ಕಡೂರು: ಕಾಂಗ್ರೆಸ್ನ ಘಟಾನುಘಟಿಗಳ ಸೋಲಿಗೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರೇ ಕಾರಣ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆಪಾದಿಸಿದರು.
ಅವರು ಕಡೂರು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ದ ಘಟಾನು ಘಟಿ ನಾಯಕರಾದ ಎಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ,ಮುನಿಯಪ್ಪರಂತಹವರಿಗೂ ಜನ ಸೋಲಿನ ರುಚಿ ತೋರಿಸಿದ್ದಾರೆ. ಇವರೆಲ್ಲರ ಸೋಲಿಗೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರೇ ಕಾರಣ. ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸಲು ಲಾಯಕ್ಕಿಲ್ಲದಂತಾಗಿದೆ. ಇವರಲ್ಲಿ ನೈತಿಕತೆ ಇದ್ದರೆ ಕೂಡಲೇ ರಾಜಿನಾಮೆ ನೀಡಲಿ ಎಂದರು.
ಅನವಶ್ಯಕವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವಾಗಿ ಕೀಳು ಮಟ್ಟದಲ್ಲಿ ವ್ಯಂಗ್ಯವಾಗಿ ಮಾತನಾಡುತ್ತಿದ್ದುದನ್ನು ರಾಜ್ಯದ ಜನತೆ ಸೂಕ್ಷ ್ಮವಾಗಿ ಗಮನಿಸಿ ಪ್ರತ್ಯುತ್ತರ ನೀಡಿದ್ದಾರೆ ಎಂದರು.
ಕುಮಾರಸ್ವಾಮಿ ಮಂಡ್ಯದಲ್ಲಿ ಸುಮಲತಾ ಅವರಿಗೆ ಎಷ್ಟು ಕಷ್ಟ ನೀಡಿದರು ಎಂಬುದು ರಾಜ್ಯ, ದೇಶದ ಜನರಿಗೆ ಗೊತ್ತಿದೆ. ರಾಜ್ಯದ ಜನತೆ ಬಿಜೆಪಿ ಸರಕಾರ ಬರಲೆಂದು ಈ ಚುನಾವಣೆಯಲ್ಲಿ ಶಕ್ತಿ ನೀಡಿದ್ದಾರೆ ಎಂದರು.
ರೈಲ್ವೆ, ಹೈವೇ ರಸ್ತೆಗಳು ಮತ್ತು ಪ್ರವಾಸೋದ್ಯಮ ಬೆಳೆಸಲು ಚಿಂತನೆ ಇದೆ. ನನೆÜಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಜತೆಗೆ ರಾಜ್ಯದಲ್ಲಿ ಪಕ್ಷ ಕ್ಕೆ ಶಕ್ತಿ ತುಂಬಲು ನಿರಂತರ ಪ್ರಯತ್ನ ಮಾಡಲಾಗುವುದು ಎಂದರು. ಶಾಸಕ ಬೆಳ್ಳಿಪ್ರಕಾಶ್, ಬಿ.ಎಲ್. ಶ್ರೀನಿವಾಸ್, ಚಿಕ್ಕದೇವನೂರು ರವಿ, ಎಪಿಎಂಸಿ ನಿರ್ದೇಶಕ ರವಿಕುಮಾರ್, ಚಿನ್ನರಾಜು, ಎಪಿಎಂಸಿ ಮಾಜಿ ನಿರ್ದೇಶಕ ಸತೀಶ್ , ನಿ.ಶಿಕ್ಷ ಕ ಲಕ್ಕಪ್ಪ, ಶಾಮಿಯಾನ ಚಂದ್ರು ಹಾಗೂ ಕಾರ್ಯಕರ್ತರು ಇದ್ದರು.
ಅವರು ಕಡೂರು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ದ ಘಟಾನು ಘಟಿ ನಾಯಕರಾದ ಎಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ,ಮುನಿಯಪ್ಪರಂತಹವರಿಗೂ ಜನ ಸೋಲಿನ ರುಚಿ ತೋರಿಸಿದ್ದಾರೆ. ಇವರೆಲ್ಲರ ಸೋಲಿಗೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರೇ ಕಾರಣ. ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸಲು ಲಾಯಕ್ಕಿಲ್ಲದಂತಾಗಿದೆ. ಇವರಲ್ಲಿ ನೈತಿಕತೆ ಇದ್ದರೆ ಕೂಡಲೇ ರಾಜಿನಾಮೆ ನೀಡಲಿ ಎಂದರು.
ಅನವಶ್ಯಕವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವಾಗಿ ಕೀಳು ಮಟ್ಟದಲ್ಲಿ ವ್ಯಂಗ್ಯವಾಗಿ ಮಾತನಾಡುತ್ತಿದ್ದುದನ್ನು ರಾಜ್ಯದ ಜನತೆ ಸೂಕ್ಷ ್ಮವಾಗಿ ಗಮನಿಸಿ ಪ್ರತ್ಯುತ್ತರ ನೀಡಿದ್ದಾರೆ ಎಂದರು.
ಕುಮಾರಸ್ವಾಮಿ ಮಂಡ್ಯದಲ್ಲಿ ಸುಮಲತಾ ಅವರಿಗೆ ಎಷ್ಟು ಕಷ್ಟ ನೀಡಿದರು ಎಂಬುದು ರಾಜ್ಯ, ದೇಶದ ಜನರಿಗೆ ಗೊತ್ತಿದೆ. ರಾಜ್ಯದ ಜನತೆ ಬಿಜೆಪಿ ಸರಕಾರ ಬರಲೆಂದು ಈ ಚುನಾವಣೆಯಲ್ಲಿ ಶಕ್ತಿ ನೀಡಿದ್ದಾರೆ ಎಂದರು.
ರೈಲ್ವೆ, ಹೈವೇ ರಸ್ತೆಗಳು ಮತ್ತು ಪ್ರವಾಸೋದ್ಯಮ ಬೆಳೆಸಲು ಚಿಂತನೆ ಇದೆ. ನನೆÜಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಜತೆಗೆ ರಾಜ್ಯದಲ್ಲಿ ಪಕ್ಷ ಕ್ಕೆ ಶಕ್ತಿ ತುಂಬಲು ನಿರಂತರ ಪ್ರಯತ್ನ ಮಾಡಲಾಗುವುದು ಎಂದರು. ಶಾಸಕ ಬೆಳ್ಳಿಪ್ರಕಾಶ್, ಬಿ.ಎಲ್. ಶ್ರೀನಿವಾಸ್, ಚಿಕ್ಕದೇವನೂರು ರವಿ, ಎಪಿಎಂಸಿ ನಿರ್ದೇಶಕ ರವಿಕುಮಾರ್, ಚಿನ್ನರಾಜು, ಎಪಿಎಂಸಿ ಮಾಜಿ ನಿರ್ದೇಶಕ ಸತೀಶ್ , ನಿ.ಶಿಕ್ಷ ಕ ಲಕ್ಕಪ್ಪ, ಶಾಮಿಯಾನ ಚಂದ್ರು ಹಾಗೂ ಕಾರ್ಯಕರ್ತರು ಇದ್ದರು.