ಆ್ಯಪ್ನಗರ

ಗೌರಿ ಕಾಲುವೆಗೆ ನೀರು ಪೂರೈಕೆಗೆ ಮನವಿ

ನಗರದ ವಾರ್ಡ್‌ ನಂ.30-31ರ ಗೌರಿ ಕಾಲುವೆ ಬಡಾವಣೆಗೆ ಸಮರ್ಪಕ ನೀರು ಪೂರೈಕೆ ಮಾಡಲು ನಗರಸಭೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಸಯದ್‌ ಜಮೀಲ್‌ ಅಹ್ಮದ್‌ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Vijaya Karnataka 14 Aug 2019, 5:00 am
ಚಿಕ್ಕಮಗಳೂರು: ನಗರದ ವಾರ್ಡ್‌ ನಂ.30-31ರ ಗೌರಿ ಕಾಲುವೆ ಬಡಾವಣೆಗೆ ಸಮರ್ಪಕ ನೀರು ಪೂರೈಕೆ ಮಾಡಲು ನಗರಸಭೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಸಯದ್‌ ಜಮೀಲ್‌ ಅಹ್ಮದ್‌ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
Vijaya Karnataka Web request water supply to gauri canal
ಗೌರಿ ಕಾಲುವೆಗೆ ನೀರು ಪೂರೈಕೆಗೆ ಮನವಿ


ಗೌರಿ ಕಾಲುವೆ ಬಡಾವಣೆಗೆ ಈ ಹಿಂದೆ ವಾರದಲ್ಲಿ 2 ದಿನ ನೀರು ಬರುತ್ತಿತ್ತು. ಆದರೆ ಈಗ 10 ದಿನಗಳಿಗೊಮ್ಮೆ ನೀರು ಪೂರೈಸುತ್ತಿದ್ದಾರೆ. ನೀರು ಗಂಟಿ ಕೇಳಿದರೆ ಬೋರ್‌ವೆಲ್‌ ಮೋಟರ್‌ ಹಾಳಾಗಿದೆ ಎಂದು ಸಬೂಬು ಹೇಳುತ್ತಾರೆ. ನಗರಸಭೆಗೆ ದೂರು ನೀಡಿದರೆ ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ ವಿನಃ ಸರಿಪಡಿಸಿಲ್ಲ. ಮಳೆಗಾಲದಲ್ಲೂ ನಮಗೆ ಕುಡಿವ ನೀರು ಪಡೆಯುವ ಭಾಗ್ಯ ಇಲ್ಲದಂತಾಗಿದೆ. ಸಂಬಂಧಪಟ್ಟ ಎಂಜಿನಿಯರ್‌ ನಮಗೆ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧ ಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿ ನಮಗೆ ವಾರದಲ್ಲಿ 2 ದಿನವಾದರೂ ನೀರು ಪೂರೈಕೆ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ