ಚಿಕ್ಕಮಗಳೂರು: ಸಿರವಾಸೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ರು ಹಾಗೂ ನಿರ್ದೇಶಕರು ಶಾಸಕ ಸಿ.ಟಿ.ರವಿ ಅವರಿಗೆ ಮನವಿ ಸಲ್ಲಿಸಿ ಸಂಘದ ಮೇಲಂತಸ್ಥಿನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಆಗ್ರಹಿಸಿದರು.
ಅಧ್ಯಕ್ಷ ಕಳವಾಸೆ ರವಿ ಮಾತನಾಡಿ, ಕಳೆದ 6 ದಶಕದಿಂದ ಇಲ್ಲಿನ ಸುತ್ತಮುತ್ತ ರೈತರು, ಕೃಷಿಕರಿಗೆ ಸಹಕಾರಿ ಯಾಗಿರುವ ಈ ಬ್ಯಾಂಕ್ಗೆ ಸ್ವಂತ ಕಟ್ಟಡವಿದ್ದು ಕೆಳ ಅಂತಸ್ಥಿನಲ್ಲಿ ಕಚೇರಿ ಮತ್ತು ಗೊಬ್ಬರದ ಗೋಡೌನ್ ಹೊಂದಿದೆ.ಆದರೆ, ರೈತರು ಮತ್ತು ಕೃಷಿಕರೊಂದಿಗೆ ಯಾವುದೆ ಸಭೆ ಸಮಾರಂಭ ನಡೆಸಲು ಸಭಾಂಗಣ ಇಲ್ಲ. ಇದಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡಿದರೆ ಬಹಳ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಸಿರವಾಸೆ ಸುತ್ತಮುತ್ತ ಮಳೆಗಾಲದಲ್ಲಿ ಮರಗಳು ಉರುಳಿ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಮಲ್ಲಂದೂರಿನಿಂದ ಸಿರವಾಸೆ ವರೆಗಿನ ವಿದ್ಯುತ್ ಲೈನಿನಲ್ಲಿರುವ ಎಲ್ಲ ಅಡೆತಡೆಗಳನ್ನು ತೆಗೆದು ಅನುಕೂಲಮಾಡಿಕೊಡಲು ಸೂಚಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಉಪಾಧ್ಯಕ್ಷೆ ಪ್ರೇಮಾಕ್ಷಿ ಅಮೀನ್, ನಿರ್ದೇಶಕರಾದ ಬಿ.ಪಿ.ಪ್ರಸನ್ನ, ಎಂ.ಕೆ.ನರೇಂದ್ರ, ನಂದೀಶ್, ಸಾವಿತ್ರಿ, ಜಗದೀಶ್, ದೇವರಾಜ್,P ಾರ್ಯನಿರ್ವಹಣಾಧಿಕಾರಿ ರಾಜೇಶ್ ಇತರರು ಹಾಜರಿದ್ದರು.
ಅಧ್ಯಕ್ಷ ಕಳವಾಸೆ ರವಿ ಮಾತನಾಡಿ, ಕಳೆದ 6 ದಶಕದಿಂದ ಇಲ್ಲಿನ ಸುತ್ತಮುತ್ತ ರೈತರು, ಕೃಷಿಕರಿಗೆ ಸಹಕಾರಿ ಯಾಗಿರುವ ಈ ಬ್ಯಾಂಕ್ಗೆ ಸ್ವಂತ ಕಟ್ಟಡವಿದ್ದು ಕೆಳ ಅಂತಸ್ಥಿನಲ್ಲಿ ಕಚೇರಿ ಮತ್ತು ಗೊಬ್ಬರದ ಗೋಡೌನ್ ಹೊಂದಿದೆ.ಆದರೆ, ರೈತರು ಮತ್ತು ಕೃಷಿಕರೊಂದಿಗೆ ಯಾವುದೆ ಸಭೆ ಸಮಾರಂಭ ನಡೆಸಲು ಸಭಾಂಗಣ ಇಲ್ಲ. ಇದಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡಿದರೆ ಬಹಳ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಸಿರವಾಸೆ ಸುತ್ತಮುತ್ತ ಮಳೆಗಾಲದಲ್ಲಿ ಮರಗಳು ಉರುಳಿ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಮಲ್ಲಂದೂರಿನಿಂದ ಸಿರವಾಸೆ ವರೆಗಿನ ವಿದ್ಯುತ್ ಲೈನಿನಲ್ಲಿರುವ ಎಲ್ಲ ಅಡೆತಡೆಗಳನ್ನು ತೆಗೆದು ಅನುಕೂಲಮಾಡಿಕೊಡಲು ಸೂಚಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಉಪಾಧ್ಯಕ್ಷೆ ಪ್ರೇಮಾಕ್ಷಿ ಅಮೀನ್, ನಿರ್ದೇಶಕರಾದ ಬಿ.ಪಿ.ಪ್ರಸನ್ನ, ಎಂ.ಕೆ.ನರೇಂದ್ರ, ನಂದೀಶ್, ಸಾವಿತ್ರಿ, ಜಗದೀಶ್, ದೇವರಾಜ್,P ಾರ್ಯನಿರ್ವಹಣಾಧಿಕಾರಿ ರಾಜೇಶ್ ಇತರರು ಹಾಜರಿದ್ದರು.