ಆ್ಯಪ್ನಗರ

ಗುರು ನಮನÜ ಎಲ್ಲರ ಕರ್ತವ್ಯ

ಆಷಾಢ ಮಾಸದ ಶುಕ್ಲ ಪಕ್ಷ ಹುಣ್ಣಿಮೆಗೆ ವ್ಯಾಸ ಪೂರ್ಣಿಮೆ ಅಥವಾ ಗುರುಪೂರ್ಣಿಮೆ ಎನ್ನಲಾಗುತ್ತದೆ, ಭಗವಾನ್‌ ವ್ಯಾಸ ಮಹರ್ಷಿಗಳನ್ನು ಆದಿ ಗುರು ಎಂದು ಪೂಜಿಸುತ್ತೇವೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹೇಳಿದರು.

Vijaya Karnataka 17 Jul 2019, 6:25 pm
ಶೃಂಗೇರಿ : ಆಷಾಢ ಮಾಸದ ಶುಕ್ಲ ಪಕ್ಷ ಹುಣ್ಣಿಮೆಗೆ ವ್ಯಾಸ ಪೂರ್ಣಿಮೆ ಅಥವಾ ಗುರುಪೂರ್ಣಿಮೆ ಎನ್ನಲಾಗುತ್ತದೆ, ಭಗವಾನ್‌ ವ್ಯಾಸ ಮಹರ್ಷಿಗಳನ್ನು ಆದಿ ಗುರು ಎಂದು ಪೂಜಿಸುತ್ತೇವೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹೇಳಿದರು.
Vijaya Karnataka Web respect to guru is everyones duty
ಗುರು ನಮನÜ ಎಲ್ಲರ ಕರ್ತವ್ಯ


ಅವರು ಶ್ರೀಮಠದ ಗುರುಭವನದಲ್ಲಿ ಮಂಗಳವಾರ ಚಾತುರ್ಮಾಸ್ಯ ವ್ರತದ ಸಂದೇಶ ನೀಡಿ ಆಶೀರ್ವಚನ ನೀಡಿದರು. ಗುರುಪೂರ್ಣಿಮೆಯಂದು ವ್ಯಾಸ ಮಹರ್ಷಿಗಳನ್ನು ಆರಾಧಿಸಬೇಕು. ಭಾರತೀಯ ಸಂಸ್ಕೃತಿಯ ಶ್ರೇಷ್ಠ ಆದ್ಯಾತ್ಮ ಮೌಲ್ಯಗಳನ್ನು ಎತ್ತಿ ಹಿಡಿದ ಮಹಾನ್‌ ಚೇತನ ವೇದವ್ಯಾಸರು.ಒಂದೇ ಆಗಿದ್ದ ವೇದವನ್ನು ಅಧ್ಯಯನದ ಅನುಕೂಲಕ್ಕಾಗಿ ನಾಲ್ಕು ಭಾಗಗಳನ್ನಾಗಿ ಮಾಡಿ,ಋುಗ್ವೇದ,ಯಜುರ್ವೇದ,ಸಾಮವೇದ ಹಾಗೂ ಅಥರ್ವಣ ವೇದಗಳೆಂದು ವಿಭಾಗಿಸಿದವರೇ ವೇದ ಮಹರ್ಷಿಗಳು. ಬ್ರಹ್ಮ ಸೂತ್ರ,ಭಗವದ್ಗೀತೆ ಉಪನಿಷತ್ತುಗಳನ್ನು ವ್ಯವಸ್ಥಿತವಾಗಿ ನಿರೂಪಿಸಿಕೊಟ್ಟ ಶ್ರೇಯಸ್ಸು ವ್ಯಾಸ ಮಹರ್ಷಿಗಳಾದ್ದಾಗಿದೆ. ಗುರುಗಳನ್ನು ಪೂಜಿಸುವುದು ನಮ್ಮ ಕರ್ತವ್ಯ ಎಂದರು.

ಧರ್ಮ ಮಾರ್ಗದಲ್ಲಿ ನಡೆದರೆ ಸುಖ ಲಭಿಸುತ್ತದೆ. ಅಧರ್ಮ ಮಾರ್ಗದಲ್ಲಿ ನಡೆದರೆ ಕಷ್ಟ ಉಂಟಾಗುತ್ತದೆ.ನಾವು ಯಾರಿಗಾದರೂ ನಮ್ಮ ಕೈಯಲ್ಲಿ ಸಾಧ್ಯವಿರುವಷ್ಟು ಉಪಕಾರ ಮಾಡಬೇಕು.ಉಪದ್ರವ ನೀಡಬಾರದು.ಧರ್ಮಾಚರಣೆ ಮೂಲಕ ನೆಮ್ಮದಿ ಕಂಡುಕೊಳ್ಳಬೇಕು.ಭಗವಂತನ ಆರಾಧನೆಯನ್ನು ಭಕ್ತಿ ಹಾಗೂ ಶ್ರದ್ಧೆಯಿಂದ ಮಾಡಬೇಕು ಎಂದರು. ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ