ಆ್ಯಪ್ನಗರ

ಮುದ್ರಣ ಮಾಧ್ಯಮದಲ್ಲಿ ಸದೃಢತೆ

ಅತಿರೇಕತೆಯ ದೃಶ್ಯಮಾಧ್ಯಮ, ಸುಳ್ಳು,ಸತ್ಯದ ಗೊಂಲದಲ್ಲಿರುವ ಸಾಮಾಜಿಕ ಜಾಲತಾಣದ ಮಧ್ಯೆ ಮುದ್ರಣ ಮಾಧ್ಯಮ ತಮ್ಮ ಸಾಂಪ್ರದಾಯಿಕತೆ ಜತೆಗೆ ಸದೃಢತೆ ಉಳಿಸಿಕೊಡಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ ಹೇಳಿದರು.

Vijaya Karnataka 20 Jul 2019, 5:00 am
ಚಿಕ್ಕಮಗಳೂರು : ಅತಿರೇಕತೆಯ ದೃಶ್ಯಮಾಧ್ಯಮ, ಸುಳ್ಳು,ಸತ್ಯದ ಗೊಂಲದಲ್ಲಿರುವ ಸಾಮಾಜಿಕ ಜಾಲತಾಣದ ಮಧ್ಯೆ ಮುದ್ರಣ ಮಾಧ್ಯಮ ತಮ್ಮ ಸಾಂಪ್ರದಾಯಿಕತೆ ಜತೆಗೆ ಸದೃಢತೆ ಉಳಿಸಿಕೊಡಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ ಹೇಳಿದರು.
Vijaya Karnataka Web CKM-19SHIVU-P1


ಕುವೆಂಪು ಕಲಾಮಂದಿರದ ಹೇಮಾಂಗಣದಲ್ಲಿ ಚಿಕ್ಕಮಗಳೂರು ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗ ಅತಿ ಮುಖ್ಯ. ಇತ್ತೀಚಿನ ದೃಶ್ಯ ಮಾಧ್ಯಮಗಳು ಅತಿರಕತೆ ಪ್ರದರ್ಶಿಸಿದರೆ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ,ಸತ್ಯದ ಗೊಂದಲವಿರುತ್ತದೆ. ಆದರೆ, ಮುದ್ರಣ ಮಾಧ್ಯಮ ತನ್ನ ಸಾಂಪ್ರದಾಯಿಕತೆ ಜತೆಗೆ ಘನತೆ ಉಳಿಸಿಕೊಂಡಿದೆ. ಅದು ಮತ್ತಷ್ಟು ಸದೃಢವಾಗುವ ಅಗತ್ಯತೆ ಇದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಕೃಷ್ಣಪ್ಪ ಮಾತನಾಡಿ,ಪತ್ರಕರ್ತರು ನಿರ್ಭಯವಾಗಿ ಕೆಲಸ ಮಾಡಬೇಕು. ಸದೃಢ ಸಮಾಜ ನಿರ್ಮಾಣದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು. ಸಂಘದ ಅಧ್ಯಕ್ಷ ಟಿಎನ್‌ಎ ಮೊದಲಿಯಾರ್‌ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಕಾರ್ಯದರ್ಶಿ ಪಿ.ರಾಜೇಶ್‌ ಪ್ರಾಸ್ತಾವಿಸಿದರು. ಪತ್ರಕರ್ತ ಅನಂತನಾಡಿಗ್‌, ಜೆ.ಚನ್ನಕೇಶವ, ವರದರಾಜ್‌ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಯೋಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ. ಜಿ.ಪಂ.ಸದಸ್ಯೆ ಜಸಂತಾ, ಸಂಘದ ಗೌರವಾಧ್ಯಕ್ಷ ಬಿ.ತಿಪ್ಪೇರುದ್ರಪ್ಪ ಹಾಜರಿದ್ದರು. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಸರಕಾರಿ ಸಹಾಯಕ ಅಭಿಯೋಜಕ ರಾಘವೇಂದ್ರ ರಾಯ್ಕರ್‌ ಉಪನ್ಯಾಸ ನೀಡಿದರು.

========================
ದೇಶದಲ್ಲಿ ಅನೇಕ ಜಾತಿ, ಧರ್ಮಗಳಿವೆ ಅದಕ್ಕೆ ಅದರದ್ದೇ ಧರ್ಮ ಗ್ರಂಥಗಳಿವೆ. ಆದರೆ, ಭಾರತೀಯರಾದ ನಮಗೆ ಸಂವಿಧಾನವೇ ಧರ್ಮಗ್ರಂಥ. ಕಾನೂನುಗಳ ತಾಯಿ ಅದು. ಸಂವಿಧಾನದ 3 ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಜತೆಗೆ ಪತ್ರಿಕಾ ರಂಗ 4 ನೇ ಅಂಗವಾಗಿದೆ. ಪತ್ರಿಕಾ ರಂಗ ಇರುವುದು ಹಣಗಳಿಕೆಗಲ್ಲ. ಸಮಾಜದ ಓರೆಕೋರೆಗಳನ್ನು ತಿದ್ದಲು. ಪತ್ರಿಕಾ ಹಕ್ಕನ್ನು ಬಹಳ ಜಾಗೃತಿಯಿಂದ ಬಳಸಬೇಕಿದೆ. ಒಂದು ಕತ್ತಿಯಿಂದ ಕೆಲವೇ ಜನರನ್ನು ಗಾಯಗೊಳಿಸಬಹುದು. ಆದರೆ, ಪೆನ್ನೆಂಬ ಕತ್ತಿಯಿಂದ ಅನೇಕರನ್ನು ಗಾಯಗೊಳಿಸಬಹುದು. ಆದರೆ, ಗಾಯಗೊಳಿಸುವ ಕೆಲಸ ಆಗಬಾರದು ಬರಿ ಎಚ್ಚರಿಸಬೇಕು.
-ಬಸವರಾಜ್‌ ಚೇಂಗಟಿ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ