರಸಭೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ