ಆ್ಯಪ್ನಗರ

ಮಳೆಗಾಗಿ ಬಲ್ಲಾಳೇಶ್ವರನಿಗೆ ರುದ್ರಹೋಮ

ಇತಿಹಾಸ ಪ್ರಸಿದ್ಧ ಅಯ್ಯನಕೆರೆ ದಂಡೆಯಲ್ಲಿರುವ ಬಲ್ಲಾಳೇಶ್ವರ ಸ್ವಾಮಿಗೆ ಭಾನುವಾರ ಹೋಮ ಮತ್ತು ಅಭಿಷೇಕ ನಡೆಯಿತು.

Vijaya Karnataka 29 Jul 2019, 5:00 am
ಸಖರಾಯಪಟ್ಟಣ : ಇತಿಹಾಸ ಪ್ರಸಿದ್ಧ ಅಯ್ಯನಕೆರೆ ದಂಡೆಯಲ್ಲಿರುವ ಬಲ್ಲಾಳೇಶ್ವರ ಸ್ವಾಮಿಗೆ ಭಾನುವಾರ ಹೋಮ ಮತ್ತು ಅಭಿಷೇಕ ನಡೆಯಿತು.
Vijaya Karnataka Web CKM-28ONKAR1


ಮೂರು ದಿನಗಳಿಂದ ಬಲ್ಲಾಳೇಶ್ವರನಿಗೆ ವಿವಿಧ ಹೋಮಗಳು ನಡೆದಿದ್ದು, ಭಾನುವಾರ ಪುರೋಹಿತರಾದ ಸುಬ್ರಹ್ಮಣ್ಯಭಟ್ಟ ಮತ್ತು ಕೈಲಾಸ ರ ನೇತೃತ್ವದಲ್ಲಿ ರುದ್ರಹೋಮ ನಡೆಯಿತು. ಬೆಳಗ್ಗೆಯಿಂದಲೇ ಬಲ್ಲಾಳೇಶ್ವರ ಲಿಂಗುವಿಗೆ ಸಾವಿದ ಒಂದು ಕೊಡ ನೀರನ್ನು ಹೊತ್ತು ತಂದು ಅಭಿಷೇಕ ಮಾಡಲಾಯಿತು. ಕೆರೆಯಲ್ಲಿ ಪರ್ಜನ್ಯಜಪ ಮಾಡಿದರು.

ಪುರೋಹಿತ ವೇದಮೂರ್ತಿ ಸುಬ್ರಹ್ಮಣ್ಯಭಟ್ಟ ಮಾತನಾಡಿ, ಮೂರು ದಿನಗಳಿಂದ 30 ಋುಗ್ವಿಜರು ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ. ಪ್ರತೀ ವರ್ಷದಂತೆ ಈ ವರ್ಷವೂ ಕೆರೆ ತುಂಬಿ ಎಲ್ಲರೂ ಸಮೃದ್ಧಿಯಾಗುವ ನಂಬಿಕೆ ಇದೆ ಎಂದರು.

ಈ ಸಂದರ್ಭ ಭಕ್ತರು ಭಜನೆ ಮಾಡುವ ಮೂಲಕ ಮಳೆಯನ್ನು ಕರೆಯಲಾಯಿತು. ದೇವಾಲಯ ಸಮಿತಿಯವರು, ಭಕ್ತರು, ಅಚ್ಚುಕಟ್ಟದಾರರು ಭಾಗವಹಿಸಿದ್ದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ