ಆ್ಯಪ್ನಗರ

ಸಿರವಾಸೆ ಸೊಸೈಟಿಯಿಂದ ಶಾಸಕರಿಗೆ ಮನವಿ

ಸಿರವಾಸೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ರು ಹಾಗೂ ನಿರ್ದೇಶಕರು ಶಾಸಕ ಸಿ.ಟಿ.ರವಿ ಅವರಿಗೆ ಮನವಿ ಸಲ್ಲಿಸಿ ಸಂಘದ ಮೇಲಂತಸ್ಥಿನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಆಗ್ರಹಿಸಿದರು.

Vijaya Karnataka 6 Jun 2019, 5:00 am
ಚಿಕ್ಕಮಗಳೂರು: ಸಿರವಾಸೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ರು ಹಾಗೂ ನಿರ್ದೇಶಕರು ಶಾಸಕ ಸಿ.ಟಿ.ರವಿ ಅವರಿಗೆ ಮನವಿ ಸಲ್ಲಿಸಿ ಸಂಘದ ಮೇಲಂತಸ್ಥಿನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಆಗ್ರಹಿಸಿದರು.
Vijaya Karnataka Web request to mla from the sirivase society
ಸಿರವಾಸೆ ಸೊಸೈಟಿಯಿಂದ ಶಾಸಕರಿಗೆ ಮನವಿ


ಅಧ್ಯಕ್ಷ ಕಳವಾಸೆ ರವಿ ಮಾತನಾಡಿ, ಕಳೆದ 6 ದಶಕದಿಂದ ಇಲ್ಲಿನ ಸುತ್ತಮುತ್ತ ರೈತರು, ಕೃಷಿಕರಿಗೆ ಸಹಕಾರಿ ಯಾಗಿರುವ ಈ ಬ್ಯಾಂಕ್‌ಗೆ ಸ್ವಂತ ಕಟ್ಟಡವಿದ್ದು ಕೆಳ ಅಂತಸ್ಥಿನಲ್ಲಿ ಕಚೇರಿ ಮತ್ತು ಗೊಬ್ಬರದ ಗೋಡೌನ್‌ ಹೊಂದಿದೆ.ಆದರೆ, ರೈತರು ಮತ್ತು ಕೃಷಿಕರೊಂದಿಗೆ ಯಾವುದೆ ಸಭೆ ಸಮಾರಂಭ ನಡೆಸಲು ಸಭಾಂಗಣ ಇಲ್ಲ. ಇದಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡಿದರೆ ಬಹಳ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಸಿರವಾಸೆ ಸುತ್ತಮುತ್ತ ಮಳೆಗಾಲದಲ್ಲಿ ಮರಗಳು ಉರುಳಿ ವಿದ್ಯುತ್‌ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಮಲ್ಲಂದೂರಿನಿಂದ ಸಿರವಾಸೆ ವರೆಗಿನ ವಿದ್ಯುತ್‌ ಲೈನಿನಲ್ಲಿರುವ ಎಲ್ಲ ಅಡೆತಡೆಗಳನ್ನು ತೆಗೆದು ಅನುಕೂಲಮಾಡಿಕೊಡಲು ಸೂಚಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಉಪಾಧ್ಯಕ್ಷೆ ಪ್ರೇಮಾಕ್ಷಿ ಅಮೀನ್‌, ನಿರ್ದೇಶಕರಾದ ಬಿ.ಪಿ.ಪ್ರಸನ್ನ, ಎಂ.ಕೆ.ನರೇಂದ್ರ, ನಂದೀಶ್‌, ಸಾವಿತ್ರಿ, ಜಗದೀಶ್‌, ದೇವರಾಜ್‌,P ಾರ್ಯನಿರ್ವಹಣಾಧಿಕಾರಿ ರಾಜೇಶ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ