ಆ್ಯಪ್ನಗರ

ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಶಿಕ್ಷ ಕರ ಪಾತ್ರ ಮಹತ್ವದ್ದು

ಸರಕಾರಿ ಪ್ರೌಢಶಾಲೆಯಾಗಿದ್ದರೂ ಕರ್ತವ್ಯಕ್ಕೆ ಆದ್ಯತೆ ನೀಡಿದ್ದರಿಂದ ಶಾಲೆಯಲ್ಲಿ ಬಹುತೇಕ ಎಲ್ಲ ಸೌಲಭ್ಯ ಹೊಂದಿದೆ ಎಂದು ಬಸರಿಕಟ್ಟೆ ಸದ್ಗುರು ಪ್ರೌಢಶಾಲೆಯ ಆಡಳಿತ ಮಂಡಳಿ ಸದಸ್ಯ ಕೋಟೇತೋಟ ವಿಜಯರಂಗ ಹೇಳಿದರು.

Vijaya Karnataka 16 Jun 2019, 5:00 am
ಶೃಂಗೇರಿ: ಸರಕಾರಿ ಪ್ರೌಢಶಾಲೆಯಾಗಿದ್ದರೂ ಕರ್ತವ್ಯಕ್ಕೆ ಆದ್ಯತೆ ನೀಡಿದ್ದರಿಂದ ಶಾಲೆಯಲ್ಲಿ ಬಹುತೇಕ ಎಲ್ಲ ಸೌಲಭ್ಯ ಹೊಂದಿದೆ ಎಂದು ಬಸರಿಕಟ್ಟೆ ಸದ್ಗುರು ಪ್ರೌಢಶಾಲೆಯ ಆಡಳಿತ ಮಂಡಳಿ ಸದಸ್ಯ ಕೋಟೇತೋಟ ವಿಜಯರಂಗ ಹೇಳಿದರು.
Vijaya Karnataka Web CKM-11SRI1


ಅಡ್ಡಗದ್ದೆ ಗ್ರಾಪಂ ಯ ತೊರೆಹಡ್ಲು ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿದ್ಯಾನಿಧಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಾಲೆಯು ಉತ್ತಮ ಪ್ರಯೋಗಶಾಲೆ, ಸಭಾಭವನ ಸಹಿತ ಅನೇಕ ಸೌಲಭ್ಯ ಹೊಂದಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಶಿಕ್ಷ ಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಜಿಪಂ ಮಾಜಿ ಸದಸ್ಯೆ ಪುಷ್ಪಾಲಕ್ಷ್ಮೀನಾರಾಯಣ ಮಾತನಾಡಿ, ಶಾಲೆಯಲ್ಲಿ ಬಹುತೇಕ ಎಲ್ಲ ಸೌಲಭ್ಯವೂ ದೊರಕುತ್ತಿದ್ದು,ದಾನಿಗಳ ಸಹಕಾರದಿಂದ ಪ್ರತಿ ವರ್ಷ ಎಲ್ಲ ವಿದ್ಯಾರ್ಥಿಗಳಿಗೂ ನೋಟ್‌ ಪುಸ್ತಕ ದೊರಕುತ್ತಿದೆ. ಪೋಷಕರು,ಶಿಕ್ಷ ಕರು ನಿಮ್ಮ ಉತ್ತಮ ಫಲಿತಾಂಶಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಪ್ರತಿ ದಿನವೂ ಪಠ್ಯ ಕ್ರಮವನ್ನು ಅಭ್ಯಾಸ ಮಾಡಿ,ಅಂದಿನ ಪಾಠವನ್ನು ಅಂದೇ ಓದಿ ಮನದಟ್ಟು ಮಾಡಿಕೊಂಡರೆ ಪರೀಕ್ಷೆ ಕಷ್ಟವಾಗುವುದಿಲ್ಲ ಎಂದರು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತಿರ್ಣರಾದ 19 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ವಿದ್ಯಾನಿಧಿ ಯೋಜನೆಯಡಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ವಿತರಿಸಲಾಯಿತು.ವಿಜಯ ಕರ್ನಾಟಕ ವಿದ್ಯಾರ್ಥಿ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಾಕೋಡು ಗಣಪತಿ ಅಧ್ಯಕ್ಷ ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರಾದ ಬಿ.ಜಿ.ಮಂಜುನಾಥ್‌,ಬಾಬು ನಾಯ್ಕ್‌,ಕೃಷ್ಣವೇಣಿ,ಧರ್ಮಪ್ಪಗೌಡ,ವೆಂಕಟೇಶಭಟ್ಟ,ಕೃಷ್ಣ,ಗೋಪಾಲಕೃಷ್ಣ,ಅಶೋಕ್‌,ಶಾಲಾ ಮುಖ್ಯ ಶಿಕ್ಷಕ ಬಸವಂತಪ್ಪ ಉಪಸ್ಥಿತರಿದ್ದರು. ದತ್ತಾತ್ರೇಯ.ವಿ.ಯಾಜಿ ಸ್ವಾಗತಿಸಿದರು.ಗುರುಮೂರ್ತಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ